ಆ್ಯಪ್ನಗರ

ಬರದಲ್ಲೂ ವರವಾದ ಕೃಷಿಹೊಂಡ

ಬರ ಹಾಗೂ ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳಲು ಕಂಗಾಲಾಗಿದ್ದ ತಾಲೂಕಿನ ರೈತರಿಗೆ ಕೃಷಿ ಹೊಂಡಗಳು ಆಶ್ರಯವಾಗಿವೆ. ಹಿಂಗಾರಿನಲ್ಲಿ ಮಳೆಯಾಶ್ರಿತ ಪ್ರದೇಶದ ಬಹುಪಾಲು ಅನ್ನದಾತರು ಕೃಷಿ ಹೊಂಡಗಳ ನೆರವು ಪಡೆಯಲು ಮುಂದಾಗಿದ್ದಾರೆ.

Vijaya Karnataka 7 Dec 2018, 5:16 pm
ಯಲಬುರ್ಗಾ : ಬರ ಹಾಗೂ ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳಲು ಕಂಗಾಲಾಗಿದ್ದ ತಾಲೂಕಿನ ರೈತರಿಗೆ ಕೃಷಿ ಹೊಂಡಗಳು ಆಶ್ರಯವಾಗಿವೆ. ಹಿಂಗಾರಿನಲ್ಲಿ ಮಳೆಯಾಶ್ರಿತ ಪ್ರದೇಶದ ಬಹುಪಾಲು ಅನ್ನದಾತರು ಕೃಷಿ ಹೊಂಡಗಳ ನೆರವು ಪಡೆಯಲು ಮುಂದಾಗಿದ್ದಾರೆ.
Vijaya Karnataka Web drought help farm pond
ಬರದಲ್ಲೂ ವರವಾದ ಕೃಷಿಹೊಂಡ


ತಾಲೂಕಿನ ಎರೆ ಮಸಾರಿ ಭಾಗದಲ್ಲಿ ಹೆಚ್ಚಾಗಿ ರೈತರು ಮಳೆ ಆಶ್ರಿತ ಬೆಳೆ ಬೆಳೆದಿದ್ದಾರೆ.ಈ ಪ್ರದೇಶದಲ್ಲಿ ಮಳೆಯಾದರೆ ಮಾತ್ರ ಬೆಳೆ ಬರುತ್ತದೆ. ಮಳೆ ಕೊರತೆಯಿಂದ ಬೆಳೆ ಒಣಗುತ್ತಿವೆ. ಈ ಕಾರಣಕ್ಕಾಗಿ ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳಿಂದ ನೀರು ಪಡೆದುಕೊಳ್ಳುತ್ತಿದ್ದಾರೆ. ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿಕೊಂಡಿರುವ

ಕೃಷಿಹೊಂಡದಿಂದ ಕಡಲೆ, ಜೋಳ ಸೇರಿದಂತೆ ನಾನಾ ಬೆಳೆಗಳಿಗೆ ತುಂತುರು ಹನಿ ನೀರಾವರಿ ಮೂಲಕ ನೀರು ಪಡೆದು ಕೊಳ್ಳುತ್ತಿದ್ದಾರೆ.

ಕೈ ಹಿಡಿದ ಹೊಂಡ: ತಾಲೂಕಿನ ಸಂಗನಾಳ, ಕಲ್ಲೂರ, ಮಲಕಸಮುದ್ರ, ಗೆದಗೇರಿ, ಕುಡಗುಂಟಿ, ಚಿಕ್ಕಮ್ಯಾಗೇರಿ, ತುಮ್ಮರಗುದ್ದಿ, ಮುಧೋಳ, ಹಿರೇಮ್ಯಾಗೇರಿ, ಮಂಗಳೂರು, ಬೇವೂರ, ಹೊಸಳ್ಳಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ರೈತರು ಕೃಷಿ ಹೊಂಡಗಳಿಗೆ ಮೋಟರ್‌ ಅಳವಡಿಸಿಕೊಂಡು ನೀರು ಪಡೆಯುತ್ತಿದ್ದಾರೆ. ಕೆಲವರು ತುಂತುರ ನೀರಾವರಿಯಿಂದ ನೀರು ಪಡೆದುಕೊಳ್ಳುತ್ತಿದ್ದಾರೆ. ಕೃಷಿ ಹೊಂಡದ ನೀರಿನಿಂದ ಬೆಳೆ ಬರಬಹುದು ಎಂಬ ಖುಷಿಯಲ್ಲಿ ರೈತರಿದ್ದಾರೆ.

------
10 ಎಕರೆ ಪ್ರದೇಶದಲ್ಲಿ ಕಡಲೆ ಜೋಳ ಬಿತ್ತಲಾಗಿದ್ದು, ಮಳೆ ಸಮಸ್ಯೆ ಹಿನ್ನೆಲೆಯಲ್ಲಿ ಬೆಳೆ ಒಣಗುತ್ತಿದೆ. ಜಮೀನಲ್ಲಿ ನಿರ್ಮಿಸಿದ ಕೃಷಿ ಹೊಂಡಗಳಿಂದ ತುಂತುರು ಹನಿ ನೀರಾವರಿ ಬಳಕೆಯಿಂದ ಬೆಳೆಗಳು ಹಸರಾಗಿವೆ. ಬೆಳೆ ಪಡೆಯಲು ಕೃಷಿ ಹೊಂಡಗಳು ನೆರವಾಗಿವೆ

-ಸಿದ್ಧಲಿಂಗಶ್ವರ ದೇಸಾಯಿ, ರೈತ ಚಿಕ್ಕಮ್ಯಾಗೇರಿ.

-----

ತಾಲೂಕಿನ ಬಹುಪಾಲು ರೈತರು ಎರೆ ಮಸಾರಿ ಭಾಗದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಕೃಷಿಹೊಂಡಗಳನ್ನು

ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

-ನಾಗನಗೌಡ ಪಾಟೀಲ್‌,ಕೃಷಿ ಅಧಿಕಾರಿ, ಆರ್‌ಎಸ್‌ಕೆ,ಯಲಬುರ್ಗಾ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ