ಆ್ಯಪ್ನಗರ

ಕಾಡು ಪ್ರಾಣಿ ಬೇಟೆಗಾರರ ಬಂಧನ

ಜಿಂಕೆ, ಆಮೆ, ಕೃಷ್ಣಮೃಗ ಸೇರಿ ನಾನಾ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರು ಬೇಟೆಗಾರರನ್ನು ಭಾನುವಾರ ಬಂಧಿಸಲಾಗಿದ್ದು, ಬಂಧಿತರಿಂದ ನಾಲ್ಕು ಜೀವಂತ ಆಮೆ ಸಹಿತ ಚರ್ಮ, ಕೊಂಬು ಸೇರಿ ಪ್ರಾಣಿಗಳ ದೇಹದ ಇತರೆ ಭಾಗ ಜಪ್ತಿ ಮಾಡಿಕೊಳ್ಳಲಾಗಿದೆ.

Vijaya Karnataka 25 Sep 2017, 7:44 am
ಗಂಗಾವತಿ: ಜಿಂಕೆ, ಆಮೆ, ಕೃಷ್ಣಮೃಗ ಸೇರಿ ನಾನಾ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರು ಬೇಟೆಗಾರರನ್ನು ಭಾನುವಾರ ಬಂಧಿಸಲಾಗಿದ್ದು, ಬಂಧಿತರಿಂದ ನಾಲ್ಕು ಜೀವಂತ ಆಮೆ ಸಹಿತ ಚರ್ಮ, ಕೊಂಬು ಸೇರಿ ಪ್ರಾಣಿಗಳ ದೇಹದ ಇತರೆ ಭಾಗ ಜಪ್ತಿ ಮಾಡಿಕೊಳ್ಳಲಾಗಿದೆ.
Vijaya Karnataka Web detention of wild animal hunter
ಕಾಡು ಪ್ರಾಣಿ ಬೇಟೆಗಾರರ ಬಂಧನ


ಬಂಧಿತರು ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದವರಾಗಿದ್ದು, ಹಂಪಯ್ಯಸ್ವಾಮಿ, ಅಮರಯ್ಯಸ್ವಾಮಿ, ರಾಜು ಪರಸಪ್ಪ, ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ಹಲವು ದಿನಗಳಿಂದ ನಾನಾ ಕಡೆ ಬೇಟೆಯಾಡುತ್ತಿದ್ದು, ಖಚಿತ ಮಾಹಿತಿ ಆಧರಿಸಿದ ಬೆಂಗಳೂರು ವಲಯ ಅರಣ್ಯ ಇಲಾಖೆಯ ಸಿಐಡಿ ವಿಭಾಗದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದರು. ಜಂಗಮರ ಕಲ್ಗುಡಿ ಗ್ರಾಮದ ಹೊರವಲಯದಲ್ಲಿ ಇವರನ್ನು ಬಂಧಿಸಲಾಗಿದ್ದು, ನಾಲ್ಕು ಜೀವಂತ ಆಮೆ, ಚಿರತೆ, ಕೃಷ್ಣ ಮೃಗ, ಕಡವೆಯ ಚರ್ಮ, ಕೃಷ್ಣಮೃಗದ ಕೊಂಬು, ಜಿಂಕೆಯ ಕೊಂಬು ವಶಪಡಿಸಿಕೊಂಡಿದ್ಧಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ