ಆ್ಯಪ್ನಗರ

ಹಂಪಿ ವಿರೂಪಾಪುರ ಗಡ್ಡಿಯಲ್ಲಿ 'ವಿದೇಶಿ' ರೆಸಾರ್ಟ್‌ ಪುನಾರಂಭ: ಡಿಸಿ ಆದೇಶಕ್ಕೂ ಡೋಂಟ್ ಕೇರ್

ಹಂಪಿಯ ವಿರೂಪಾಪುರ ಗಡ್ಡಿಯಲ್ಲಿರುವ ರೆಸಾರ್ಟ್‌ಗಳು ವಿದೇಶೀಯರ ಮೋಜು, ಮಸ್ತಿಗೆ ಹೆಸರುವಾಸಿ. ಈ ರೆಸಾರ್ಟ್‌ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದ್ರೆ, ಇದೀಗ ಡಿಸಿ ಆದೇಶಕ್ಕೆ ವಿರುದ್ಧವಾಗಿ ಮತ್ತೆ ರೆಸಾರ್ಟ್ ಪುನಾರಂಭವಾಗಿವೆ.

Vijaya Karnataka 27 Sep 2019, 6:40 pm
ಕೊಪ್ಪಳ: ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡಿಯಲ್ಲಿ ಜಿಲ್ಲಾಡಳಿತದ ಆದೇಶದ ವಿರುದ್ಧ ರೆಸಾರ್ಟ್‌ ಚಟುವಟಿಕೆ ಪುನಾರಂಭವಾಗಿವೆ. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web hampi resort


ಇ-ಸೈಕಲ್ ಹತ್ತಿ, ಮೈಸೂರು ಸುತ್ತಿ!: ಸಾಂಸ್ಕೃತಿಕ ಸೊಗಡು ಪರಿಚಯಿಸುತ್ತೆ ‘ಅನುಭವ ಪ್ರವಾಸ’

ಜಿಲ್ಲಾಡಳಿತದ ಆದೇಶ ಲೆಕ್ಕಿಸದೆ ವಿರೂಪಾಪುರ ಗಡ್ಡಿಯಲ್ಲಿ ರೆಸಾರ್ಟ್‌ ವಹಿವಾಟು ಮತ್ತೆ ಆರಂಭವಾಗಿದ್ದು, 45 ದಿನಗಳ ನಂತರ ಚಟುವಟಿಕೆಗೆ ಮಾಲೀಕರು ಸಜ್ಜಾಗಿದ್ದಾರೆ. ಆನೆಗೊಂದಿ ಮತ್ತು ಹಂಪಿ ಮಧ್ಯದಲ್ಲಿರುವ ವಿರುಪಾಪುರ ಗಡ್ಡಿಯು ವಿದೇಶಿಗರಿಗೆ ಮೆಚ್ಚಿನ ತಾಣವಾಗಿದೆ. ತುಂಗಭದ್ರಾ ನದಿಯ ಕವಲಾಗಿ ಸೃಷ್ಟಿಯಾಗಿರುವ ನಡುಗಡ್ಡಿಯಲ್ಲಿ ವಿರುಪಾಪುರ ಗಡ್ಡಿ ಇದ್ದು, ಇಲ್ಲಿ ಮನೆಗಳಿಗಿಂತ ರೇಸಾರ್ಟ್‌ಗಳೇ ಹೆಚ್ಚಾಗಿವೆ. ಸುಮಾರು 30 ರೆಸಾರ್ಟ್‌ಗಳಿದ್ದು, ವಿದೇಶಿಗರಿಷ್ಟೇ ಅಲ್ಲದೆ ಹೈದರಬಾದ್‌, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಅನೇಕ ಕಡೆಗಳಿಂದ ಪ್ರವಾಸಿಗರು ವಿರುಪಾಪುರ ಗಡ್ಡಿಗೆ ಮೋಜು, ಮಸ್ತಿಗಾಗಿ ಆಗಮಿಸುತ್ತಾರೆ ಎಂದು ಆರೋಪಿಸಿದರು.

ಜಿರಳೆಯಂತೆ ನುಸುಳಿ ಬರ್ತಾರೆ ಉಗ್ರರು! ಗಡಿಯಲ್ಲಿ ಸೇನಾ ಕ್ಯಾಮರಾಗೆ ಸೆರೆ ಸಿಕ್ಕ ಟೆರರ್!

ಮರಳಿ ರೆಸಾರ್ಟ್‌ಗಳು ಪ್ರಾರಂಭಗೊಂಡಲ್ಲಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ವಿರುಪಾಪುರ ಗಡ್ಡಿಯಲ್ಲಿಯೇ ಅಂಜನಾದ್ರಿ ದೇವಸ್ಥಾನವಿದ್ದು, ಅದನ್ನು ಮರೆಮಾಚಿ ದೇವಸ್ಥಾನದ ಮುಂದೆಯೇ ಒಂದು ರೆಸಾರ್ಟ್‌ ನಿರ್ಮಿಸಿದ್ದಾರೆ.

ಯಾವುದೇ ರೆಸಾರ್ಟ್‌ ಮಾಲೀಕರ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ, ವಿರುಪಾಪುರ ಗಡ್ಡಿಯಲ್ಲಿರುವ ಎಲ್ಲಾ ರೆಸಾರ್ಟ್‌ಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಂಚಿ ಮಠದ ಆನೆಗಳ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ!: ಹೃದಯಹೀನ 'ಸರ್ಕಾರಿ' ಮಾವುತರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ