ಆ್ಯಪ್ನಗರ

ಜೋಡೆತ್ತಿನ ಗಡ್ಡಿ ಬಂಡಿ ಸ್ಪರ್ಧೆಗೆ ಚಾಲನೆ

ತಾಲೂಕಿನ ಹಿರೇ ಮ್ಯಾಗೇರಿ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಮಂಗಳವಾರ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ನಡೆಯಿತು. ಕುದರಿಮೋತಿ ವಿಜಯ ಮಹಾಂತೇಶ ಸ್ವಾಮೀಜಿ ಚಾಲನೆ ನೀಡಿದರು.

Vijaya Karnataka Web 18 Apr 2018, 5:00 am
ಯಲಬುರ್ಗಾ : ತಾಲೂಕಿನ ಹಿರೇ ಮ್ಯಾಗೇರಿ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಮಂಗಳವಾರ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ನಡೆಯಿತು. ಕುದರಿಮೋತಿ ವಿಜಯ ಮಹಾಂತೇಶ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈತರು ಕೃಷಿ ಚಟುವಟಿಕೆ ಪೂರ್ಣಗೊಳಿಸಿದ ನಂತರ ಎತ್ತಿನಬಂಡಿ, ಗಡ್ಡಿ ಬಂಡಿ ಓಟದ ಸ್ಪರ್ಧೆಯ ಮೂಲಕ ಗ್ರಾಮೀಣ ಸೊಗಡು ಮೆರೆಯುವುದು ವಾಡಿಕೆಯಾಗಿದೆ. ಹಿಂದೆ ಈ ತರದ ಅನೇಕ ಸ್ಪರ್ಧೆ, ಆಟಗಳು ಇದ್ದವು, ಕಾಲಾನಂತರ ಮರೆಯಾಗಿವೆ. ಸಾಂಪ್ರದಾಯಿಕ ಆಟಕಗಳ ಬಗೆಗಿ ಇದ್ದಷ್ಟು ಆಸಕ್ತಿ, ಹೊಸ ಆಟಗಳಲ್ಲಿ ಇಲ್ಲ. ಯುವಜನರು ಆಧುನಿಕ ಸ್ಪರ್ಧೆಗಳಿಗೆ ಮಾರುಹೋಗದೇ ಗ್ರಾಮೀಣ ಪ್ರದೇಶದ ಆಟಗಳ ಬಗೆಗೆ ತಿಳಿದುಕೊಳ್ಳಬೇಕು ಎಂದರು. ಈ ಸಂದದರ್ಭದಲ್ಲಿ ಗ್ರಾಮದ ಮುಖಂಡರು ಸೇರಿದಂತೆ ರೈತರು ಇದ್ದರು.
Vijaya Karnataka Web KPL-17YLB14



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ