ಆ್ಯಪ್ನಗರ

ಬಾಕಿ ವೇತನ ಪಾವತಿಗೆ ಒತ್ತಾಯ

ಅರಿಯರ್ಸ್‌ ಮತ್ತು ಬಾಕಿ ವೇತನ ಪಾವತಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಪುರಸಭೆ ಎದುರು ಹೊರಗುತ್ತಿಗೆ ಆಧಾರದ ಪೌರಸೇವಾ ನೌಕರರು ಕೈಗೊಂಡಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತದ ಗಮನ ಸೆಳೆಯಲು ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾರ‍ಯಲಿ ನಡೆಸಿದರು.

Vijaya Karnataka 12 Jun 2018, 5:00 am
ಕುಷ್ಟಗಿ : ಅರಿಯರ್ಸ್‌ ಮತ್ತು ಬಾಕಿ ವೇತನ ಪಾವತಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಪುರಸಭೆ ಎದುರು ಹೊರಗುತ್ತಿಗೆ ಆಧಾರದ ಪೌರಸೇವಾ ನೌಕರರು ಕೈಗೊಂಡಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತದ ಗಮನ ಸೆಳೆಯಲು ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾರ‍ಯಲಿ ನಡೆಸಿದರು.
Vijaya Karnataka Web KPL-KPL11KST02


ತಮಗೆ 7ತಿಂಗಳ ಬಾಕಿ ವೇತನ, 6ತಿಂಗಳ ಅರಿಯರ್ಸ್‌ ಬರಬೇಕಿದೆ. ಸಂಬಂಧಿಸಿದ ಗುತ್ತಿಗೆದಾರ ಇದುವರೆಗೆ ತಮಗೆ ವೇತನ ಮತ್ತು ಬಾಕಿ ವೇತನ ಪಾವತಿಸಿಲ್ಲ. ತಾವು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆಯಾಗಿದ್ದರೂ ತಮ್ಮ ಮೂಲ ಮಾಲೀಕ ಪುರಸಭೆಯಾಗಿರುವುದರಿಂದ ಪುರಸಭೆಯವರು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಸರಕಾರ ಜಾರಿ ಮಾಡಿರುವ ಹೊಸ ಆದೇಶದಲ್ಲಿ ಹೊರಗುತ್ತಿಗೆಯನ್ನು ರದ್ದುಪಡಿಸಿದ್ದು, ಕಾಯಂ ಪೌರಸೇವಾ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಸೂಚಿಸಿದೆ. ಹೊಸ ನೇಮಕಾತಿಯಲ್ಲಿ ತಮಗೆ ಮೊದಲ ಆದ್ಯತೆ ನೀಡಬೇಕು. ಗುತ್ತಿಗೆದಾರ ತಮ್ಮ ವೇತನದಲ್ಲಿ ಹಿಡಿದಿಟ್ಟುಕೊಳ್ಳುತ್ತಿದ್ದ ಪಿಎಫ್‌ ಹಾಗೂ ಇಎಸ್‌ಐ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಜಮಾ ಮಾಡಿಲ್ಲ. ಇದು ತಮ್ಮ ನೇಮಕಾತಿಗೆ ತೊಡಕಾಗಿದೆ. ಕಳೆದ 11 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳೀಯ ತಹಸೀಲ್ದಾರ್‌, ಜಿಲ್ಲಾಧಿಕಾರಿ ಯಾರೂ ಸ್ಥಳಕ್ಕೆ ಬಂದಿಲ್ಲ. ತಮ್ಮ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಲಾಗಿದೆ. ಹೀಗಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರತಿಭಟನೆ ರಾರ‍ಯಲಿ ನಡೆಸುತ್ತಿದ್ದೇವೆ ಎಂದು ಪ್ರತಿಭಟನೆಕಾರರು ತಿಳಿಸಿದರು.

ಇಲ್ಲಿನ ಪುರಸಭೆ ಆವರಣದಿಂದ ಆರಂಭಗೊಂಡ ರಾರ‍ಯಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ನೇತೃತ್ವವನ್ನು ಚಿನ್ನಪ್ಪ ಕೊಟ್ರಕಿ, ಮೋಹನ್‌ಲಾಲ್‌ ಜೈನ್‌, ವಿರೂಪಾಕ್ಷಿ ಚಲುವಾದಿ, ಮಾರುತಿ ಕಟ್ಟಿಮನಿ ವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ