ಮಹೇಶಗೌಡ ಭಾನಾಪುರ, ಕೊಪ್ಪಳ
ಸತತ ಬರದಿಂದ ಕಂಗೆಟ್ಟಿರುವ ರೈತರು ಬೇಡಪ್ಪಾ ಈ ಬೇಸಾಯದ ಸಹವಾಸವೆಂದು ವ್ಯವಸಾಯದಿಂದ ದೂರವಿದ್ದಾರೆ. ಈ ಪರಿಸ್ಥಿತಿ ಕೂಲಿಕಾರರಿಗೂ ತಟ್ಟಿ ಗ್ರಾಮದಿಂದ ಗುಳೆ ಹೊರಟ್ಟಿದ್ದಾರೆ. ಇಂತಹ ಪರಿಸ್ಥಿತಿ ಮಧ್ಯೆ ಕೆಲ ಕೂಲಿಕಾರರು ತಮ್ಮ ಅಭ್ಯರ್ಥಿಗಳ ಮೇಲಿನ ಅಭಿಮಾನದಿಂದ ದುಡಿದ ಕೂಲಿ ಹಣ ಹಾಗೂ ಕುರಿಗಳನ್ನು ದೇಣಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಅಭ್ಯರ್ಥಿಗಳಿಗೆ ನೀಡಿದ ದೇಣಿಗೆ ಮಾಹಿತಿ ಹರಿದಾಡುತ್ತಿವೆ. ಫೇಸ್ಬುಕ್, ವಾಟ್ಸ್ ಆ್ಯಪ್ನಲ್ಲಿ ನಾನಾ ಗ್ರಾಮಗಳಲ್ಲಿ ಹಣ, ಕುರಿಗಳನ್ನು ದೇಣಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಉರಿವ ಬಿಸಿಲಿಗಿಂತಲೂ, ಚುನಾವಣಾ ಅಬ್ಬರ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಇನ್ನಿಲ್ಲದ ಕಸರತ್ತು: ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇದುವರೆಗೂ ಹಳ್ಳಿಗಳತ್ತ ಮುಖ ಮಾಡದ ಶಾಸಕರು, ಸಚಿವರು ಸೇರಿದಂತೆ ಹೊಸ ಅಭ್ಯರ್ಥಿಗಳು ಬಿಸಿಲಿನ ಝಳ ಲೆಕ್ಕಿಸದೇ ಜನರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕೆಲವು ಕಡೆಯಲ್ಲಿ ಅಭ್ಯರ್ಥಿಗಳಿಗೆ ಅಭೂತಪೂರ್ವ ಸ್ವಾಗತ ದೊರೆತಿದ್ದು, ಕೆಲವು ಹಳ್ಳಿಗಳಲ್ಲಿ ಜನರು ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಕಳುಹಿಸಿದ ಘಟನೆಗಳು ನಡೆದಿವೆ. ಇನ್ನು ಜನರೇ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಭರಿಸಲು ಕುರಿ, ಹಣ, ಭತ್ತ ಸೇರಿದಂತೆ ಇತರೆ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಇದು ಅಭ್ಯರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ದೇಣಿಗೆ ನೀಡುವ ಪದ್ಧತಿ ಜೋರಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸೂಗೂರು ಅವರಿಗೆ ರೈತರು ಭತ್ತ, ಹಣ ಸೇರಿದಂತೆ ಚುನಾವಣೆ ವೆಚ್ಚ ಭರಿಸಲು ದೇಣಿಗೆ ನೀಡುತ್ತಿದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೀರನಗೌಡ ಬಳೂಟಗಿ ಅವರಿಗೆ ಕುರಿ ದೇಣಿಗೆ ನೀಡಿದ್ದಾರೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಇದೊಂದು ವಿನೂತನ ಪ್ರಚಾರವಾಗಿದೆ. ಆದರೆ, ಅಭ್ಯರ್ಥಿಗಳಿಗೆ ದೇಣಿಗೆ ನೀಡುವ ಮೂಲಕ ಜನರು ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ.
ಕೆಲವರಿಗೆ ಸ್ವಾಗತ, ಕೆಲವರಿಗೆ ತಿರಸ್ಕಾರ: ಹಾಲಿ ಶಾಸಕರಿಗೆ ಹಾಗೂ ಮಾಜಿ ಸಚಿವರಿಗೆ ಕೆಲ ಹಳ್ಳಿಗಳಲ್ಲಿ ಜನರು ಶಾಕ್ ನೀಡಿದ್ದಾರೆ. ದೇವಸ್ಥಾನಕ್ಕೆ ನೀಡಿದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ಗ್ರಾಮದ ಒಳಗೆ ಬರದಂತೆ ತಾಕಿತ್ತು ಮಾಡಿರುವ ಘಟನೆಗಳು ಕೂಡ ನಡೆದಿವೆ. ಇನ್ನು ಕುಡಿವ ನೀರಿನ ಸಮಸ್ಯೆ, ಕೂಲಿ ಕೆಲಸ ಸೇರಿದಂತೆ ನಾನಾ ಸೌಲಭ್ಯ ಒದಗಿಸಿಲ್ಲ. ಇದುವರೆಗೂ ಹಳ್ಳಿಗೆ ಬಾರದವರು ಚುನಾವಣೆ ಮತ ಕೇಳಲು ಬಂದಿದ್ದೀರಿ, ಬಂದ ದಾರಿಗೆ ಹೋಗುವಂತೆ ತರಾಟೆಗೆ ತೆಗೆದುಕೊಂಡ ಘಟನೆಗಳೂ ಕೆಲ ಗ್ರಾಮಗಳಲ್ಲಿ ನಡೆದಿವೆ. ಆದರೆ, ಕೆಲ ಅಭ್ಯರ್ಥಿಗಳಿಗೆ ದೇಣಿಗೆ ನೀಡುತ್ತಿದ್ದು, ಇನ್ನೂ ಕೆಲ ಅಭ್ಯರ್ಥಿಗಳಿಗೆ ತರಾಟೆ ತೆಗೆದುಕೊಳ್ಳುವ ಪ್ರಸಂಗಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕ ವಲಯಗಳಲ್ಲಿ ಚುನಾವಣೆಯ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಪ್ರತಿರೋಧ: ಸಾಮಾಜಿಕ ಜಾಲ ತಾಣಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ವಿರೋಧ- ಪ್ರತಿವಿರೋಧದ ಹೇಳಿಕೆಗಳಿಗೆ ಕಡಿಮೆ ಇಲ್ಲ. ಅಭ್ಯರ್ಥಿಗಳ ಪ್ರಚಾರದ ಫೋಟೊ ಹಾಕುವ ಮೂಲಕ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಒಟ್ಟಾರೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾದಂತೆ, ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ.
ಸತತ ಬರದಿಂದ ಕಂಗೆಟ್ಟಿರುವ ರೈತರು ಬೇಡಪ್ಪಾ ಈ ಬೇಸಾಯದ ಸಹವಾಸವೆಂದು ವ್ಯವಸಾಯದಿಂದ ದೂರವಿದ್ದಾರೆ. ಈ ಪರಿಸ್ಥಿತಿ ಕೂಲಿಕಾರರಿಗೂ ತಟ್ಟಿ ಗ್ರಾಮದಿಂದ ಗುಳೆ ಹೊರಟ್ಟಿದ್ದಾರೆ. ಇಂತಹ ಪರಿಸ್ಥಿತಿ ಮಧ್ಯೆ ಕೆಲ ಕೂಲಿಕಾರರು ತಮ್ಮ ಅಭ್ಯರ್ಥಿಗಳ ಮೇಲಿನ ಅಭಿಮಾನದಿಂದ ದುಡಿದ ಕೂಲಿ ಹಣ ಹಾಗೂ ಕುರಿಗಳನ್ನು ದೇಣಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಅಭ್ಯರ್ಥಿಗಳಿಗೆ ನೀಡಿದ ದೇಣಿಗೆ ಮಾಹಿತಿ ಹರಿದಾಡುತ್ತಿವೆ. ಫೇಸ್ಬುಕ್, ವಾಟ್ಸ್ ಆ್ಯಪ್ನಲ್ಲಿ ನಾನಾ ಗ್ರಾಮಗಳಲ್ಲಿ ಹಣ, ಕುರಿಗಳನ್ನು ದೇಣಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಉರಿವ ಬಿಸಿಲಿಗಿಂತಲೂ, ಚುನಾವಣಾ ಅಬ್ಬರ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಇನ್ನಿಲ್ಲದ ಕಸರತ್ತು: ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇದುವರೆಗೂ ಹಳ್ಳಿಗಳತ್ತ ಮುಖ ಮಾಡದ ಶಾಸಕರು, ಸಚಿವರು ಸೇರಿದಂತೆ ಹೊಸ ಅಭ್ಯರ್ಥಿಗಳು ಬಿಸಿಲಿನ ಝಳ ಲೆಕ್ಕಿಸದೇ ಜನರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕೆಲವು ಕಡೆಯಲ್ಲಿ ಅಭ್ಯರ್ಥಿಗಳಿಗೆ ಅಭೂತಪೂರ್ವ ಸ್ವಾಗತ ದೊರೆತಿದ್ದು, ಕೆಲವು ಹಳ್ಳಿಗಳಲ್ಲಿ ಜನರು ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಕಳುಹಿಸಿದ ಘಟನೆಗಳು ನಡೆದಿವೆ. ಇನ್ನು ಜನರೇ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಭರಿಸಲು ಕುರಿ, ಹಣ, ಭತ್ತ ಸೇರಿದಂತೆ ಇತರೆ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಇದು ಅಭ್ಯರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ದೇಣಿಗೆ ನೀಡುವ ಪದ್ಧತಿ ಜೋರಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸೂಗೂರು ಅವರಿಗೆ ರೈತರು ಭತ್ತ, ಹಣ ಸೇರಿದಂತೆ ಚುನಾವಣೆ ವೆಚ್ಚ ಭರಿಸಲು ದೇಣಿಗೆ ನೀಡುತ್ತಿದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೀರನಗೌಡ ಬಳೂಟಗಿ ಅವರಿಗೆ ಕುರಿ ದೇಣಿಗೆ ನೀಡಿದ್ದಾರೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಇದೊಂದು ವಿನೂತನ ಪ್ರಚಾರವಾಗಿದೆ. ಆದರೆ, ಅಭ್ಯರ್ಥಿಗಳಿಗೆ ದೇಣಿಗೆ ನೀಡುವ ಮೂಲಕ ಜನರು ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ.
ಕೆಲವರಿಗೆ ಸ್ವಾಗತ, ಕೆಲವರಿಗೆ ತಿರಸ್ಕಾರ: ಹಾಲಿ ಶಾಸಕರಿಗೆ ಹಾಗೂ ಮಾಜಿ ಸಚಿವರಿಗೆ ಕೆಲ ಹಳ್ಳಿಗಳಲ್ಲಿ ಜನರು ಶಾಕ್ ನೀಡಿದ್ದಾರೆ. ದೇವಸ್ಥಾನಕ್ಕೆ ನೀಡಿದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ಗ್ರಾಮದ ಒಳಗೆ ಬರದಂತೆ ತಾಕಿತ್ತು ಮಾಡಿರುವ ಘಟನೆಗಳು ಕೂಡ ನಡೆದಿವೆ. ಇನ್ನು ಕುಡಿವ ನೀರಿನ ಸಮಸ್ಯೆ, ಕೂಲಿ ಕೆಲಸ ಸೇರಿದಂತೆ ನಾನಾ ಸೌಲಭ್ಯ ಒದಗಿಸಿಲ್ಲ. ಇದುವರೆಗೂ ಹಳ್ಳಿಗೆ ಬಾರದವರು ಚುನಾವಣೆ ಮತ ಕೇಳಲು ಬಂದಿದ್ದೀರಿ, ಬಂದ ದಾರಿಗೆ ಹೋಗುವಂತೆ ತರಾಟೆಗೆ ತೆಗೆದುಕೊಂಡ ಘಟನೆಗಳೂ ಕೆಲ ಗ್ರಾಮಗಳಲ್ಲಿ ನಡೆದಿವೆ. ಆದರೆ, ಕೆಲ ಅಭ್ಯರ್ಥಿಗಳಿಗೆ ದೇಣಿಗೆ ನೀಡುತ್ತಿದ್ದು, ಇನ್ನೂ ಕೆಲ ಅಭ್ಯರ್ಥಿಗಳಿಗೆ ತರಾಟೆ ತೆಗೆದುಕೊಳ್ಳುವ ಪ್ರಸಂಗಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕ ವಲಯಗಳಲ್ಲಿ ಚುನಾವಣೆಯ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಪ್ರತಿರೋಧ: ಸಾಮಾಜಿಕ ಜಾಲ ತಾಣಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ವಿರೋಧ- ಪ್ರತಿವಿರೋಧದ ಹೇಳಿಕೆಗಳಿಗೆ ಕಡಿಮೆ ಇಲ್ಲ. ಅಭ್ಯರ್ಥಿಗಳ ಪ್ರಚಾರದ ಫೋಟೊ ಹಾಕುವ ಮೂಲಕ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಒಟ್ಟಾರೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾದಂತೆ, ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ.