ಆ್ಯಪ್ನಗರ

ತಕ್ಷಣ ರೈತರ ಬೆಳೆ ವಿಮೆ ಬಗ್ಗೆ ಕ್ರಮ ಕೈಗೊಳ್ಳಿ

2016-17 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆವಿಮೆ ಪರಿಹಾರ ಅರ್ಧದಷ್ಟು ರೈತರಿಗೆ ದೊರಕಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಸದ ಸಂಗಣ್ಣ ಕರಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Vijaya Karnataka 3 Jul 2018, 5:00 am
ಕೊಪ್ಪಳ : 2016-17 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆವಿಮೆ ಪರಿಹಾರ ಅರ್ಧದಷ್ಟು ರೈತರಿಗೆ ದೊರಕಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಸದ ಸಂಗಣ್ಣ ಕರಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web KPL-KPL02MGB02


ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೆಳೆ ವಿಮೆ ಪರಿಹಾರ ಕುರಿತು ತುರ್ತು ಸಭೆಯಲ್ಲಿ ಸೋಮವಾರ ಮಾತನಾಡಿದರು.

ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ ಸೇರಿ ಹಿಂಗಾರು ಬಿತ್ತನೆ ಪ್ರದೇಶದ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ದೊರೆಯಬೇಕಾದ ವಿಮೆ ಪರಿಹಾರ ದೊರಕಿಲ್ಲ. ಮೂರು ಗ್ರಾ.ಪಂ.ಗಳ ಕೇವಲ 1159 ರೈತರಿಗೆ ಮಾತ್ರ ವಿಮೆ ಪರಿಹಾರ ಬಂದಿದೆ. ಪ್ರಮುಖ ಹಿಂಗಾರು ಬಿತ್ತನೆ ಪ್ರದೇಶದ ರೈತರಿಗೆ ಬಂದಿಲ್ಲ. ಇದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ, ರೈತರಿಗೆ ವಿಮೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಮಾತನಾಡಿ, ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ. ಆದರೆ, 1400 ರೈತರು ಬಿತ್ತನೆ ಮಾಡಿಲ್ಲ ಎಂದು ವಿಮೆ ಕಂಪನಿ ವರದಿ ನೀಡಿತ್ತು. ಇದಕ್ಕೆ ಸರಿಯಾದ ಮಾಹಿತಿಯನ್ನು ವಿಮೆ ಕಂಪನಿಗೆ ಒದಗಿಸಲಾಗಿದೆ. ಸದ್ಯ 33,877 ರೈತರಿಗೆ ವಿಮೆ ಪರಿಹಾರದ ಲಾಭ ಪಡೆದಿದ್ದು, 3055.17 ಲಕ್ಷರೂ ಪರಿಹಾರ ಮೊತ್ತವಿದ್ದು, ಇದರಲ್ಲಿ 9 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಜಿಲ್ಲಾದ್ಯಂತ ವಿಮೆ ಕಂಪನಿಯಿಂದ 77 ಕೋಟಿ ರೂ. ಪರಿಹಾರ ಬರಬೇಕಾಗಿದೆ. ಆದರೆ, ಸದ್ಯ 37 ಕೋಟಿ ರೂ. ಬರಲಿದೆ. ಬಾರದ ವಿಮೆ ಪರಿಹಾರದ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶ ಹೊನ್ನಪ್ಪ ಗೋವಿಂದಗೌಡ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ