ಆ್ಯಪ್ನಗರ

ಅಧಿಕಾರ ಬೇಕಂದ್ರೆ ಸಾಯಲು ಸಿದ್ಧ ಇರ್ಬೇಕು: ಮೋದಿಗೆ ರಾಯರೆಡ್ಡಿ ಟಾಂಗ್

ನನಗೇನು ಕೆಂಪು ಲೈಟು ಹೋಗಿದ್ದಕ್ಕೆ ಡಿಫರೆನ್ಸ್ ಇಲ್ಲ..ನಾನು ಸೆಕ್ಯೂರಿಟಿ ತಗೆದು ಹಾಕಿ ಎಂದು ಪ್ರಧಾನಿ ಮೋದಿಗೆ ಹೇಳುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು.

ವಿಕ ಸುದ್ದಿಲೋಕ 22 Apr 2017, 8:39 am
ಕೊಪ್ಪಳ: ನನಗೇನು ಕೆಂಪು ಲೈಟು ಹೋಗಿದ್ದಕ್ಕೆ ಡಿಫರೆನ್ಸ್ ಇಲ್ಲ..ನಾನು ಸೆಕ್ಯೂರಿಟಿ ತಗೆದು ಹಾಕಿ ಎಂದು ಪ್ರಧಾನಿ ಮೋದಿಗೆ ಹೇಳುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು.
Vijaya Karnataka Web if you want power then should ready to die karnataka minister taunts to pm modi
ಅಧಿಕಾರ ಬೇಕಂದ್ರೆ ಸಾಯಲು ಸಿದ್ಧ ಇರ್ಬೇಕು: ಮೋದಿಗೆ ರಾಯರೆಡ್ಡಿ ಟಾಂಗ್


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿಯವರು ನಿಜವಾಗಿಯೂ ಮಾಡಬೇಕಾಗಿದ್ದು ಸೆಕ್ಯೂರಿಟಿ ತಗೆದುಹಾಕಬೇಕು. ತಮ್ಮ ಸೆಕ್ಯೂರಿಟಿ ಮೊದಲು ತಗೆದುಹಾಕಲಿ ಎಂದ ರಾಯರೆಡ್ಡಿ, ಮೋದಿಗೆ ಜೀವ ಬೆದರಿಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಅಧಿಕಾರ ಬೇಕಂದ್ರೆ ಸಾಯಬೇಕೆಂದ ರಾಯ ರೆಡ್ಡಿ, ಅಧಿಕಾರ ಬೇಡಾ ಅಂದ್ರೆ ಮನೆಯಲ್ಲಿ ಕೂರಬೇಕು ಎಂದು ಸಲಹೆ ನೀಡಿದರು.

ಮೋದಿ ಮಾಡ್ತಿರೋದು ಕೇವಲ ಶೋ ಆಫ್ ಬ್ಯುಸಿನೆಸ್. ಜೀವ ಭಯ ಇದ್ರೆ ಸಾರ್ವಜನಿಕರ ಜೀವನಕ್ಕೆ ಬರಬಾರದು. ಅಕ್ಕಮಹಾದೇವಿ ವಚನ ಹೇಳಿ, ಸಂತೆಯಲ್ಲಿ ಮನೆ ಮಾಡಿದ್ರೆ ಗದ್ದಲಕ್ಕೆ ಅಂಜುವರೆ ಎಂದು ರಾಯರೆಡ್ಡಿ ಪ್ರಶ್ನಿಸಿದರು.

ಯಡಿಯೂರಪ್ಪ ಖಂಡನೆ
ಪ್ರಧಾನಿ ನರೇಂದ್ರ ಮೋದಿ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಖಂಡಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾವ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಹುದು ಎನ್ನುವುದಕ್ಕೆ ರಾಯರೆಡ್ಡಿಯೇ ತಾಜಾ ನಿದರ್ಶನ. ಪ್ರಧಾನಿ ಅವರಿಗೆ ಪ್ರಾಣ ಬೆದರಿಕೆ ಇದ್ದರೆ ಸಾಯಲಿ ಬಿಡಿ ಎಂದಿರುವುದು ಅವರ ತಲೆ ತಿರುಕ ಹೇಳಿಕೆಯಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಇಂತಹ ಹೊಣೆಗೇಡಿತನ ಹೇಳಿಕೆ ನೀಡಿರುವ ರಾಯರೆಡ್ಡಿ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕು. ತಮ್ಮ ದುರುದ್ದೇಶಪೂರಿತ ಹೇಳಿಕೆಗೆ ದೇಶದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ