ಕುಕನೂರು; ಸಮೀಪದ ಬಳಗೇರಿ ಗ್ರಾಮದ ಇಬ್ಬರು ಟಂಟಂ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಲಪ್ಪ ಆಚಾರ್ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಸರಕಾರ ಪರಿಹಾರ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಬಳಗೇರಿ ಗ್ರಾಮದ ಬಸವ್ವ ಹುಚ್ಚೀರಪ್ಪ ಹಿರೇಮನಿ ಮತ್ತು ಕಳಕಪ್ಪ ಚಾಕರಿ ಕುಟುಂಬದವರಿಗೆ ಹಾಲಪ್ಪ ಆಚಾರ್ ಅವರು ತಲಾ 5000 ರೂ. ನಂತೆ 10ಸಾವಿರ ರೂ. ನೀಡಿದರು.
ಜಿ.ಪಂ. ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ತಾ.ಪಂ. ಸದಸ್ಯ ರಾಮಣ್ಣ ಹೊಸಮನಿ, ಗ್ರಾ.ಪಂ. ಅಧ್ಯಕ್ಷ ಗಣೇಶ ನಾಯಕ್, ಉಪಾಧ್ಯಕ್ಷ ಲಕ್ಷ ್ಮಣ ಕಮ್ಮಾರ್, ಮುಖಂಡ ಬಸವನಗೌಡ ತೊಂಡಿಹಾಳ, ಈರಪ್ಪ ಹಿರೇಮನಿ, ಮುದಿಯಪ್ಪ ಒಣಗೇರಿ, ಹನುಮಪ್ಪ ಗೋಧಿ ಹಾಗೂ ಗ್ರಾಮಸ್ಥರು ಇದ್ದರು.