ಆ್ಯಪ್ನಗರ

ಖೋಟಾ ನೋಟು ಪ್ರಕರಣ: ಮತ್ತಿಬ್ಬರ ಬಂಧನ

ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಖೋಟಾ ನೋಟು ರವಾನಿಸಿ, ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಪೊಲೀಸರು, ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ 16 ಲಕ್ಷ ರೂ. ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 30 Jun 2018, 12:00 am
ಕೊಪ್ಪಳ: ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಖೋಟಾ ನೋಟು ರವಾನಿಸಿ, ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಪೊಲೀಸರು, ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ 16 ಲಕ್ಷ ರೂ. ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web forged note case double arrest
ಖೋಟಾ ನೋಟು ಪ್ರಕರಣ: ಮತ್ತಿಬ್ಬರ ಬಂಧನ


ಅಬ್ದುಲ್ ರಹಮಾನ್ ಹಾಗೂ ಎಂ.ಎ.ಅಮ್ಜದ್ ಬಂಧಿತರು. ಚೆನ್ನೈಗೆ ತೆರಳಿದ್ದ ಕೊಪ್ಪಳದ ಪಿಐಗಳಾದ ಸೋಮಶೇಖರ್ ಹಾಗೂ ರಾಜಕುಮಾರ ವಾಜೆಂತ್ರಿ ನೇತೃತ್ವದ ತಂಡ, ಮಹಾನಗರ ಹೊರವಲಯದ ಮನೆಯೊಂದರಲ್ಲಿ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳು ಮೂಲತಃ ಬೆಂಗಳೂರಿನವರಾಗಿದ್ದಾರೆ. ‘‘2000, 500 ರೂ. ಮುಖಬೆಲೆಯ 1700 ಖೋಟಾ ನೋಟುಗಳು, ಮುದ್ರಣಕ್ಕೆ ಬಳಸಿದ ಪ್ರಿಂಟರ್, ಕಂಪ್ಯೂಟರ್, ಇಂಕ್ ಬಾಟಲ್, ಪೇಪರ್ ಸೇರಿ ಇತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ