ಕುಷ್ಟಗಿ; ರಾಜ್ಯ ಬಸವ ಸಂಸ್ಕೃತಿ ಪ್ರತಿಷ್ಠಾನ ಇಲ್ಲಿನ ಶ್ರೀಬುತ್ತಿಬಸವೇಶ್ವರ ದೇವಾಲಯ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಿತ್ತು.
ಶಾಸಕ ದೊಡ್ಡನಗೌಡ ಪಾಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಶ್ವಪರಿಸರ ದಿನಾಚರಣೆಗಷ್ಟೇ ಪರಿಸರ ಕಾಳಜಿ ಜಾಗೃತಿಯಾಗಬಾರದು. ಅದು ನಿರಂತರಗೊಳ್ಳಬೇಕು. ಪರಿಸರದಲ್ಲಿ ಸಮತೋಲನ ಕಾಪಾಡಲು ಇಡೀ ಜಗತ್ತು ಮುಂದಾಗಬೇಕು ಎಂದು ವಿಶ್ವಸಂಸ್ಥೆ ಕರೆ ನೀಡಿದೆ. ಮಕ್ಕಳು ಸೇರಿದಂತೆ ಎಲ್ಲರಲ್ಲೂ ಪರಿಸರ ಕಾಳಜಿ ಬರಬೇಕು. ಸಸಿ ನೆಟ್ಟು ಕೈಬಿಡುವುದರ ಬದಲಿಗೆ ನೀರೆರೆದು ಪೋಷಣೆ ಮಾಡುವ ಪ್ರವೃತ್ತಿ ಬೆಳೆಯಬೇಕು ಎಂದರು.
ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿದರು.
ಇಳಕಲ್ಲನ ಡಾ.ವಿಜಯಮಹಾಂತಸ್ವಾಮೀಜಿ, ಗುರುಮಹಾಂತಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವ ಸಂಸ್ಕೃತಿ ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಬಿ.ಎನ್.ಸುರೇಶ್ವರ, ರಾಜ್ಯ ಸಂಚಾಲಕ ರಮೇಶ ಈಳಗೇರ, ತಾಲೂಕು ಬಸವಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ನೀರಗೇರಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಪಿ.ದುಧಗಿ, ಪ್ರಮುಖರಾದ ಮೋಹನ್ಲಾಲ್ ಜೈನ್, ನಬಿಸಾಬ್ ಕುಷ್ಟಗಿ, ಮಲ್ಲಣ್ಣ ಪಲ್ಲೇದ್, ಗುರಪ್ಪ ಕುರಿ, ನಾಗಪ್ಪ ದೋಟಿಹಾಳ, ಪ್ರಕಾಶ ರಾಠೋಡ್ ಇತರರಿದ್ದರು.
ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.