ಆ್ಯಪ್ನಗರ

ಅಂಚೆ ಮತದಾನಕ್ಕಾಗಿ ತಾಸುಗಟ್ಟಲೇ ಸರದಿಯಲ್ಲಿ ನಿಂತ ನೌಕರರು

ಅಂಚೆ ಮತದಾನಕ್ಕೆ ಮೇ 7 ಕಡೆಯದಿನವಾಗಿದ್ದರಿಂದ ಇಲ್ಲಿನ ತಹಸಿಲ್‌ ಕಚೇರಿಯಲ್ಲಿ ಅಂಚೆ ಮತದಾನ ಮಾಡಲು ನೌಕರರು ತಾಸುಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.

Vijaya Karnataka 8 May 2018, 5:00 am
ಕುಷ್ಟಗಿ : ಅಂಚೆ ಮತದಾನಕ್ಕೆ ಮೇ 7 ಕಡೆಯದಿನವಾಗಿದ್ದರಿಂದ ಇಲ್ಲಿನ ತಹಸಿಲ್‌ ಕಚೇರಿಯಲ್ಲಿ ಅಂಚೆ ಮತದಾನ ಮಾಡಲು ನೌಕರರು ತಾಸುಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.
Vijaya Karnataka Web KPL-KPL7KST04


ಮೇ 7ರಂದು ಬೆಳಗ್ಗೆ 10ರಿಂದ ಸಂಜೆ 6ವರೆಗೆ ಅಂಚೆ ಮತದಾನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಮೇ 5 ಮತ್ತು 6ರಂದು ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಿದ್ದರೂ ಹೆಚ್ಚಿನ ಸಂಖ್ಯೆಯ ನೌಕರರು ಮತ ಚಲಾಯಿಸಿರಲಿಲ್ಲ. ಹೀಗಾಗಿ ಕೊನೆಯ ದಿನ ರಶ್‌ ಹೆಚ್ಚಾಗಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿಗೆ ಅಂಚೆ ಮತದಾನ ಮಾಡಲು ಎರಡು ಕೌಂಟರ್‌ ತೆರೆಯಬೇಕಿತ್ತು. ಒಂದೇ ಕೌಂಟರ್‌ ಇದ್ದುದರಿಂದ ಕ್ಯೂ ನ ಉದ್ದ ಹೆಚ್ಚಿತ್ತು. ಈ ಹಿಂದೆ ಅಂಚೆ ಮತದಾನಪತ್ರ ಪಡೆಯಲು ಅಗತ್ಯ ಇರುವ ನಮೂನೆಯನ್ನು ನೌಕರರು ಭರ್ತಿ ಮಾಡಿ ಚುನಾವಣೆ ಅಧಿಕಾರಿಗೆ ಸಲ್ಲಿಸಿದ್ದರು. ಮೇ 7ರಂದು ಮತದಾನ ಮಾಡಲು ಬಂದಿದ್ದ ಸಿಬ್ಬಂದಿಗೆ ಪುನಃ ನಮೂನೆಯನ್ನು ಭರ್ತಿ ಮಾಡುವಂತೆ ಸೂಚಿಸಲಾಯಿತು. ಈ ಬಗ್ಗೆ ನೌಕರರು ಆಕ್ಷೇಪಿಸಿ ತಾವು ಈಗಾಗಲೇ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡುವಂತೆ ಒತ್ತಾಯಿಸಿದರು. ಚುನಾವಣೆ ಅಧಿಕಾರಿ ಪ್ರಶಾಂತ್‌ ಅವರು, ಮತ್ತೊಮ್ಮೆ ವಿವರಗಳನ್ನು ಭರ್ತಿ ಮಾಡಿ ನೀಡುವಂತೆ ಸೂಚಿಸಿದರು. ರಶ್‌ ಹೆಚ್ಚು ಇದ್ದುದಕ್ಕೆ ಕೆಲ ನೌಕರರು ಮತ ಚಲಾಯಿಸದೇ ವಾಪಸ್ಸಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ