ಆ್ಯಪ್ನಗರ

ತೊಗರಿ ಬಿತ್ತನೆ ಕ್ಷೇತ್ರದಲ್ಲಿ ಹೆಚ್ಚಳ

ಬೆಲೆ ಇಳಿಕೆ ನಡುವೆಯೂ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೊಗರಿ ಬಿತ್ತನೆ ಕ್ಷೇತ್ರ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

Vijaya Karnataka 12 Jun 2018, 5:00 am
ಕುಷ್ಟಗಿ : ಬೆಲೆ ಇಳಿಕೆ ನಡುವೆಯೂ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೊಗರಿ ಬಿತ್ತನೆ ಕ್ಷೇತ್ರ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.
Vijaya Karnataka Web increase in sowing field
ತೊಗರಿ ಬಿತ್ತನೆ ಕ್ಷೇತ್ರದಲ್ಲಿ ಹೆಚ್ಚಳ


ಎರಡು ವಾರಗಳಿಂದ ಬಿತ್ತನೆ ಬೀಜ ಮಾರಾಟ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಾಗಿದ್ದು, ತಾವರಗೇರಾ ರೈತ ಸಂಪರ್ಕ ಕೇಂದ್ರ ಒಂದರಲ್ಲೇ ಇದುವರೆಗೆ 80ಕ್ವಿಂಟಲ್‌ ತೊಗರಿ ಬೀಜ ಮಾರಾಟವಾಗಿರುವುದು ಗಮನ ಸೆಳೆದಿದೆ. ಉಳಿದ ರೈತ ಸಂಪರ್ಕ ಕೇಂದ್ರಗಳಿಗೆ ಹೋಲಿಕೆ ಮಾಡಿದರೆ ತಾವರಗೇರಾ ಪ್ರದೇಶದಲ್ಲೇ ತೊಗರಿ ಬೀಜ ಹೆಚ್ಚಿಗೆ ಮಾರಾಟವಾಗಿದೆ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ತಾಲೂಕಿನ 5,500ಹೆಕ್ಟೇರ್‌ ಖುಷ್ಕಿ ಜಮೀನು, 400ಹೆಕ್ಟೇರ್‌ ನೀರಾವರಿ ಜಮೀನಿನಲ್ಲಿ ತೊಗರಿ ಬಿತ್ತನೆಯ ಗುರಿಯನ್ನು ನಿಗದಿಪಡಿಸಲಾಗಿದೆ. ರೈತರು ತೊಗರಿ ಬಿತ್ತನೆ ಬಗ್ಗೆ ತೋರುತ್ತಿರುವ ಆಸಕ್ತಿಯನ್ನು ಗಮನಿಸಿದರೆ ನಿಗದಿಯಾಗಿರುವ ಕ್ಷೇತ್ರಕ್ಕಿಂತ ಹೆಚ್ಚು ಪ್ರದೇಶದಲ್ಲಿ ತೊಗರಿ ಬಿತ್ತನೆಯ ಸಾಧ್ಯತೆಗಳಿವೆ.

ಕಾರಣ: ಕಳೆದ ವರ್ಷ ಮಾರುಕಟ್ಟೆಯಲ್ಲಿ ತೊಗರಿ ದರ ಪ್ರತಿ ಕ್ವಿಂಟಲ್‌ಗೆ 3-3.5ಸಾವಿರ ರೂ. ಇತ್ತು. ರೈತರ ಹೋರಾಟದ ಹಿನ್ನೆಲೆಯಲ್ಲಿ ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಮುಂದಾಗಿತ್ತು. ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 6,500ರೂ. ಇತ್ತು. ಪ್ರಸಕ್ತ ವರ್ಷವೂ ಸರಕಾರ ಬೆಂಬಲ ಬೆಲೆಯನ್ನು ಘೋಷಿಸಿ ತಮ್ಮ ನೆರವಿಗೆ ಬರಲಿದೆ ಎಂಬ ಮುಂದಾಲೋಚನೆಯಿಂದ ರೈತರು ತೊಗರಿ ಬಿತ್ತನೆ ಕ್ಷೇತ್ರವನ್ನು ಹೆಚ್ಚಿಸಿದ್ದಾರೆ.

ತಾಲೂಕಿನಲ್ಲಿ ಭಾನುವಾರ ಹದವಾದ ಮಳೆಯಾಗಿದೆ. ಮುಂಗಾರು ಬಿತ್ತನೆ ಪ್ರಕ್ರಿಯೆ ಚುರುಕು ಪಡೆದಿದೆ. ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬೀಜ ಖರೀದಿಗೆ ಮುಂದಾಗಿದ್ದಾರೆ. ರಸಗೊಬ್ಬರ ಬೆಲೆ ಹೆಚ್ಚಿದ್ದರೂ ಅನಿವಾರ್ಯ ಎಂಬಂತೆ ರೈತರು ಖರೀದಿಸುತ್ತಿದ್ದಾರೆ.

ಸಾಧ್ಯತೆ: ತಾಲೂಕಿನ ನಾನಾ ರೈತ ಸಂಪರ್ಕ ಕೇಂದ್ರ ಸೇರಿ ಮೆಕ್ಕೆಜೋಳ 449ಕ್ವಿ., ಸಜ್ಜೆ 312 ಕ್ವಿ., ತೊಗರಿ 116ಕ್ವಿ., ಸೂರ್ಯಕಾಂತಿ 106ಕ್ವಿ., ಹೆಸರು 109ಕ್ವಿ. ಬೀಜ ದಾಸ್ತಾನಿದೆ. ಮೇ 25ರಿಂದ ಇದುವರೆಗೆ ಮೆಕ್ಕೆಜೋಳ 241ಕ್ವಿ., ಸಜ್ಜೆ 172ಕ್ವಿ., ತೊಗರಿ 93ಕ್ವಿ., ಸೂರ್ಯಕಾಂತಿ 53.3ಕ್ವಿ., ಹೆಸರು 37.90ಕ್ವಿ. ಬೀಜ ಮಾರಾಟವಾಗಿದೆ. ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಬಿತ್ತನೆಗೆ ಇನ್ನೂ ಕಾಲಾವಕಾಶ ಇರುವುದರಿಂದ ಬೀಜ ಮಾರಾಟ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.

----

ಹೆಸರು ಬಿತ್ತನೆ ಬೀಜಕ್ಕೆ ಬೇಡಿಕೆ ಕಡಿಮೆಯಾಗಿದೆ. ತೊಗರಿಗೆ ಹೆಚ್ಚು ಬೇಡಿಕೆ ಇದೆ. ತಾವರಗೇರಾ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಸಜ್ಜೆ ಮತ್ತು ಮೆಕ್ಕೆಜೋಳ ಬೀಜಕ್ಕೂ ಮಸಾರಿ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದೆ.

ಶೇಖರಯ್ಯ ಹಿರೇಮಠ, ತಾಂತ್ರಿಕ ಸಹಾಯಕ ಕೃಷಿ ಇಲಾಖೆ ಕುಷ್ಟಗಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ