ಆ್ಯಪ್ನಗರ

ನೀರಲ್ಲಿ ಮುಳಗಿದ ಹಿನ್ನೀರ ಬೆಳೆ

ನಿಧಾನವಾಗಿ ಜಲಾಶಯ ಭರ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಫಲವತ್ತಾದ ಹಿನ್ನೀರು ಪ್ರದೇಶದಲ್ಲಿ ಬಂಗಾರದ ಬೆಳೆ ಕಾಣುತ್ತಿದ್ದವರಿಗೆ ಈ ಬಾರಿ ಕೊನೆ ಹಂತದಲ್ಲಿ ನಿರಾಸೆಯೇ ಗತಿಯಾಗಿದೆ.

Vijaya Karnataka 16 Jul 2018, 4:39 pm
ಸುರೇಶ ಸಂಗರೆಡ್ಡಿ, ಅಳವಂಡಿ (ಕೊಪ್ಪಳ ತಾ.)
Vijaya Karnataka Web inverted backwaters
ನೀರಲ್ಲಿ ಮುಳಗಿದ ಹಿನ್ನೀರ ಬೆಳೆ


ನಿಧಾನವಾಗಿ ಜಲಾಶಯ ಭರ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಫಲವತ್ತಾದ ಹಿನ್ನೀರು ಪ್ರದೇಶದಲ್ಲಿ ಬಂಗಾರದ ಬೆಳೆ ಕಾಣುತ್ತಿದ್ದವರಿಗೆ ಈ ಬಾರಿ ಕೊನೆ ಹಂತದಲ್ಲಿ ನಿರಾಸೆಯೇ ಗತಿಯಾಗಿದೆ.

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಭಾಗದಲ್ಲಿ ಸಂಭ್ರಮ ಮೂಡಿದ್ದರೆ, ಈ ಹಿಂದೆ ಜಮೀನು ಬಿಟ್ಟುಕೊಟ್ಟವರ ಮುಖದಲ್ಲಿ ನಗೆ ಮಾಸಿದೆ. ಜಲಾಶಯಕ್ಕೆ ಜಮೀನು ಹೋಗಿದ್ದರೂ ಹಿನ್ನೀರು ಭಾಗದ ಅದೇ ಜಮೀನುಗಳಲ್ಲಿ ಕೆಲವು ವರ್ಷಗಳಿಂದ ರೈತರು ಬಿತ್ತನೆ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಲಾಶಯ ಭರ್ತಿಯಾಗದ್ದರಿಂದ ಫಲವತ್ತಾದ ಹಿನ್ನೀರಿನ ನೆಲೆ 'ಅದೃಷ್ಟದ ಬೆಳೆ'ಗೆ ವರವಾಗಿತ್ತು. ಆದರೆ, ಇನ್ನೇನು ಬೆಳೆ ಕೈ ಸೇರುವ ಹಂತದಲ್ಲಿದ್ದಾಗ ಈ ಸಲ ಹಿನ್ನೀರು ಪ್ರದೇಶ ಜಲಾವೃತಗೊಂಡಿದ್ದರಿಂದ ರೈತರ ಆಸೆ ಕಮರಿದೆ.

ಮುಳುಗಡೆ ಎಲ್ಲೆಲ್ಲಿ ?: ನದಿಯ ಸಮೀಪ ಇರುವ ಕೇಸಲಾಪುರ, ನಿಲೋಗಿಪುರ, ಹಲವಾಗಲಿ, ತಿಗರಿ, ನೀರಲಗಿ, ಕಾತರಕಿ, ಮತ್ತೂರ, ಹನಕುಂಟಿ ಸೇರಿದಂತೆ ಇತರ ಗ್ರಾಮದ ಹಿನ್ನೀರು ಭಾಗ (ನದಿ ಪಾತ್ರ)ದಲ್ಲೂ ನೀರು ಸಂಗ್ರಹವಾಗುತ್ತಿದೆ. ಇದೇ ಪ್ರದೇಶದಲ್ಲಿ ಬೇಸಿಗೆ ಹಂಗಾಮಿಗೆ ಹಾಕಿದ್ದ ಲ್ಲಿ ಸಜ್ಜೆ, ಸೂರ್ಯಕಾಂತಿ, ಅಲಸಂದೆ ಬೆಳೆ ನೀರಿನಲ್ಲಿ ಮುಳುಗಿವೆ.

ಲೆಕ್ಕಾಚಾರ ಉಲ್ಟಾ: ಕಳೆದ ಕೆಲ ವರ್ಷಗಳಿಂದ ತುಂಗಭದ್ರಾ ಅಣೆಕಟ್ಟು ಭರ್ತಿಯಾಗುವುದೇ ಕಡಿಮೆಯಾಗಿತ್ತು. ಇಂತಹ ಸಮಯದಲ್ಲಿ ಹಿನ್ನೀರ ಪ್ರದೇಶ ಹಲವು ಹಳ್ಳಿಯ ರೈತರಿಗೆ ವರವಾಗಿ ಮಾರ್ಪಟ್ಟಿತ್ತು. ಫಲವತ್ತಾದ ಮಣ್ಣನ್ನು ಹೊಂದಿದ ಹಿನ್ನೆಲೆಯಲ್ಲಿ ಅರೆನೀರಾವರಿ ಬೆಳೆ ಹಾಕಿ, ಉತ್ತಮ ಫಸಲು ಪಡೆಯುತ್ತಿದ್ದರು. ರಸಗೊಬ್ಬರ ಅಗತ್ಯವಿಲ್ಲದೇ ಉತ್ತಮ ಇಳುವರಿ ಪ್ರಾಪ್ತಿಯಾಗುತ್ತಿತ್ತು. ಆದರೆ, ಈ ಬಾರಿ ಲೆಕ್ಕಾಚಾರ ತಲೆಕೆಳಗಾಗಿದೆ.

ಇಪತ್ತೇ ದಿನ ಸಾಕಿತ್ತು: ಜಲಾಶಯ ಭರ್ತಿಯಾದರೂ ಸಾಮಾನ್ಯವಾಗಿ ಜುಲೈ ಕೊನೆಗೆ , ಆಗಸ್ಟ್‌ನಲ್ಲಿ ಹಿನ್ನೀರು ಪ್ರದೇಶದಲ್ಲಿ ನೀರು ಹೆಚ್ಚಳವಾಗುತ್ತಿತ್ತು. ಈ ಬಾರಿ ಜುಲೈ ಮೊದಲ ವಾರವೇ ನೀರು ಬಂದಿದೆ. ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಏರಿಕೆಯಾಗಿದೆ. ಇದರಿಂದಾಗಿ, ದಿನದಿಂದ ದಿನಕ್ಕೆ ಹಿನ್ನೀರು ಪ್ರದೇಶದಲ್ಲಿನ ಸೂರ್ಯಕಾಂತಿ, ಸಜ್ಜೆ, ಅಲಸಂದೆ ಬೆಳೆ ಮುಳುಗಡೆಯಾಗಿವೆ. ಅಲ್ಲಲ್ಲಿ ಕಾಳು ಕಟ್ಟುವ ಹಂತದಲ್ಲಿರುವ ಸಜ್ಜೆಯ ತೆನೆ, ಹೂ ಬಿಟ್ಟ ಸೂರ್ಯಕಾಂತಿ ಕಾಣಿಸುತ್ತಿದೆ. ಇನ್ನೂ ಇಪ್ಪತ್ತು ದಿನಗಳು ಕಾದಿದ್ದರೆ, ಬೆಳೆ ಕೈ ಸೇರುತ್ತಿತ್ತು. ಕೊನೆಯ ಹಂತದಲ್ಲಿ ಮುಳುಗಡೆಯಾಗಿದ್ದರಿಂದ ರೈತನ ಆಸೆ ಕಮರಿದೆ. ಮತ್ತೊಂದೆಡೆ ಡ್ಯಾಂ ಭರ್ತಿಯಾಗುತ್ತಿರುವುದು, ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಸಂಭ್ರಮ ಮೂಡಿಸಿದೆ.

...

ಪ್ರತಿ ವರ್ಷ ಹಿನ್ನೀರು ಫಲವತ್ತಾದ ಹಿನ್ನೀರು ಭೂಮಿಯಲ್ಲಿ ಉತ್ತಮ ಫಸಲು ಪಡೆಯುತ್ತಿದ್ದೆವು. ಕಟಾವಿಗೆ ಬಂದ ಕೊನೆ ಗಳಿಗೆಯಲ್ಲಿ ಜಲಾಶಯ ಭರ್ತಿಯಾಗಿದ್ದರಿಂದ ಬೆಳೆ ಮುಳುಗಡೆಯಾಗಿದೆ. ಏನು ಮಾಡಲಾಗದು.

-ಪರಶುರಾಮ ಬಿಸರಳ್ಳಿ, ತಿಗರಿ ಗ್ರಾಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ