ಆ್ಯಪ್ನಗರ

ಕೊಪ್ಪಳ ಗಡಿಯಲ್ಲಿ ಕೊರೊನಾ ಸೋಂಕು ಭೀತಿ

ಹೊಸಪೇಟೆಯಲ್ಲಿ ಮೂವರಿಗೆ ಕೊರೊನಾ ವೈರಸ್‌ ದೃಢಪಡುತ್ತಿದ್ದಂತೆ, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆಮಾಡಿದೆ. ಹೊಸಪೇಟೆಯಿಂದ ಹಲವು ಕಾರ್ಮಿಕರು ಚೆಕ್‌ ಪೋಸ್ಟ್‌ ಕಣ್ತಪ್ಪಿಸಿ ನಡೆದುಕೊಂಡು ಬಂದು ನಂತರ, ವಾಹನ ಏರಿ ಕೊಪ್ಪಳ ತಲುಪುತ್ತಿದ್ದಾರೆ.

Vijaya Karnataka Web 1 Apr 2020, 7:34 am
ಕೊಪ್ಪಳ: ಜಿಲ್ಲೆಯ ಗಡಿಭಾಗದಿಂದ ಬರೀ 8-10 ಕಿ.ಮೀ. ಅಂತರದ ಹೊಸಪೇಟೆಯಲ್ಲಿ ಮೂವರಿಗೆ ಕೊರೊನಾ ವೈರಸ್‌ ದೃಢಪಡುತ್ತಿದ್ದಂತೆ ಜಿಲ್ಲೆಯ ಜನತೆಯಲ್ಲಿಆತಂಕ ಮನೆಮಾಡಿದೆ.
Vijaya Karnataka Web coronavirus


ಬಳ್ಳಾರಿ ಜಿಲ್ಲೆಗೆ ಹೊಸಪೇಟೆ ಸೇರಿದ್ದರೂ ಕೊಪ್ಪಳದ ಜತೆ ಬಾಂಧವ್ಯ ಹೊಂದಿದೆ. ವ್ಯಾಪಾರ, ವಹಿವಾಟಿನಲ್ಲೂ ನಂಟಿದೆ. ಈ ಭಾಗದ ಕೈಗಾರಿಕೆ, ವ್ಯಾಪಾರ ಹಾಗೂ ಸರಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹೊಸಪೇಟೆಯಲ್ಲಿ ಮನೆ ಮಾಡಿದ್ದಾರೆ. ಹೊಸಪೇಟೆಯಲ್ಲಿ ಕೆಲಸ ನಿರ್ವಹಿಸುವ ಅನೇಕರು ಕೊಪ್ಪಳದಲ್ಲಿ ವಾಸವಾಗಿದ್ದಾರೆ. ಹೊಸಪೇಟೆಯಿಂದ ಹಲವು ಕಾರ್ಮಿಕರು ಚೆಕ್‌ ಪೋಸ್ಟ್‌ ಕಣ್ತಪ್ಪಿಸಿ ನಡೆದುಕೊಂಡು ಬಂದು ನಂತರ ವಾಹನ ಏರಿ ಕೊಪ್ಪಳ ತಲುಪುತ್ತಿದ್ದಾರೆ.

ಜಿಲ್ಲೆಗೆ ಈವರೆಗೆ ವಿದೇಶದಿಂದ ಆಗಮಿಸಿದ 79 ಜನರ ಮೇಲೆ ನಿಗಾ ವಹಿಸಲಾಗಿದೆ. ಈ ಪೈಕಿ 45 ಜನರು 14 ದಿನದ ನಿಗಾ ಪೂರ್ಣಗೊಳಿಸಿದ್ದಾರೆ. 17 ಜನ, 28 ದಿನದ ಐಸೋಲೇಶನ್‌ ಪೂರ್ಣಗೊಳಿಸಿದ್ದು, ಕೊರೊನಾ ಶಂಕಿತ ಇಬ್ಬರ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಒಬ್ಬ ಶಂಕಿತನ ವರದಿ ನೆಗಟಿವ್‌ ಬಂದಿದ್ದು, ಮತ್ತೊಬ್ಬರ ವರದಿಗಾಗಿ ಕಾಯಲಾಗುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿ 34 ಜನರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ