ಆ್ಯಪ್ನಗರ

ಭತ್ತದ ನಗರದಲ್ಲಿ ಅಕ್ಷರ ಜಾತ್ರೆಗೆ ಕ್ಷಣಗಣನೆ

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕ್ಷ ಣಗಣನೆ ಶುರುವಾಗಲಿದೆ.

Vijaya Karnataka 30 Jul 2018, 5:00 am
ಗಂಗಾವತಿ : ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕ್ಷ ಣಗಣನೆ ಶುರುವಾಗಲಿದೆ.
Vijaya Karnataka Web KPL-KPL29CM05


ಜುಲೈ 30,31 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಹಿರಿಯ ಪತ್ರಕರ್ತ ವೀಶ್ವೇಶ್ವರ ಭಟ್‌ ಸಮಾರಂಭ ಉದ್ಘಾಟನೆ, ಹಾಸ್ಯ ಸಾಹಿತಿ ಬಿ.ಪ್ರಾಣೇಶ ಸಮ್ಮೇಳನದ ಸರ್ವಾಧ್ಯಕ್ಷ , ಶಾಸಕ ಪರಣ್ಣ ಮುನವಳ್ಳಿ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಪರಿಷತ್ತು ಧ್ವಜಾರೋಹಣ , ಕಸಾಪ ತಾಲೂಕು ಅಧ್ಯಕ್ಷ ಎಸ್‌.ಬಿ.ಗೊಂಡಬಾಳ ಕನ್ನಡ ಧ್ವಜಾರೋಹಣ, ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ದೇವಪ್ಪ ಕಾಮದೊಡ್ಡಿ ಪಥ ಸಂಚಲನ ಉದ್ಘಾಟನೆ, ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷ ರ ಮೆರವಣಿಗೆಗೆ ತಾ.ಪಂ.ಅಧ್ಯಕ್ಷ ವಿರೂಪಾಕ್ಷ ಗೌಡ ಮಾಲಿಪಾಟೀಲ್‌ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಸಾಹಿತಿಗಳಾದ ಲಿಂಗಾರೆಡ್ಡಿ ಆಲೂರು, ಶಿವಾನಂದ ಮೇಟಿ, ರಾಘವೇಂದ್ರ ದಂಡಿನ್‌, ಡಾ.ಡಿ.ಕೆ.ಮಾಳೆ, ನಿಜಲಿಂಗಪ್ಪ ಮೆಣಸಗಿ, ಡಾ.ನಾರಾಯಣ ಕಂದಗಲ್‌, ಎಸ್‌.ಬಿ.ಪಾಟೀಲ್‌ ಗುಂಡೂರು, ಶರಣಬಸಪ್ಪ ಬಿಳಿಎಳೆ, ಭಾರತಿ ನೀರಲಗೇರಿ, ಡಾ. ಶಾರದಾ ಪಾಟೀಲ್‌, ಗಂಗಮ್ಮ ಹಿರೇಮಠ, ಡಾ.ಮುಮ್ತಾಜ್‌ ಬೇಗಂ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಲಿದ್ದಾರೆ.

ಸಿಂಗಾರಗೊಂಡ ನಗರ: ಸಾಹಿತ್ಯ ಸಮ್ಮೇಳನಕ್ಕೆ ನಗರವು ಸಂಪೂರ್ಣ ಸಿಂಗಾರಗೊಂಡಿದೆ. ನಗರದ ಪ್ರಮುಖ ವೃತ್ತಗಳು ಸೇರಿದಂತೆ ಎಲ್ಲ ಸರ್ಕಲ್‌ಗಳಿಗೂ ದೀಪಾಂಲಕಾರದ ಜತೆಗೆ ಕನ್ನಡ ಧ್ವಜಗಳನ್ನು ಕಟ್ಟಿ ಸಿಂಗರಿಸಲಾಗಿದೆ. ಅಲ್ಲದೇ ಪ್ರಮುಖ ರಸ್ತೆಗಳಲ್ಲಿ ಮಹಾದ್ವಾರಗಳನ್ನು ಸ್ಥಾಪಿಸಿ ಕನ್ನಡ ಧ್ವಜಗಳನ್ನು ಹಾರಿಸಲಾಗಿದೆ. ಅಲ್ಲದೇ ಆಟೊ ಚಾಲಕ ಸಂಘಗಳ ಪದಾಧಿಕಾರಿಗಳು, ಆಟೊ ನಿಲ್ದಾಣಗಳಲ್ಲಿ ಕನ್ನಡ ಧ್ವಜ ಕಟ್ಟಿ ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ನಗರದಲ್ಲಿ ಸಂಪೂರ್ಣ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

24 ಪುಸ್ತಕ ಮಳಿಗೆಗಳು : ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳಿಗೆ ಅನುಕೂಲವಾಗುವ ರೀತಿಯಲ್ಲಿ 24 ಪುಸಕ್ತ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕೃಷಿ, ಹೈನುಗಾರಿಕೆ, ಗೃಹಕೈಗಾರಿಕೆ ವಸ್ತುಗಳ ಪ್ರದರ್ಶನ ನಡೆಯಲಿದೆ. ಅಲ್ಲದೇ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಊಟಕ್ಕಾಗಿ ಉರ್ದು ಶಾಲೆಯಲ್ಲಿ 10 ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಗಣ್ಯರಿಗೆ ಹಾಗೂ ಕಲಾವಿದರಿಗೆ ಎಂಎನ್‌ಎಂ ಬಾಲಕಿಯರ ಸರಕಾರಿ ಶಾಲೆಯಲ್ಲಿ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ