ಆ್ಯಪ್ನಗರ

ಕಲ್ಲಿನಾಥೇಶ್ವರ ಜಾತ್ರೆ: ಅದ್ಧೂರಿ ರಥೋತ್ಸವ

ತಾಲೂಕಿನ ಬೇವೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಜಾತ್ರೆ ನಿಮಿತ್ತ ಸೋಮವಾರ ಸಂಜೆ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಭಕ್ತರು ಹೂ,ಹಣ್ಣು ಉತ್ತತ್ತಿ ಸಮರ್ಪಿಸಿದರು. ಕೋಳಿಹಾಳದಿಂದ ತೇರಿನ ಹಗ್ಗವನ್ನು ತರಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದರು. ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ರಥಕ್ಕೆ ಚಾಲನೆ ನೀಡಿದರು.

ವಿಕ ಸುದ್ದಿಲೋಕ 12 Apr 2016, 7:29 am
ಯಲಬುರ್ಗಾ ; ತಾಲೂಕಿನ ಬೇವೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಜಾತ್ರೆ ನಿಮಿತ್ತ ಸೋಮವಾರ ಸಂಜೆ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಭಕ್ತರು ಹೂ,ಹಣ್ಣು ಉತ್ತತ್ತಿ ಸಮರ್ಪಿಸಿದರು. ಕೋಳಿಹಾಳದಿಂದ ತೇರಿನ ಹಗ್ಗವನ್ನು ತರಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದರು. ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ರಥಕ್ಕೆ ಚಾಲನೆ ನೀಡಿದರು.
Vijaya Karnataka Web kallinathesvara fairs hugely chariot festival
ಕಲ್ಲಿನಾಥೇಶ್ವರ ಜಾತ್ರೆ: ಅದ್ಧೂರಿ ರಥೋತ್ಸವ


ಬೆಳಗಿನ ಜಾವ ಕಲ್ಲಿನಾಥೇಶ್ವರ ಮೂರ್ತಿಗೆ ಅಭಿಷೇಕ, ಪಂಚಾಮತ ಅಭಿಷೇಕ ಸಲ್ಲಿಸಲಾಯಿತು. ನಂತರ ಡೊಳ್ಳು, ಬಾಜಾ ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳ ಮೂಲಕ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಮಹಾಪ್ರಸಾದ ಏರ್ಪಡಿಸಲಾಗಿತ್ತು.

ಇದಕ್ಕೂ ಮುಂಚೆ ಕಲಬುರಗಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವದಲ್ಲಿ 31 ಜೋಡಿ ಸಾಮೂಹಿಕ ಮದುವೆ ಜರುಗಿದವು.

ವಿಜಯಪುರ ವನಶ್ರೀ ಸಂಸ್ಥಾನ ಮಠದ ಗಾಣಿಗ ಸಮಾಜದ ಗುರು ಪೀಠಾಧೀಶ ಜಯದೇವ ಜಗದ್ಗುರುಗಳು ಮಾತನಾಡಿದರು.

ಸುರ್ವರ್ಣಗಿರಿ ಸಂಸ್ಥಾನ ವಿರಕ್ತಮಠ ಚನ್ನಮಲ್ಲ ಮಹಾ ಸ್ವಾಮಿಗಳು, ಪುರಾಣ ಪ್ರವಚಕಿ ಬಸವೇಶ್ವರಿ ಡೋಣಿ, ಸಂಗೀತಗಾರ ಮಂಗಳೇಶ ಶ್ಯಾಗೋಟಿ, ತಬಲಾ ವಾದಕ ರುಕ್ಕುದ್ದೀನ್ ಧಾರವಾಡ, ದೇವಸ್ಥಾನ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾ.ಪಂ.ಸದಸ್ಯರು, ರುದ್ರಯ್ಯ ಸ್ವಾಮಿ ಪ್ರಮುಖರು ಇದ್ದರು.

ಹಿರೇ ಮ್ಯಾಗೇರಿ: ತಾಲೂಕಿನ ಹಿರೇ ಮ್ಯಾಗೇರಿ ಗ್ರಾಮದಲ್ಲಿ ಶ್ರೀಶರಣಬಸವೇಶ್ವರ ಜಾತ್ರೆ ನಿಮಿತ್ತ ಪುರಾಣ ಮಂಗಲೋತ್ಸವ ಇತ್ತೀಚೆಗೆ ನಡೆಯಿತು. ನಂತರ ಸಾಮೂಹಿಕ ಮದುವೆ ನಡೆದವು. ಕಾರ್ಯಕ್ರಮಕ್ಕೆ ಕುದರಿಮೋತಿಯ ಶ್ರೀವಿಜಯ ಮಹಾಂತ ಸ್ವಾಮೀಜಿ ಚಾಲನೆ ನೀಡಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಶರಣಪ್ಪ ಆರೇರ್,ಮುಖಂಡರಾದ ಶರಣಪ್ಪ ಬಂಡಿಹಾಳ, ಶಿವರೆಡ್ಡಿ, ಶಂಕ್ರಪ್ಪ, ವೀರೇಶ, ಬಸವಪ್ಪ, ಹನುಮಂತಪ್ಪ, ಮಹ್ಮದ್ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ