ಕೊಪ್ಪಳ: ಕರ್ನಾಟಕ ಬ್ಯಾಂಕ್ನಲ್ಲಿ ದರೋಡೆ, 1.5 ಕೋಟಿ ರೂ. ಮೌಲ್ಯದ ಆಭರಣ, ನಗದು ಕನ್ನ
ಯಲಬುರ್ಗಾದ ಕರ್ನಾಟಕ ಬ್ಯಾಂಕ್ನಲ್ಲಿದ್ದ ಸಿ.ಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಿದ್ದಾರೆ. ಎಷ್ಟು ದರೋಡೆ ಮಾಡಿದೆ ಎಂಬುದನ್ನು ಪೊಲೀಸರು ತನಿಖೆ ಪೂರ್ಣಗೊಳಿಸಿದ ಬಳಿಕವೇ ನಿಖರವಾಗಿ ಗೊತ್ತಾಗಲಿದೆ.
Vijaya Karnataka Web 24 Sep 2020, 3:24 pm
ಕೊಪ್ಪಳ: ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಸುಮಾರು ಒಂದೂವರೆ ಕೋಟಿ ರೂ.ಮೊತ್ತದ ಒಡವೆ ಹಾಗೂ ನಗದು ದರೋಡೆ ಮಾಡಲಾಗಿದೆ.
ದರೋಡೆಕೋರರು ಬುಧವಾರ ತಡ ರಾತ್ರಿ ದರೋಡೆ ನಡೆಸಿದ್ದಾರೆ. ಗ್ಯಾಸ್ ಕಟರ್ ಬಳಸಿ ಬ್ಯಾಂಕಿನ ಒಳಗೆ ಪ್ರವೇಶಿಸಿದ್ದಾರೆ.
ಬ್ಯಾಂಕ್ ಶಟರ್ ಕಟ್ ಮಾಡಿ ಒಳಹೊಕ್ಕು ಹಣ, ಬಂಗಾರ ಮತ್ತು ಬೆಳ್ಳಿ ಸೇರಿ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ.
ಬ್ಯಾಂಕ್ನಲ್ಲಿದ್ದ ಸಿ.ಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಿದ್ದಾರೆ. ಎಷ್ಟು ದರೋಡೆ ಮಾಡಿದೆ ಎಂಬುದನ್ನು ಪೊಲೀಸರು ತನಿಖೆ ಪೂರ್ಣಗೊಳಿಸಿದ ಬಳಿಕವೇ ನಿಖರವಾಗಿ ಗೊತ್ತಾಗಲಿದೆ.
ಸ್ಥಳಕ್ಕೆ ಎಸ್ಪಿ ಜಿ.ಸಂಗೀತಾ, ಸಿಪಿಐ ಎಂ.ನಾಗರಡ್ಡಿ, ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ದರೋಡೆಕೋರರು ಬುಧವಾರ ತಡ ರಾತ್ರಿ ದರೋಡೆ ನಡೆಸಿದ್ದಾರೆ. ಗ್ಯಾಸ್ ಕಟರ್ ಬಳಸಿ ಬ್ಯಾಂಕಿನ ಒಳಗೆ ಪ್ರವೇಶಿಸಿದ್ದಾರೆ.
ಬ್ಯಾಂಕ್ ಶಟರ್ ಕಟ್ ಮಾಡಿ ಒಳಹೊಕ್ಕು ಹಣ, ಬಂಗಾರ ಮತ್ತು ಬೆಳ್ಳಿ ಸೇರಿ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ.
ಬ್ಯಾಂಕ್ನಲ್ಲಿದ್ದ ಸಿ.ಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಿದ್ದಾರೆ. ಎಷ್ಟು ದರೋಡೆ ಮಾಡಿದೆ ಎಂಬುದನ್ನು ಪೊಲೀಸರು ತನಿಖೆ ಪೂರ್ಣಗೊಳಿಸಿದ ಬಳಿಕವೇ ನಿಖರವಾಗಿ ಗೊತ್ತಾಗಲಿದೆ.
ಸ್ಥಳಕ್ಕೆ ಎಸ್ಪಿ ಜಿ.ಸಂಗೀತಾ, ಸಿಪಿಐ ಎಂ.ನಾಗರಡ್ಡಿ, ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.