ಆ್ಯಪ್ನಗರ

ನಿಶ್ಯಕ್ತ ತಾಯಿಯನ್ನು ಮಗು ಸಾಕುತ್ತಿರುವ ಪ್ರಕರಣ: ಅಸ್ವಸ್ಥ ಮಹಿಳೆಗೆ ಮುಂದುವರಿದ ಚಿಕಿತ್ಸೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣ ಪಂಚಾಳ್‌ ಅವರು, ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿನೀಡಿ, ಮಹಿಳೆಯ ಆರೋಗ್ಯ ಸ್ಥಿತಿ ವಿಚಾರಿಸಿದರು. ''ಈ ಮಹಿಳೆ ಸಶಕ್ತಳಾಗುವವರೆಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುರಿಸಲಾಗುವುದು. ತಾಯಿಗೆ ಬಾಲಕಿಯೇ ಆರೈಕೆ ಮಾಡುತ್ತಿರುವ ವಿಷಯ ಗೊತ್ತಾಯಿತು. ತಾಯಿ ಹಾಗೂ ಮಗು ಬೇರ್ಪಡಿಸುವುದು ಸರಿಯಲ್ಲ ಎನ್ನುವ ಉದ್ದೇಶದಿಂದ ತಾಯಿಯ ಹತ್ತಿರ ಮಗುವನ್ನು ಬಿಡಲಾಗಿದೆ. ತಾಯಿಯ ಆರೈಕೆಗೆ ಮಗು ನೆರವಾಗುತ್ತಿದೆ'' ಎಂದರು.

Vijaya Karnataka 28 May 2019, 10:00 am
ಕೊಪ್ಪಳ: ಆರು ವರ್ಷದ ಮಗಳ ಆರೈಕೆಯಲ್ಲಿದ್ದ ನಿರ್ಗತಿಕ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
Vijaya Karnataka Web Child Begging


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣ ಪಂಚಾಳ್‌ ಅವರು, ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿನೀಡಿ, ಮಹಿಳೆಯ ಆರೋಗ್ಯ ಸ್ಥಿತಿ ವಿಚಾರಿಸಿದರು. ''ಈ ಮಹಿಳೆ ಸಶಕ್ತಳಾಗುವವರೆಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುರಿಸಲಾಗುವುದು. ತಾಯಿಗೆ ಬಾಲಕಿಯೇ ಆರೈಕೆ ಮಾಡುತ್ತಿರುವ ವಿಷಯ ಗೊತ್ತಾಯಿತು. ತಾಯಿ ಹಾಗೂ ಮಗು ಬೇರ್ಪಡಿಸುವುದು ಸರಿಯಲ್ಲ ಎನ್ನುವ ಉದ್ದೇಶದಿಂದ ತಾಯಿಯ ಹತ್ತಿರ ಮಗುವನ್ನು ಬಿಡಲಾಗಿದೆ. ತಾಯಿಯ ಆರೈಕೆಗೆ ಮಗು ನೆರವಾಗುತ್ತಿದೆ'' ಎಂದರು.


''ಮಹಿಳೆಯ ಆಕೆಯ ಪತಿಯನ್ನು ಸಂಪರ್ಕಿಸಿ ವಿಷಯ ಮುಟ್ಟಿಸಲಾಗುವುದು. ಅವರು ಈ ಮಹಿಳೆಯನ್ನು ಕರೆದುಕೊಂಡು ಹೋದರೆ ಪರವಾಗಿಲ್ಲ. ಒಂದು ವೇಳೆ ಕರೆದೊಯ್ಯಲು ಹಿಂದೇಟು ಹಾಕಿದರೆ ಮಹಿಳೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುವುದು. ಬಾಲಕಿಗೆ ಬಾಲಕಿಯರ ಬಾಲ ಮಂದಿರದಲ್ಲಿ ವ್ಯವಸ್ಥೆ ಮಾಡಿ, ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗುವುದು. ಇನ್ನೊಬ್ಬ ಪುತ್ರ ಇರುವುನೆಂದು ತಿಳಿದುಬಂದಿದೆ. ಆತನಿಗೆ ಬಾಲಕರ ಬಾಲ ಮಂದಿರದಲ್ಲಿ ವ್ಯವಸ್ಥೆ ಕಲ್ಪಿಸಿ ಶಾಲೆಗೆ ಪ್ರವೇಶ ಒದಗಿಸಿಕೊಡಲಾಗುತ್ತದೆ'', ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಜಯಶ್ರೀ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಶಿವಲೀಲಾ ಹೊನ್ನೂರು ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ