ಆ್ಯಪ್ನಗರ

ಪ್ರತಾಪ್‌ ನಡೆ ಖಂಡಿಸಿದ ಸಚಿವ ರಾಯರೆಡ್ಡಿ

ಸಂಸದ ಪ್ರತಾಪ ಸಿಂಹ ಬ್ಯಾರಿಕೇಡ್‌ಗೆ ಕಾರು ನುಗ್ಗಿಸಿದ್ದು ಕಾನೂನು ಬಾಹಿರವಾಗಿದ್ದು, ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Vijaya Karnataka 4 Dec 2017, 4:45 pm
ಕೊಪ್ಪಳ: ಸಂಸದ ಪ್ರತಾಪ ಸಿಂಹ ಬ್ಯಾರಿಕೇಡ್‌ಗೆ ಕಾರು ನುಗ್ಗಿಸಿದ್ದು ಕಾನೂನು ಬಾಹಿರವಾಗಿದ್ದು, ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
Vijaya Karnataka Web karnataka minister condemn pratap simha
ಪ್ರತಾಪ್‌ ನಡೆ ಖಂಡಿಸಿದ ಸಚಿವ ರಾಯರೆಡ್ಡಿ


ನನಗೆ ಸಂಸತ್ ಸದಸ್ಯನಿಗಿಂತ ಧರ್ಮ ಮುಖ್ಯ ಎಂದು ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ರಾಯರಡ್ಡಿ, ಹೀಗೆ ಹೇಳಿದ್ರೆ ಅವರು ಸಂಸದರಾಗಿ ಮುಂದುವರಿಯಲು ಅರ್ಹರಾಗಿರುವುದಿಲ್ಲ ಎಂದರು.

ಅಲ್ಲದೇ ಪ್ರತಾಪ್‌ ಸಿಂಹ ಕಾರು ಡಿಕ್ಕಿ ಪ್ರಕರಣದಲ್ಲಿ ಪೊಲೀಸರು ಕಾನೂನಿನ ಪ್ರಕಾರ ನಡೆದುಕೊಂಡಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ. 'ರಾಜ್ಯ ಸರಕಾರ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಹೇಳಿದ್ದು ತಪ್ಪು, ಒಂದು ವೇಳೆ ಪ್ರತಾಪ ಸಿಂಹ ಅವರು ಈ ರೀತಿ ಹೇಳಿದರೆ ಅವರೇ ಆರೋಪಿಗಳಾಗುತ್ತಾರೆ, ಕೋಮುವಾದ ಯಾರೇ ಮಾಡಿದ್ದರೂ ಅವರು ದೊಡ್ಡ ಆರೋಪಿಗಳು. ತಪ್ಪನ್ನ ಅವರೇ ಮಾಡುತ್ತಿದ್ದಾರೆ ಹೊರತು ಸರಕಾರ ಮಾಡುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ