ಆ್ಯಪ್ನಗರ

ಪೌರಕಾರ್ಮಿಕರ ನೇಮಕ ಆದೇಶಪತ್ರ ವಿತರಣೆ

ಇಲ್ಲಿನ ಪುರಸಭೆಯಲ್ಲಿ ಕಳೆದ ಕೆಲ ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ 8 ಪೌರಕಾರ್ಮಿಕರನ್ನು ಕಾಯಂಗೊಳಿಸಿ ಡಿಸಿ ಎಂ.ಕನಗವಲ್ಲಿ ಅವರು ನೀಡಿರುವ ನೇಮಕ ಆದೇಶ ಪತ್ರಗಳನ್ನು ಮಂಗಳವಾರ ವಿತರಿಸಲಾಯಿತು.

Vijaya Karnataka 4 Jul 2018, 5:00 am
ಕುಷ್ಟಗಿ : ಇಲ್ಲಿನ ಪುರಸಭೆಯಲ್ಲಿ ಕಳೆದ ಕೆಲ ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ 8 ಪೌರಕಾರ್ಮಿಕರನ್ನು ಕಾಯಂಗೊಳಿಸಿ ಡಿಸಿ ಎಂ.ಕನಗವಲ್ಲಿ ಅವರು ನೀಡಿರುವ ನೇಮಕ ಆದೇಶ ಪತ್ರಗಳನ್ನು ಮಂಗಳವಾರ ವಿತರಿಸಲಾಯಿತು.
Vijaya Karnataka Web KPL-KPL3KST08


ದಿನಗೂಲಿ ಆಧಾರದ ಮೇಲೆ ಕಳೆದ 10-12 ವರ್ಷಗಳಿಂದ ಇಲ್ಲಿನ ಪುರಸಭೆಯಲ್ಲಿ 8ಜನರು ಕೆಲಸ ನಿರ್ವಹಿಸುತ್ತಿದ್ದರು. ಕಾಯಂಗೊಳಿಸುವಂತೆ ಅನೇಕ ಸಲ ಮನವಿ ಸಲ್ಲಿಸಿದ್ದರು. ಜೂನ್‌ನಲ್ಲಿ ಡಿಸಿ ಅವರೇ ಅಧ್ಯಕ್ಷ ರಾಗಿರುವ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಅರ್ಜಿಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿರುವುದನ್ನು ಮನವರಿಕೆ ಮಾಡಿಕೊಂಡು ನೇಮಕ ಆದೇಶಗಳನ್ನು ನೀಡಿದ್ದಾರೆ. ಚಿದಾನಂದಪ್ಪ, ಬಸಪ್ಪ, ಹುಲಿಗೆಮ್ಮ, ಹನುಮವ್ವ, ಗಂಗಮ್ಮ, ನಾಗರಾಜ, ಪಂಪಾಪತಿ, ಅಂಬಣ್ಣ ಕಾಯಂಗೊಂಡಿದ್ದಾರೆ. ಪುರಸಭೆಗೆ ಬಂದಿರುವ ನೇಮಕ ಆದೇಶ ಪತ್ರಗಳನ್ನು ಸಂಬಂಧಿಸಿದ ಪೌರಕಾರ್ಮಿಕರಿಗೆ ಮಂಗಳವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ಪ್ರಲ್ಹಾದ್‌ ಜೋಷಿ, ಸದಸ್ಯರಾದ ಚನ್ನಪ್ಪ ನಾಲಗಾರ, ಜಿಲಾನ್‌ ಮುಲ್ಲಾ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ