ಕೊಪ್ಪಳ: ಜಿಂದಾಲ್ಗೆ ಸುಮಾರು 3 ಸಾವಿರ ಕೋಟಿ ಬೆಲೆ ಬಾಳುವ ಜಮೀನನ್ನು 30 ಕೋಟಿ ರೂ. ಮಾರಾಟ ಮಾಡಿರುವುದನ್ನು ವಿರೋಧಿ ಬಿಜೆಪಿ ಜೈಲ್ಭರೋ ಚಳವಳಿ ಹಮ್ಮಿಕೊಳ್ಳುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಸಮೀಪದ ಭಾಗ್ಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು.
ಜಿಂದಾಲ್ಗೆ ಜಮೀನು ನೀಡಿರುವುದಕ್ಕೆ ಬಿಜೆಪಿ ಮಾತ್ರ ವಿರೋಧಿಸಿಲ್ಲ. ಕಾಂಗ್ರೆಸ್ನ ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಆನಂದ್ಸಿಂಗ್, ಜೆಡಿಎಸ್ನ ವಿಶ್ವನಾಥ ಸೇರಿ ವಾಟಳ್ ನಾಗರಾಜ್, ಎಸ್.ಆರ್.ಹಿರೇಮಠ ಅವರು ವಿರೋಧಿಸುತ್ತಿದ್ದಾರೆ ಎಂದು ಈಶ್ವರಪ್ಪ ನುಡಿದರು.
ರಾಜ್ಯದಲ್ಲಿ ಲೂಟಿ ಮಾಡಿರುವ ಕೆಲವರು ಜಿಂದಾಲ್ಗೆ ಭೂಮಿ ಕೊಡುತ್ತೇವೆ ನೀವು ಏನು ಮಾಡುತ್ತೀರಿ ಮಾಡ್ರಿ ಎಂದು ಸವಾಲು ಹಾಕಿದ್ದಾರೆ. ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರು ಕನಕಪುರದ ತಮ್ಮ ಆಸ್ತಿ ಬೇಕಾದರೆ ಮಾರಲಿ. ರಾಜ್ಯದ ಆಸ್ತಿ ಮಾರಾಟ ಮಾಡುವ ಅಧಿಕಾರ ಕೊಟ್ಟವರು ಯಾರು? ಎಂದು ಅವರು ಪ್ರಶ್ನಿಸಿದರು. ಹೀಗೆ ಬಿಟ್ಟರೆ ರಾಜ್ಯದ ಆಸ್ತಿ ಹಾಗೂ ವಿಧಾನಸೌಧವನ್ನೇ ಮಾರಿಬಿಡುತ್ತಾರೆ ಎಂದೂ ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ಜಿಂದಾಲ್ ಭೂಹಗರಣ: ಸಿಎಂ ಕಚೇರಿಗೆ ಮುತ್ತಿಗೆ ಯತ್ನ, ಬಿಎಸ್ವೈ ಸಹಿತ ಬಿಜೆಪಿ ನಾಯಕರ ಬಂಧನ, ಬಿಡುಗಡೆ
ಬೆಂಗಳೂರಿನಿಂದ ಬಳ್ಳಾರಿಗೆ ಸೆಡ್ಡು ಹೊಡೆದು ಕುಣಿದು ಬಂದ ಸಿದ್ದರಾಮಯ್ಯ ಯಾಕೆ ಇನ್ನೂ ಬಾಯಿ ಬಿಡುತ್ತಿಲ್ಲ. ಸಿಎಂ ಉಪ ಸಮಿತಿ ಮಾಡುತ್ತೇನೆ ಎಂದು ಹೇಳಿದರೆ ಸಾಕಾ? ರಾಜ್ಯದ ಆಸ್ತಿ ಯಾವುದೇ ಕಾರಣಕ್ಕೂ ಖಾಸಗಿಯವರೆಗೆ ಮಾರಾಟಕ್ಕೆ ಬಿಡುವುದಿಲ್ಲ.
ಗೆದ್ದ ಸಂಭ್ರಮ: ಕೊಪ್ಪಳ ಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟ ಹಾಕಿಸಿದ ಈಶ್ವರಪ್ಪ
ಜಿಂದಾಲ್ಗೆ ನೀಡಿರುವ ಭೂಮಿ ವಾಪಾಸ್ ಪಡೆಯದಿದ್ದರೆ ರಾಜ್ಯದ ಎಲ್ಲ ಜೈಲು ಭರ್ತಿ ಮಾಡುತ್ತೇವೆ. ನಮ್ಮ ಆಸ್ತಿ ನಮಗೆ ಉಳಿಯಬೇಕು. ಮೈತ್ರಿ ಸರಕಾರ ಉಳಿಸಿಕೊಳ್ಳಬೇಕಾದರೆ ತಕ್ಷಣ ಜಿಂದಾಲ್ಗೆ ನೀಡಿರುವ ಭೂಮಿ ವಾಪಸ್ ತೆಗೆದುಕೊಳ್ಳಬೇಕು.
ಮೈತ್ರಿ ಸರಕಾರ ಕಳೆದುಕೊಳ್ಳಬೇಕಾದರೆ ಬಿಜೆಪಿ ಹೋರಾಟ ನಡೆಸಲು ಸಿದ್ಧವಾಗಿದೆ. ಬಿಜೆಪಿ ಕಾರ್ಯಕರ್ತರು ಜೈಲಿಗೆ ಹೋಗಲು ರೆಡಿಯಾಗಿದ್ದು, ಎಲ್ಲ ಜೈಲು ಸಿದ್ಧಗೊಳಿಸಬೇಕು. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆಗೆ ಚರ್ಚಿಸಿ ಮುಂದಿನ ಹೋರಾಟ ನಡೆಸುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಸಿಎಂ ಕುಮಾರಸ್ವಾಮಿ ಬರೀ ಒಂದು ಪತ್ರ ಬರೆದರೆ ಸಾಕಾ? ಸುಮ್ಮನೆ ಮಾತುಕತೆಗೆ ಸಿದ್ಧನಿದ್ದೇನೆ ಎಂದು ಜನರಲ್ಲಿ ಭಾವನೆ ಮೂಡಿಸುವ ಉದ್ದೇಶದಿಂದ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷದ ನಾಯಕರು. ಅವರನ್ನು ಆಹ್ವಾನಿಸಬೇಕಾದರೆ ಪದ್ಧತಿ ಇದೆ. ನಿಗದಿತ ಸ್ಥಳದಲ್ಲಿ ಸಭೆ ಕರೆಯಲಿ. ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಅವರನ್ನು ಕರೆಯಲಿ. ಪದ್ಧತಿ ಪ್ರಕಾರ ನಿಗದಿತ ಸ್ಥಳ, ಸಮಯ ಗೊತ್ತುಪಡಿಸಿ ಮೀಟಿಂಗ್ ನೋಟಿಸ್ ಕಳುಹಿಸಿದರೆ ನಾವೆಲ್ಲ ಹೋಗುವುದಕ್ಕೆ ಸಿದ್ಧರಿದ್ದೇವೆ ಎಂದರು.
ಸಮೀಪದ ಭಾಗ್ಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು.
ಜಿಂದಾಲ್ಗೆ ಜಮೀನು ನೀಡಿರುವುದಕ್ಕೆ ಬಿಜೆಪಿ ಮಾತ್ರ ವಿರೋಧಿಸಿಲ್ಲ. ಕಾಂಗ್ರೆಸ್ನ ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಆನಂದ್ಸಿಂಗ್, ಜೆಡಿಎಸ್ನ ವಿಶ್ವನಾಥ ಸೇರಿ ವಾಟಳ್ ನಾಗರಾಜ್, ಎಸ್.ಆರ್.ಹಿರೇಮಠ ಅವರು ವಿರೋಧಿಸುತ್ತಿದ್ದಾರೆ ಎಂದು ಈಶ್ವರಪ್ಪ ನುಡಿದರು.
ರಾಜ್ಯದಲ್ಲಿ ಲೂಟಿ ಮಾಡಿರುವ ಕೆಲವರು ಜಿಂದಾಲ್ಗೆ ಭೂಮಿ ಕೊಡುತ್ತೇವೆ ನೀವು ಏನು ಮಾಡುತ್ತೀರಿ ಮಾಡ್ರಿ ಎಂದು ಸವಾಲು ಹಾಕಿದ್ದಾರೆ. ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರು ಕನಕಪುರದ ತಮ್ಮ ಆಸ್ತಿ ಬೇಕಾದರೆ ಮಾರಲಿ. ರಾಜ್ಯದ ಆಸ್ತಿ ಮಾರಾಟ ಮಾಡುವ ಅಧಿಕಾರ ಕೊಟ್ಟವರು ಯಾರು? ಎಂದು ಅವರು ಪ್ರಶ್ನಿಸಿದರು. ಹೀಗೆ ಬಿಟ್ಟರೆ ರಾಜ್ಯದ ಆಸ್ತಿ ಹಾಗೂ ವಿಧಾನಸೌಧವನ್ನೇ ಮಾರಿಬಿಡುತ್ತಾರೆ ಎಂದೂ ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ಜಿಂದಾಲ್ ಭೂಹಗರಣ: ಸಿಎಂ ಕಚೇರಿಗೆ ಮುತ್ತಿಗೆ ಯತ್ನ, ಬಿಎಸ್ವೈ ಸಹಿತ ಬಿಜೆಪಿ ನಾಯಕರ ಬಂಧನ, ಬಿಡುಗಡೆ
ಬೆಂಗಳೂರಿನಿಂದ ಬಳ್ಳಾರಿಗೆ ಸೆಡ್ಡು ಹೊಡೆದು ಕುಣಿದು ಬಂದ ಸಿದ್ದರಾಮಯ್ಯ ಯಾಕೆ ಇನ್ನೂ ಬಾಯಿ ಬಿಡುತ್ತಿಲ್ಲ. ಸಿಎಂ ಉಪ ಸಮಿತಿ ಮಾಡುತ್ತೇನೆ ಎಂದು ಹೇಳಿದರೆ ಸಾಕಾ? ರಾಜ್ಯದ ಆಸ್ತಿ ಯಾವುದೇ ಕಾರಣಕ್ಕೂ ಖಾಸಗಿಯವರೆಗೆ ಮಾರಾಟಕ್ಕೆ ಬಿಡುವುದಿಲ್ಲ.
ಗೆದ್ದ ಸಂಭ್ರಮ: ಕೊಪ್ಪಳ ಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟ ಹಾಕಿಸಿದ ಈಶ್ವರಪ್ಪ
ಜಿಂದಾಲ್ಗೆ ನೀಡಿರುವ ಭೂಮಿ ವಾಪಾಸ್ ಪಡೆಯದಿದ್ದರೆ ರಾಜ್ಯದ ಎಲ್ಲ ಜೈಲು ಭರ್ತಿ ಮಾಡುತ್ತೇವೆ. ನಮ್ಮ ಆಸ್ತಿ ನಮಗೆ ಉಳಿಯಬೇಕು. ಮೈತ್ರಿ ಸರಕಾರ ಉಳಿಸಿಕೊಳ್ಳಬೇಕಾದರೆ ತಕ್ಷಣ ಜಿಂದಾಲ್ಗೆ ನೀಡಿರುವ ಭೂಮಿ ವಾಪಸ್ ತೆಗೆದುಕೊಳ್ಳಬೇಕು.
ಮೈತ್ರಿ ಸರಕಾರ ಕಳೆದುಕೊಳ್ಳಬೇಕಾದರೆ ಬಿಜೆಪಿ ಹೋರಾಟ ನಡೆಸಲು ಸಿದ್ಧವಾಗಿದೆ. ಬಿಜೆಪಿ ಕಾರ್ಯಕರ್ತರು ಜೈಲಿಗೆ ಹೋಗಲು ರೆಡಿಯಾಗಿದ್ದು, ಎಲ್ಲ ಜೈಲು ಸಿದ್ಧಗೊಳಿಸಬೇಕು. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆಗೆ ಚರ್ಚಿಸಿ ಮುಂದಿನ ಹೋರಾಟ ನಡೆಸುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಸಿಎಂ ಕುಮಾರಸ್ವಾಮಿ ಬರೀ ಒಂದು ಪತ್ರ ಬರೆದರೆ ಸಾಕಾ? ಸುಮ್ಮನೆ ಮಾತುಕತೆಗೆ ಸಿದ್ಧನಿದ್ದೇನೆ ಎಂದು ಜನರಲ್ಲಿ ಭಾವನೆ ಮೂಡಿಸುವ ಉದ್ದೇಶದಿಂದ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷದ ನಾಯಕರು. ಅವರನ್ನು ಆಹ್ವಾನಿಸಬೇಕಾದರೆ ಪದ್ಧತಿ ಇದೆ. ನಿಗದಿತ ಸ್ಥಳದಲ್ಲಿ ಸಭೆ ಕರೆಯಲಿ. ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಅವರನ್ನು ಕರೆಯಲಿ. ಪದ್ಧತಿ ಪ್ರಕಾರ ನಿಗದಿತ ಸ್ಥಳ, ಸಮಯ ಗೊತ್ತುಪಡಿಸಿ ಮೀಟಿಂಗ್ ನೋಟಿಸ್ ಕಳುಹಿಸಿದರೆ ನಾವೆಲ್ಲ ಹೋಗುವುದಕ್ಕೆ ಸಿದ್ಧರಿದ್ದೇವೆ ಎಂದರು.