ಆ್ಯಪ್ನಗರ

‘ಕಾರ್ಮಿಕರೆಲ್ಲರೂ ಒಗ್ಗೂಡಿದರೆ ಜಯ’

ಕಾರ್ಮಿಕರ ಮೇಲೆ ದೌರ್ಜನ್ಯ, ಅನ್ಯಾಯ ನಡೆಯುತ್ತಿದ್ದು, ದುಡಿಯುವ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಜಯ ಕಟ್ಟಿಟ್ಟ ಬುತ್ತಿ ಎಂದು ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ ಹೇಳಿದರು.

Vijaya Karnataka 2 May 2018, 5:00 am
ಕೊಪ್ಪಳ : ಕಾರ್ಮಿಕರ ಮೇಲೆ ದೌರ್ಜನ್ಯ, ಅನ್ಯಾಯ ನಡೆಯುತ್ತಿದ್ದು, ದುಡಿಯುವ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಜಯ ಕಟ್ಟಿಟ್ಟ ಬುತ್ತಿ ಎಂದು ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ ಹೇಳಿದರು.
Vijaya Karnataka Web KPL-KPL01MGB06


ನಗರದ ಸಾಹಿತ್ಯ ಭವನದ ಎದುರು ಟಿಯುಸಿಐ ಸೇರಿದಂತ ನಾನಾ ಸಂಘಟನೆ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕಾ ಉತ್ಪಾದನಾ ಕ್ಷೇತ್ರ ಸಿಂಹಪಾಲು ಹೊಂದಿದೆ. ಸಾರ್ವಜನಿಕ ಪಾಲುದಾರಿಕೆ, ಸರಕಾರಿ ಸ್ವಾಮ್ಯದ ನವರತ್ನಗಳನ್ನು ಬಲಹೀನಗೊಳಿಸಿ ವಿದೇಶಿ ನೇರ ಹೂಡಿಕೆಯ ಹೆಸರಿನಲ್ಲಿ ನವ ಉದಾರ ನೀತಿಗೆ ದೇಶ ಶರಣಾಗಿಸಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶಪಡಿಸಲಾಗುತ್ತಿದೆ ಎಂದು ಟೀಕಿಸಿದರು.

ದೇಶದ ಕಾರ್ಮಿಕರ ಮತ್ತು ಉದ್ಯಮ ಸ್ನೇಹಕ್ಕಾಗಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ 44 ಕಾರ್ಮಿಕ ಕಾನೂನು ರಚನೆಗೊಂಡವು. ಪ್ರಧಾನಿ ನರೇಂದ್ರ ಮೋದಿಯವರು 44 ಕಾನೂನುಗಳನ್ನು 4 ಲೇಬರ್‌ ಕೋಡ್‌ಗಳಲ್ಲಿ ಹಂಚಿಕೆ ಮಾಡಿ ಶಕ್ತಿಯುತವಾದ ಕಾನೂನುಗಳ ಕತ್ತು ಹಿಸುಕಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಭಾರತದ ಈಗಿರುವ ಲೇಬರ್‌ ಲಾ ಗಳು ಕೈಗಾರಿಕೆ ಮತ್ತು ಉದ್ಯಮ ಸ್ನೇಹಿಯಾಗಿಲ್ಲವೆಂದು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾರುವುದರ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ಉದ್ಯೋಗಿಗಳು ಕಾಯಂಗೊಳಿಸುವ ಅವಶ್ಯಕತೆ ಇಲ್ಲವೆಂದು ನಿಗದಿತ ಅವಧಿಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಈಗಾಗಲೇ ಇದರ ರಹಸ್ಯ ಕಾರ್ಯಸೂಚಿಯಾಗಿ ಮೋದಿ ಕಾಂಟ್ಯಾಕ್ಟ್ ಎನ್ನುವ ಸ್ಕೀಮ್‌ ಪರಿಚಯಿಸಿ ಉದ್ಯೋಗ ಅರಸುವ ನವ ಯುವಕರನ್ನು ಕಡಿಮೆ ಸಂಬಳ ನೀಡಿ, ಅನಿರ್ಧಿಷ್ಟಾವಧಿಗೆ ಟ್ರೈನಿ, ಎಟಿಎಸ್‌, ಗುತ್ತಿಗೆ ಹೆಸರಿನಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಇನ್ನೂ ಸಂಘಟಿತ ವಲಯದ ಕೈಗಾರಿಕೆಗಳ ಸ್ಥಿತಿ ಹೀಗಾದರೆ ಶೇ.94 ರಷ್ಟು ಅಸಂಘಟಿತ ಕಾರ್ಮಿಕರ ಭದ್ರತೆ ಇಲ್ಲದಂತದಾಗಿದೆ. ಇದರಿಂದ ಕಾರ್ಮಿಕರು ಸಂಘಟಿತರಾಗಬೇಕು ಎಂದರು.

ಸಾಹಿತ್ಯ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ, 1886ರ ಮೇ ಆರಂಭದ ದಿನಗಳಲ್ಲಿ ಅಮೆರಿಕಾದಲ್ಲಿ ಕೈಗಾರಿಕೆ ಮಾಲೀಕರು 12 ರಿಂದ 16 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದನ್ನು ಸಹಿಸಿಕೊಳ್ಳಲಾಗದೇ ಸಾವಿರಾರು ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡಿದ ಪರಿಣಾಮ ಕಾರ್ಮಿಕ ದಿನ ಆಚರಿಸಲಾಗುತ್ತಿದೆ ಎಂದರು.

ಕೆಆರ್‌ಎಸ್‌ ರಾಜ್ಯಾಧ್ಯಕ್ಷ ಡಿ.ಎಚ್‌.ಪೂಜಾರ ಅವರು ಮಾತನಾಡಿದರು. ಟಿಯುಸಿಐ ಜಿಲ್ಲಾಧ್ಯಕ್ಷ ಚನ್ನವೀರಯ್ಯ ಹಿರೇಮಠ, ಕಾರ್ಮಿಕ ಮುಖಂಡರಾದ ಶಿವಣ್ಣ ಭೀಮನೂರು, ರತ್ನಮ್ಮ, ಮಂಜುನಾಥ ಕಾಯಗಡ್ಡಿ, ಮೂಕಪ್ಪ ಮೇಸ್ತ್ರಿ, ಕೆ.ಗಾಳೆಪ್ಪ, ಶಂಕರಗೌಡ ಹಿರೇಮನಿ ಸೇರಿದಂತೆ ಇತರರು ಇದ್ದರು. ಇದಕ್ಕೂ ಮೊದಲು ಶ್ರೀಗವಿಮಠ ಆವರಣದಿಂದ 132ನೇ ವಿಶ್ವಕಾರ್ಮಿಕರ ದಿನಾಚರಣೆ ನಿಮಿತ್ತ ಬೃಹತ್‌ ರಾರ‍ಯಲಿ ಸಾಹಿತ್ಯ ಭವನದವರೆಗೆ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ