ಕೊಪ್ಪಳ: ನೆರೆಯಿಂದ ಮೃತರಾದ ಕುಟುಂಬಗಳಿಗೆ 5 ಲಕ್ಷ ರೂ. ಬದಲಾಗಿ ಕನಿಷ್ಠ 25 ಲಕ್ಷ ರೂ.ಪರಿಹಾರ ವಿತರಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ನೆರೆಪೀಡಿತರಿಗೆ ಸಂಗ್ರಹಿಸಿದ ಸಾಮಗ್ರಿಗಳನ್ನು ತಲುಪಿಸಲು ಬೆಳಗಾವಿಗೆ ಹೋಗುತ್ತಿದ್ದೇವೆ. ಸರಕಾರ ನೆರೆ ಸಂತ್ರಸ್ತರಿಗಾಗಿ ಬಹಳ ಚುರುಕಾಗಿ ಕೆಲಸ ಮಾಡಬೇಕಿದೆ. ಪ್ರವಾಹ ಇಳಿದ ತಕ್ಷಣ ವ್ಯವಸ್ಥಿತವಾಗಿ ಸಮಿತಿಗಳನ್ನ ರಚಿಸಿ ಪರಿಹಾರ ಕಾರ್ಯ ಮಾಡಬೇಕಿತ್ತು ಎಂದರು.
ಕೇಂದ್ರ ಸರಕಾರ ನಯಾಪೈಸೆ ಪರಿಹಾರ ರಾಜ್ಯಕ್ಕೆ ನೀಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಿಲ್ಲ. ಸರಕಾರವೇ ಇಲ್ಲ, ಸಿಎಂ ಒಬ್ಬರೇ. ಮಂತ್ರಿಗಳೇ ಇಲ್ಲ. ಪ್ರತಿ ಜಿಲ್ಲೆಗೂ ಸಚಿವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಮಾಡದೇ, ಸರ್ವಪಕ್ಷಗಳ ರಾಜ್ಯ ಸಮಿತಿ ನೇಮಕವಾಗಬೇಕು. ಸಮಿತಿ ಮೂಲಕ ರಾಜ್ಯದ ಉದ್ದಗಲಕ್ಕೂ ಪರಿಹಾರ ಕಾರ್ಯ ನಡೆಯಬೇಕು. ಒಂದು ವಾರದೊಳಗೆ ಪ್ರಧಾನ ಮಂತ್ರಿ ಕರ್ನಾಟಕಕ್ಕೆ ಬರಲೇಬೇಕು. 50 ಸಾವಿರ ಕೋಟಿ ಪರಿಹಾರ ಬಿಡುಗಡೆಗೊಳಿಸಬೇಕು. ವಾರದಲ್ಲಿ ಪ್ರಧಾನಿ ಬರದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತುಂಗಭದ್ರಾ ಜಲಾಶಯದ ಪೋಲಾಗುತ್ತಿರುವ ನೀರನ್ನ ತಡೆಗಟ್ಟಲು ನಾಲ್ಕು ದಿನ ಕಳೆದರೂ ಸರಕಾರಕ್ಕೆ ಆಗಿಲ್ಲ. ವಾರದೊಳಗೆ ನೀರು ಪೋಲು ತಡೆಗಟ್ಟದಿದ್ದರೆ ಕೊಪ್ಪಳ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ನೆರೆಪೀಡಿತರಿಗೆ ಸಂಗ್ರಹಿಸಿದ ಸಾಮಗ್ರಿಗಳನ್ನು ತಲುಪಿಸಲು ಬೆಳಗಾವಿಗೆ ಹೋಗುತ್ತಿದ್ದೇವೆ. ಸರಕಾರ ನೆರೆ ಸಂತ್ರಸ್ತರಿಗಾಗಿ ಬಹಳ ಚುರುಕಾಗಿ ಕೆಲಸ ಮಾಡಬೇಕಿದೆ. ಪ್ರವಾಹ ಇಳಿದ ತಕ್ಷಣ ವ್ಯವಸ್ಥಿತವಾಗಿ ಸಮಿತಿಗಳನ್ನ ರಚಿಸಿ ಪರಿಹಾರ ಕಾರ್ಯ ಮಾಡಬೇಕಿತ್ತು ಎಂದರು.
ಕೇಂದ್ರ ಸರಕಾರ ನಯಾಪೈಸೆ ಪರಿಹಾರ ರಾಜ್ಯಕ್ಕೆ ನೀಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಿಲ್ಲ. ಸರಕಾರವೇ ಇಲ್ಲ, ಸಿಎಂ ಒಬ್ಬರೇ. ಮಂತ್ರಿಗಳೇ ಇಲ್ಲ. ಪ್ರತಿ ಜಿಲ್ಲೆಗೂ ಸಚಿವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಮಾಡದೇ, ಸರ್ವಪಕ್ಷಗಳ ರಾಜ್ಯ ಸಮಿತಿ ನೇಮಕವಾಗಬೇಕು. ಸಮಿತಿ ಮೂಲಕ ರಾಜ್ಯದ ಉದ್ದಗಲಕ್ಕೂ ಪರಿಹಾರ ಕಾರ್ಯ ನಡೆಯಬೇಕು. ಒಂದು ವಾರದೊಳಗೆ ಪ್ರಧಾನ ಮಂತ್ರಿ ಕರ್ನಾಟಕಕ್ಕೆ ಬರಲೇಬೇಕು. 50 ಸಾವಿರ ಕೋಟಿ ಪರಿಹಾರ ಬಿಡುಗಡೆಗೊಳಿಸಬೇಕು. ವಾರದಲ್ಲಿ ಪ್ರಧಾನಿ ಬರದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತುಂಗಭದ್ರಾ ಜಲಾಶಯದ ಪೋಲಾಗುತ್ತಿರುವ ನೀರನ್ನ ತಡೆಗಟ್ಟಲು ನಾಲ್ಕು ದಿನ ಕಳೆದರೂ ಸರಕಾರಕ್ಕೆ ಆಗಿಲ್ಲ. ವಾರದೊಳಗೆ ನೀರು ಪೋಲು ತಡೆಗಟ್ಟದಿದ್ದರೆ ಕೊಪ್ಪಳ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.