ಆ್ಯಪ್ನಗರ

ಸ್ವರ್ಗದಲ್ಲಿರುವ ಇಂದಿರಾ, ರಾಜೀವ್‌ ಗಾಂಧಿ ಬಂದರೂ ಬಿಜೆಪಿ ಸರಕಾರ ಬೀಳಲ್ಲ: ಈಶ್ವರಪ್ಪ

ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಮೂರ್ಖತನದಿಂದ ಕೂಡಿದೆ. ಅಂತಹ ಹೇಳಿಕೆಗಳಿಗೆ ಬೆಲೆ ಕೊಡುವುದಿಲ್ಲ. ಸ್ವರ್ಗದಲ್ಲಿರುವ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಬಂದರೂ ಬಿಜೆಪಿ ಸರಕಾರ ಬೀಳಲ್ಲ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Vijaya Karnataka Web 21 Oct 2020, 5:06 pm
ಕೊಪ್ಪಳ: ಸ್ವರ್ಗದಲ್ಲಿ ಇರುವ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಂದರೂ ಬಿಜೆಪಿ‌ ಸರಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Vijaya Karnataka Web if indira gandhi rajiv gandhi comes bjp government not fall says ks eshwarappa
ಸ್ವರ್ಗದಲ್ಲಿರುವ ಇಂದಿರಾ, ರಾಜೀವ್‌ ಗಾಂಧಿ ಬಂದರೂ ಬಿಜೆಪಿ ಸರಕಾರ ಬೀಳಲ್ಲ: ಈಶ್ವರಪ್ಪ


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಹೇಳಿಕೆ ಮೂರ್ಖತನದಿಂದ ಕೂಡಿದೆ. ಅಂತಹ ಹೇಳಿಕೆಗಳಿಗೆ ಬೆಲೆ ಕೊಡುವುದಿಲ್ಲ. ತಕ್ಷಣ ಪಕ್ಷದಿಂದ ಹೊರ ಹಾಕುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಅವರಿಗೆ ನೊಟೀಸ್ ನೀಡುವ ಅವಶ್ಯಕತೆಯೂ ಇಲ್ಲ. ಬಸನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಕ್ರಮ‌ಕೈಗೊಳ್ಳುತ್ತೇವೆ ಎಂದರು.

ಕೆಲವರಿಗೆ ಬಾಯಿ ಚಪಲ.‌ ಸಿಎಂ‌ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದಿದೆ. ಸಭೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಏನೇನಾಗಬೇಕು ಹೇಳಿ ಎಂದು ಸಿಎಂ ಕೇಳಿದ್ದಾರೆ. ಆಗ ಸುಮ್ಮನೆ ಬಾಯಿ ಮುಚ್ಚಿಕೊಂಡು ಕುಳಿತು ಇದಕ್ಕಿಂದ್ದಂತೆ ಉತ್ತರನ ಪೌರುಷನಂತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಇಡೀ ಕರ್ನಾಟಕದ ಕಾಂಗ್ರೆಸ್ ವ್ಯಕ್ತಿಗಳಿಗೆ ಸಂತೋಷ ಆಗಿರಬಹುದು ಎಂದು ಹೇಳಿದ್ದಾರೆ.

ಬಿಎಸ್‌ವೈ ನೇತೃತ್ವದಲ್ಲಿಯೇ ಮುಂದಿನ ಎಲೆಕ್ಷನ್..!‌‌ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಕಟೀಲ್‌

‌ಸರಕಾರ ಬಿದ್ದರೆ ನಾವೇ ಜವಾಬ್ದಾರಿ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸರಕಾರ ಬೀಳುತ್ತದೆ ಎಂದು ಕನಸು ಕಾಣುವ ಅವಶ್ಯಕತೆ ಇಲ್ಲ.‌ ಕಳೆದ ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ಹಿಂದಿನ ಸರಕಾರ ಹಣ ನೀಡಿರಲಿಲ್ಲ. ಈಗಾಗಲೇ ಇಲಾಖೆಯಿಂದ ಅಧಿಕಾರಿಗಳ ಸರ್ವೇ ನಡೆಸಲು ಸೂಚಿಸಿದ್ದು ನಷ್ಟವಾಗಿರುವ ಕುರಿತು ವರದಿ ಬಂದ ತಕ್ಷಣ ಹಣ ನೀಡಲಾಗುವುದು ಎಂದಿದ್ದಾರೆ.

ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಸದ್ದು, ಬಿಎಸ್‌ವೈಗೆ ಆಪ್ತರದ್ದೇ ಕಾಟ!

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ನಡಾವಳಿಗೆ ಸಂಬಂಧವಿಲ್ಲ. ಕಳೆದ ಬಾರಿ ಸಮ್ಮಿಶ್ರ ಸರಕಾರದಲ್ಲಿ ಒಬ್ಬ ಸಚಿವರು ಪ್ರವಾಸ ಮಾಡಿರಲಿಲ್ಲ. ಸಿದ್ದರಾಮಯ್ಯ, ದೇವೇಗೌಡ ಪ್ರವಾಸ ಮಾಡಲಿಲ್ಲ. ಈಗ ಕುರ್ಚಿ ಆಸೆ ಕಾಣುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಬಿಎಸ್‌ವೈ ವಿರುದ್ಧ ಬಹಿರಂಗ ಹೇಳಿಕೆ, ಯತ್ನಾಳ್ ವಿರುದ್ಧ ಆಗುತ್ತಾ ಶಿಸ್ತು ಕ್ರಮ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ