ಆ್ಯಪ್ನಗರ

ಆರೋಗ್ಯ ನಿರೀಕ್ಷ ಕರು ಭೇಟಿ : ಪರಿಶೀಲನೆ

ನಗರದ 14ನೇ ವಾರ್ಡಿನ ಜನರು ವಾಸಿಸುವ ಸ್ಥಳದಲ್ಲಿ ಕಲಾಯಿಗಾರರು ಕೊಡ ತಯಾರಿಕೆ ಘಟಕ ನಿರ್ಮಿಸಿಕೊಂಡು ಕೆಲಸ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ, ನಗರಸಭೆ ಆರೋಗ್ಯ ನಿರೀಕ್ಷ ಕರು ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Vijaya Karnataka 11 Jul 2018, 5:00 am
ಗಂಗಾವತಿ : ನಗರದ 14ನೇ ವಾರ್ಡಿನ ಜನರು ವಾಸಿಸುವ ಸ್ಥಳದಲ್ಲಿ ಕಲಾಯಿಗಾರರು ಕೊಡ ತಯಾರಿಕೆ ಘಟಕ ನಿರ್ಮಿಸಿಕೊಂಡು ಕೆಲಸ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ, ನಗರಸಭೆ ಆರೋಗ್ಯ ನಿರೀಕ್ಷ ಕರು ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Vijaya Karnataka Web KPL-KPL10CM02


ಹಲವು ವರ್ಷಗಳಿಂದ ನಗರದ ಅಮರ ಭಗತ್‌ಸಿಂಗ್‌ ನಗರದಲ್ಲಿ ಕಲಾಯಿಗಾರರು ಕೊಡ ತಯಾರಿಕೆ ಕೆಲಸವನ್ನು ಮಾಡುತ್ತಿದ್ದಾರೆ. ಕೊಡ ಕೆಮಿಕಲ್‌ ಬಳಸಿ ತಯಾರಿಸುತ್ತಾರೆ. ಉಳಿದ ಹಾಗೂ ಹಾಳಾಗಿರುವ ಕೆಮಿಕಲ್‌ ಚರಂಡಿಯಲ್ಲಿ ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಕೊಡ ತಯಾರಿಕೆ ಮಾಡುವಾಗ ಬರುವ ಶಬ್ದ ಹಾಗೂ ಕೆಮಿಕಲ್‌ ವಾಸನೆಯಿಂದಾಗಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಊರಿನ ಹೊರ ಭಾಗಕ್ಕೆ ತಯಾರಿಕ ಘಟಕ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಥಳಕ್ಕೆ ನಗರಸಭೆ ಆರೋಗ್ಯ ನಿರೀಕ್ಷಕಿ ಸ್ವಾತಿ ಭೇಟಿ ನೀಡಿ, ದಾಖಲೆ ಪರಿಶೀಲನೆ ನಡೆಸಿದರು. ಸ್ಥಳೀಯರಾದ ರಂಜಾನ್‌ಸಾಬ್‌, ಶಾಮೀದ್‌ ಅಲಿ, ಮೈಬೂಬ್‌ಸಾಬ್‌, ದುರುಗಪ್ಪ, ರವಿ, ಖಾದರಬೀ, ರೈಮತ್‌ಸಾಬ್‌ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ