ಆ್ಯಪ್ನಗರ

ನೆರೆಯಿಂದ ಮೃತಪಟ್ಟ ಕುಟುಂಬಕ್ಕೆ 5 ಅಲ್ಲ, ಕನಿಷ್ಠ 25 ಲಕ್ಷ ಪರಿಹಾರಕ್ಕೆ ವಾಟಾಳ್ ಒತ್ತಾಯ

ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ವಿತರಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

Vijaya Karnataka Web 16 Aug 2019, 3:15 pm
ಕೊಪ್ಪಳ: ನೆರೆಯಿಂದ ಮೃತರಾದ ಕುಟುಂಬಗಳಿಗೆ 5 ಲಕ್ಷ ರೂ. ಬದಲಾಗಿ ಕನಿಷ್ಠ 25 ಲಕ್ಷ ರೂ.ಪರಿಹಾರ ವಿತರಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯಿಸಿದರು.
Vijaya Karnataka Web vatal


ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ನೆರೆಪೀಡಿತರಿಗೆ ಸಂಗ್ರಹಿಸಿದ ಸಾಮಗ್ರಿಗಳನ್ನು ತಲುಪಿಸಲು ಬೆಳಗಾವಿಗೆ ಹೋಗುತ್ತಿದ್ದೇವೆ. ಸರಕಾರ ನೆರೆ ಸಂತ್ರಸ್ತರಿಗಾಗಿ ಬಹಳ ಚುರುಕಾಗಿ ಕೆಲಸ ಮಾಡಬೇಕಿದೆ. ಪ್ರವಾಹ ಇಳಿದ ತಕ್ಷಣ ವ್ಯವಸ್ಥಿತವಾಗಿ ಸಮಿತಿಗಳನ್ನ ರಚಿಸಿ ಪರಿಹಾರ ಕಾರ್ಯ ಮಾಡಬೇಕಿತ್ತು ಎಂದರು.

ಕೇಂದ್ರ ಸರಕಾರ ನಯಾಪೈಸೆ ಪರಿಹಾರ ರಾಜ್ಯಕ್ಕೆ ನೀಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಿಲ್ಲ. ಸರಕಾರವೇ ಇಲ್ಲ, ಸಿಎಂ ಒಬ್ಬರೇ. ಮಂತ್ರಿಗಳೇ ಇಲ್ಲ. ಪ್ರತಿ ಜಿಲ್ಲೆಗೂ ಸಚಿವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯ ಮಾಡದೇ, ಸರ್ವಪಕ್ಷಗಳ ರಾಜ್ಯ ಸಮಿತಿ ನೇಮಕವಾಗಬೇಕು. ಸಮಿತಿ ಮೂಲಕ ರಾಜ್ಯದ ಉದ್ದಗಲಕ್ಕೂ ಪರಿಹಾರ ಕಾರ್ಯ ನಡೆಯಬೇಕು. ಒಂದು ವಾರದೊಳಗೆ ಪ್ರಧಾನ ಮಂತ್ರಿ ಕರ್ನಾಟಕಕ್ಕೆ ಬರಲೇಬೇಕು. 50 ಸಾವಿರ ಕೋಟಿ ಪರಿಹಾರ ಬಿಡುಗಡೆಗೊಳಿಸಬೇಕು. ವಾರದಲ್ಲಿ ಪ್ರಧಾನಿ ಬರದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತುಂಗಭದ್ರಾ ಜಲಾಶಯದ ಪೋಲಾಗುತ್ತಿರುವ ನೀರನ್ನ ತಡೆಗಟ್ಟಲು ನಾಲ್ಕು ದಿನ ಕಳೆದರೂ ಸರಕಾರಕ್ಕೆ ಆಗಿಲ್ಲ. ವಾರದೊಳಗೆ ನೀರು ಪೋಲು ತಡೆಗಟ್ಟದಿದ್ದರೆ ಕೊಪ್ಪಳ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ