ಆ್ಯಪ್ನಗರ

‘ಸಮಾಜ ಒಡೆಯೋದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಸರಕಾರ ಮಾಡುತ್ತಿದೆ’; ಡಿಕೆಶಿ ಆರೋಪ

ರೈತರಿಗೆ ಮತ್ತೊಂದು ಬರೆ ನೀಡಿರುವ ಸರಕಾರ, ವಿದ್ಯುತ್ ದರ 40 ಪೈಸೆ ಹೆಚ್ಚಿಗೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ಈ ವರ್ಷ ಉತ್ತಮ ಮಳೆ ಆಗಿದೆ. ಹೀಗಾಗಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕಾಗಿತ್ತು. ಆದರೆ ಸಿಎಂ ಹಾಗೂ ಸಚಿವರು ಸರಕಾರ ಉಳಿಸುವುದಕ್ಕೆ ಆದ್ಯತೆ‌ ನೀಡುತ್ತಿದ್ದಾರೆ. ಸರಕಾರಕ್ಕೆ ರೈತರು ಮುಖ್ಯವಾಗಿಲ್ಲ ಎಂದು ಕಿಡಿಕಾರಿದರು.

Vijaya Karnataka Web 23 Nov 2020, 12:42 pm
ಕೊಪ್ಪಳ: ಸರಕಾರ ಸಮಾಜ ಒಡೆಯುವುದಕ್ಕೆ ಏನೇನು ಆಗಬೇಕು ಅದನ್ನೆಲ್ಲ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆರೋಪಿಸಿದ್ದಾರೆ.
Vijaya Karnataka Web dk shivakumar


ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದ ಶಾಸಕ ರಾಘವೇಂದ್ರ ಹಿಟ್ನಾಳ್ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಒಗ್ಗೂಡಿಸುವ ಕೆಲಸ ಸರಕಾರ ಮಾಡಬೇಕು. ಆದರೆ ಅದು ಆಗುತ್ತಿಲ್ಲ. ಆದ್ದರಿಂದ ಇವುಗಳೆಲ್ಲದರ ಬಗ್ಗೆ ಚರ್ಚಿಸಿ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ನವೆಂಬರ್ 30 ರಂದು ಪಕ್ಷದ ಮುಖಂಡರ ಸಭೆ ನಡೆಯಲಿದೆ ಎಂದರು.

ಹಂತ ಹಂತವಾಗಿ ‘ಸಂಘ’ದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ ‘ವಲಸಿಗ’

ಇದೇ ವೇಳೆ ಸರ್ಕಾರ ರೈತರಿಗೆ ಸರ್ಕಾರ ಕನಿಷ್ಟ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದ ಡಿಕೆಶಿ, ಮಾರುಕಟ್ಟೆಯಲ್ಲಿ ಭತ್ತಕ್ಕೆ 900 ರೂ.ಗೆ ಬೆಲೆ ಇದೆ. ಕನಿಷ್ಠ 500 ರೂ. ಬೆಂಬಲ ನೀಡಬೇಕು. ಸರಕಾರ ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಿದೆ. ರಾಜ್ಯದಲ್ಲಿ ಕೊಬ್ಬರಿ ಬೆಳೆಗಾರರಿಗೆ, ಭತ್ತ ಬೆಳಗಾರರಿಗೆ ಒಂದೊಂದು ‌ಮಾಡಬಾರದು. ಎಲ್ಲ ರೈತರು ಒಂದೇ ಆಗಿದ್ದಾರೆ. ಗೊಬ್ಬರ, ಕ್ರಿಮಿನಾಶಕ ಸೇರಿ ಎಲ್ಲ ಬೆಲೆಯೂ ಒಂದೇ ಆಗಿದೆ. ಆದರೆ ಒಂದೊಂದು ಬೆಳೆಗೆ ತಾರತಮ್ಯ ಎಸಗಬಾರದು ಎಂದು ಹೇಳಿದರು.

ಡಿಕೆ ಶಿವಕುಮಾರ್‌ಗೆ ಸಿಬಿಐ ಸಮನ್ಸ್; ನವೆಂಬರ್‌ 25ರಂದು ವಿಚಾರಣೆಗೆ ಹಾಜರ್‌

ಇನ್ನು ರೈತರಿಗೆ ಮತ್ತೊಂದು ಬರೆ ನೀಡಿರುವ ಸರಕಾರ, ವಿದ್ಯುತ್ ದರ 40 ಪೈಸೆ ಹೆಚ್ಚಿಗೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ಈ ವರ್ಷ ಉತ್ತಮ ಮಳೆ ಆಗಿದೆ. ಹೀಗಾಗಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕಾಗಿತ್ತು. ಆದರೆ ಸಿಎಂ ಹಾಗೂ ಸಚಿವರು ಸರಕಾರ ಉಳಿಸುವುದಕ್ಕೆ ಆದ್ಯತೆ‌ ನೀಡುತ್ತಿದ್ದಾರೆ. ಸರಕಾರಕ್ಕೆ ರೈತರು ಮುಖ್ಯವಾಗಿಲ್ಲ ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ