ಆ್ಯಪ್ನಗರ

ಕೊರೊನಾ ಸೋಂಕಿತ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಆತಂಕ: ನೆಗೆಟಿವ್‌ ಬಂದರಷ್ಟೇ ಪರೀಕ್ಷೆಗೆ ಅವಕಾಶ!

ಕರ್ನಾಟಕ ಲೋಕ ಸೇವಾ ಆಯೋಗ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಮುನ್ನ ಕೋವಿಡ್‌-19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಇದು ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

Vijaya Karnataka Web 14 Aug 2020, 4:43 pm
ಕೊಪ್ಪಳ: ಕರ್ನಾಟಕ ಲೋಕ ಸೇವಾ ಆಯೋಗ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಮುನ್ನ ಕೋವಿಡ್‌-19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಇದು ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
Vijaya Karnataka Web KPSC


ಕೊಪ್ಪಳದ ಅಭ್ಯರ್ಥಿ ಬಸವರಾಜ ಅವರಿಗೆ ಕಲಬುರಗಿಯಲ್ಲಿಆಗಸ್ಟ್‌ 14 ರಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಕೋವಿಡ್‌- 19 ಟೆಸ್ಟ್‌ ಮಾಡಿಸಿದ ವೇಳೆ ಅವರ ಗಂಟಲು ದ್ರವ ಮಾದರಿಯ ವರದಿ ಪಾಸಿಟಿವ್‌ ಬಂದಿದೆ. ಅಭ್ಯರ್ಥಿ ಬಸವರಾಜ ಸದ್ಯ ಹೋಮ್‌ ಕ್ವಾರಂಟೈನ್‌ನಲ್ಲಿದ್ದು, ಮುಂದೇನು? ಎಂಬ ಭೀತಿ ಅವರನ್ನು ಕಾಡುತ್ತಿದೆ.

ಏನಿದು ಗೊಂದಲ?:
2017-18ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ 2020ರ ಜನವರಿ 31ರಂದು ಅಧಿಸೂಚನೆ ಹೊರಡಿಸಿ, ಮಾರ್ಚ್ 17 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಲಿಖಿತ ಪರೀಕ್ಷೆಯ ನಂತರ ದಾಖಲಾತಿ ಪರಿಶೀಲನೆ, ವಿಕಲಚೇತನ ಮೀಸಲಾತಿ ಕೋರಿರುವ ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿತ್ತು. ಜೂನ್‌ ಅಥವಾ ಜುಲೈನಲ್ಲಿ ಪರೀಕ್ಷೆ ನಡೆಸುವ ಸಂಭವನೀಯ ದಿನ ಘೋಷಿಸಲಾಗಿತ್ತು (ನಂತರ ಮುಂದೂಡಲಾಯಿತು).

ಕೊರೊನಾ ಕಾಲಘಟ್ಟದಲ್ಲಿ ಹೂಡಿಕೆಗೆ, ಉಳಿತಾಯಕ್ಕೆ ಇಲ್ಲಿವೆ ಗ್ರೇಟ್ ಐಡಿಯಾ!

ಆದರೆ, ಕೋವಿಡ್‌-19 ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆಗೆ ಮುನ್ನವೇ ವೈದ್ಯಕೀಯ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾದ ವಿಕಲಚೇತನ ಮೀಸಲಾತಿ (ಅಂಧ/ ದೃಷ್ಟಿ ಮಂದ) ಅಭ್ಯರ್ಥಿಗಳಿಗೆ ಲೋಕಸೇವಾ ಆಯೋಗದಿಂದ ವೈದ್ಯಕೀಯ ಪರೀಕ್ಷೆಯ ದಿನ, ಸ್ಥಳ, ಸಮಯ ಹಾಗೂ ಹಾಜರುಪಡಿಸಬೇಕಾದ ದಾಖಲೆಗಳ ಮಾಹಿತಿ ನೀಡಲಾಗಿದೆ. ಆದರೆ, ಸೂಚನೆಗಳಲ್ಲಿ ರ‍್ಯಾಪಿಡ್‌ ಟೆಸ್ಟ್‌ ಬಗ್ಗೆ ಉಲ್ಲೇಖಿಸಿರುವುದು ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿದ ವೇಳೆ ಕೋವಿಡ್‌-19 ನೆಗಟಿವ್‌ ಬಂದರೆ, ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗುತ್ತಾರೆ. ಪಾಸಿಟಿವ್‌ ಬಂದರೆ ಕ್ವಾರಂಟೈನ್‌ಗೆ ಒಳಗಾಗುವುದು ಅನಿವಾರ್ಯ. ಕ್ವಾರಂಟೈನ್‌ಗೆ ತೆರಳಿದರೆ ಕೆಪಿಎಸ್ಸಿಯಿಂದ ಮತ್ತೆ ಪರೀಕ್ಷೆ ನಡೆಸಲಾಗುತ್ತದೆಯೋ? ಪರೀಕ್ಷೆಗೆ ಹಾಜರಾಗಿಲ್ಲವೆಂದು ಗೈರು ಹಾಜರು ಎಂದು ಅನರ್ಹಗೊಳಿಸುತ್ತಾರೋ? ಎನ್ನುವ ಹೆದರಿಕೆ ಅಭ್ಯರ್ಥಿಗಳನ್ನು ಬಲವಾಗಿ ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ