ಆ್ಯಪ್ನಗರ

ಕುಡಿವ ನೀರಿನ ಸಮಸ್ಯೆ : ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಕಳೆದ ಕೆಲ ತಿಂಗಳಿಂದ ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ ಪುರಸಭೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪಟ್ಟಣದ 5ನೇ ವಾರ್ಡ್‌ನ ನಾಗರಿಕರು ಪುರಸಭೆ ಕಚೇರಿಗೆ ಬೀಗ ಹಾಕಿ ಸೋಮವಾರ ಪ್ರತಿಭಟಿಸಿದರು.

Vijaya Karnataka 1 May 2018, 5:00 am
ಕುಷ್ಟಗಿ : ಕಳೆದ ಕೆಲ ತಿಂಗಳಿಂದ ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ ಪುರಸಭೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪಟ್ಟಣದ 5ನೇ ವಾರ್ಡ್‌ನ ನಾಗರಿಕರು ಪುರಸಭೆ ಕಚೇರಿಗೆ ಬೀಗ ಹಾಕಿ ಸೋಮವಾರ ಪ್ರತಿಭಟಿಸಿದರು.
Vijaya Karnataka Web KPL-KPL30KST02


ಬೆಳಗ್ಗೆ, ಪುರಸಭೆ ಮುಖ್ಯಾಧಿಕಾರಿ ಮತ್ತು ಸಂಬಂಧಿಸಿದ ಸಿಬ್ಬಂದಿಗೆ ತಮ್ಮ ಸಮಸ್ಯೆ ತಿಳಿಸಲು 5ನೇ ವಾರ್ಡ್‌ನ ನಾಗರಿಕರು ಬಂದರು. ಆ ವೇಳೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಹಾಗೂ ನೀರು ನಿರ್ವಹಣೆ ವಿಭಾಗದ ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ. ಮುಖ್ಯಾಧಿಕಾರಿ ಚುನಾವಣೆ ಕರ್ತವ್ಯದ ಮೇಲೆ ಕ್ಯಾದಿಗುಪ್ಪಾ ಚೆಕ್‌ಪೋಸ್ಟ್‌ಗೆ ತೆರಳಿರುವುದು ತಿಳಿಯಿತು. ಸಂಬಂಧಿಸಿದ ಸಿಬ್ಬಂದಿ ಬಸವರಾಜ ಸುಳಕೋಡ್‌ ಬೇರೆಡೆ ತೆರಳಿದ್ದರು. ಕಚೇರಿಯಲ್ಲಿದ್ದ ಕಂದಾಯ ನಿರೀಕ್ಷ ಕಗೆ ತಮ್ಮ ಸಮಸ್ಯೆ ವಿವರಿಸಿದರು. ಪ್ರತಿಕ್ರಿಯಿಸಿದ ಕಂದಾಯ ನಿರೀಕ್ಷ ಕ, ಮುಖ್ಯಾಧಿಕಾರಿ ಗಮನಕ್ಕೆ ತರುವುದಾಗಿ ಹೇಳಿದರು. ನಾಗರಿಕರು 'ತಕ್ಷ ಣವೇ ತಮ್ಮ ವಾರ್ಡ್‌ಗೆ ಸಂಬಂಧಿಸಿದ ಸಿಬ್ಬಂದಿ ಬಂದು ಕ್ರಮ ಕೈಗೊಳ್ಳಬೇಕು. ವಾರ್ಡ್‌ನಲ್ಲಿ ಪ್ರಮುಖ ಎರಡು ಪೈಪ್‌ಲೈನ್‌ ಇವೆ. ಇತ್ತೀಚೆಗೆ ಪುರಸಭೆ ಸಿಬ್ಬಂದಿ ಒಂದು ಪೈಪ್‌ಲೈನ್‌ ಗೆ ಸಂಪರ್ಕ ನೀಡಿ ಇನ್ನೊಂದನ್ನು ಸ್ಥಗಿತಗೊಳಿಸಿದ್ದಾರೆ. ಸ್ಥಗಿತಗೊಳಿಸಿರುವ ಪೈಪ್‌ಲೈನ್‌ ನಿಂದ ಸಾರ್ವಜನಿಕ ನಳಕ್ಕೆ ಸಂಪರ್ಕ ನೀಡಲಾಗಿತ್ತು. ಸಾರ್ವಜನಿಕ ನಳಕ್ಕೆ ಸಂಪರ್ಕ ನೀಡಲು ಅಂದಾಜು 15 ಅಡಿ ಉದ್ದಕ್ಕೆ ಹೊಸ ಪೈಪ್‌ಲೈನ್‌ ಹಾಕಬೇಕಾಗುತ್ತದೆ. ಈ ಬಗ್ಗೆ ಪುರಸಭೆಯ ಸಿಬ್ಬಂದಿಗೆ ಅನೇಕ ಸಲ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಪೈಪ್‌ಲೈನ್‌ ಕಡಿಯಲು ಕೂಲಿಕಾರರು ಸಿಗುತ್ತಿಲ್ಲ ಎಂಬ ಸಲ್ಲದ ನೆಪ ಹೇಳುತ್ತಿದ್ದಾರೆ. ಸ್ಥಳೀಯ ನಾಗರಿಕರೇ ಶ್ರಮದಾನದ ಮೂಲಕ ಪೈಪ್‌ ಅಳವಡಿಕೆಗಾಗಿ ನೆಲ ಅಗೆದುಕೊಡುತ್ತಾರೆ. ಸ್ಥಳಕ್ಕೆ ಸಿಬ್ಬಂದಿ ಬರಬೇಕು ಎಂದು ಒತ್ತಾಯಿಸಿದರು. ಸಿಬ್ಬಂದಿ ಕಚೇರಿಯಲ್ಲಿ ಇಲ್ಲದ್ದಕ್ಕೆ ಕುಪಿತರಾದ ನಾಗರಿಕರು ದಿಢೀರಾಗಿ ಪುರಸಭೆ ಕಚೇರಿಯ ಬಾಗಿಲು ಮುಚ್ಚಿ ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ನಾಗರಿಕರ ಮನವೊಲಿಸಿ ಕಚೇರಿ ಬೀಗ ತೆರವುಗೊಳಿಸುವಂತೆ ಸೂಚಿಸಿದರು. ನೀರು ನಿರ್ವಹಣೆ ಸಿಬ್ಬಂದಿ ಬಸವರಾಜ ಸುಳಕೋಡ್‌ ಅವರು ಅಲ್ಲಿಗೆ ಬರುತ್ತಿದ್ದಂತೆ, ನಾಗರಿಕರು ಅವರನ್ನು ವಾರ್ಡ್‌ಗೆ ಕರೆದೊಯ್ದರು. ಸಾರ್ವಜನಿಕ ನಳಗಳಿಗೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡುವುದಾಗಿ ಸಿಬ್ಬಂದಿ ಒಪ್ಪಿದರು. ಪ್ರತಿಭಟನೆಯ ನೇತೃತ್ವವನ್ನು ರವೀಂದ್ರ ಬಾಕಳೆ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ