ಆ್ಯಪ್ನಗರ

ಸಂಸದರಲ್ಲಿ ಬಿಎಸ್‌ವೈಗೆ ಮಾತ್ರ ಅಸೆಂಬ್ಲಿ ಟಿಕೆಟ್‌: ಶ್ರೀ ರಾಮುಲು

ಸಂಸದರ ಪೈಕಿ ಬಿಎಸ್‌ವೈ ಒಬ್ಬರಿಗೆ ವಿಧಾನಸಭೆ ಟಿಕೆಟ್ ಪಕ್ಕಾ ಆಗಿದೆ. ಉಳಿದ ಸಂಸದರಿಗೆ ಟಿಕೆಟ್ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾಗಿ ಸಂಸದ ಶ್ರೀ ರಾಮುಲು ಹೇಳಿದ್ದಾರೆ.

Vijaya Karnataka Web 26 Feb 2018, 2:07 pm
ಕೊಪ್ಪಳ: ಸಂಸದರ ಪೈಕಿ ಬಿಎಸ್‌ವೈ ಒಬ್ಬರಿಗೆ ವಿಧಾನಸಭೆ ಟಿಕೆಟ್ ಪಕ್ಕಾ ಆಗಿದೆ. ಉಳಿದ ಸಂಸದರಿಗೆ ಟಿಕೆಟ್ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾಗಿ ಸಂಸದ ಶ್ರೀ ರಾಮುಲು ಹೇಳಿದ್ದಾರೆ.
Vijaya Karnataka Web karnataka assembly poll ticket to bsy
ಸಂಸದರಲ್ಲಿ ಬಿಎಸ್‌ವೈಗೆ ಮಾತ್ರ ಅಸೆಂಬ್ಲಿ ಟಿಕೆಟ್‌: ಶ್ರೀ ರಾಮುಲು


ಶಾಸಕ ಆನಂದ್ ಸಿಂಗ್‌ಗೆ ಬಿಜೆಪಿ ಎಲ್ಲ ಅನುಕೂಲ ಮಾಡಿ ಕೊಟ್ಟಿತ್ತು. ಅವರ ಪಾಪದ ಕೊಡ ತುಂಬಿ, ದುರಹಂಕಾರ ಹೆಚ್ಚಾದ ಮೇಲೆ ಕಾಂಗ್ರೆಸ್ ಸೇರಿದ್ದಾರೆ. ಸಹೋದರ ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಪಕ್ಷ ಸಂಘಟನೆಯಲ್ಲಿ ತೊಡಗಲಿದ್ದಾರೆ. ಬಳ್ಳಾರಿಗೆ ಜನಾರ್ದನ ರೆಡ್ಡಿ ಬಾರದಂತೆ ಕೋರ್ಟ್ ನಿರ್ಬಂಧ ಹಾಕಿದೆ . ಆದ್ದರಿಂದ ಆನೆಗೊಂದಿ ಹಾಗೂ ರಾಂಪುರ ಗ್ರಾಮದಲ್ಲಿ ವಾಸ್ತವ್ಯಕ್ಕೆ ಮನೆ ನೋಡಿದ್ದರು . ಜನಾರ್ದನ ರೆಡ್ಡಿ ಅವರನ್ನು ಅನಿಲ್ ಲಾಡ್ ಸಂಪರ್ಕ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ಜನಾರ್ದನ ರೆಡ್ಡಿ ಹಠವಾದಿ ವ್ಯಕ್ತಿ. ಅವರು ಕಾಂಗ್ರೆಸ್ ಗೆ ಸೇರುವುದಿಲ್ಲ ಎಂದು ಹೇಳಿದರು.

ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದರು.

ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ 60, ಜೆಡಿಎಸ್ 20 ಸ್ಥಾನ ಪಡೆಯುತ್ತವೆ. ಸಿಎಂ ಸಿದ್ದರಾಮಯ್ಯ ಅವರಿಗೆ ದುರಂಕಾರ, ಅಹಿಂದ ವರ್ಗದ ನೋವು ಕಾಣುವುದಿಲ್ಲ. ಎಸ್ಸಿ/ ಎಸ್ಟಿಗೆ ಮೀಸಲಿಟ್ಟ ಹಣ ಬೇರೆಯದಕ್ಕೆ ಬಳಸಿದ್ದಾರೆ ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ