ಆ್ಯಪ್ನಗರ

ಕೇಂದ್ರದಿಂದ ಹೆಚ್ಚು ಪರಿಹಾರ ಬಂದಿದೆ, ಇನ್ನೂ ಬರಲಿದೆ! : ಸದಾನಂದ ಗೌಡ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಕರ್ನಾಟಕಕ್ಕೆ 1200 ಕೋಟಿ ರೂಪಾಯಿ ನೆರೆ ಪರಿಹಾರ ಘೋಷಿಸಿದ್ದು, ಇಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೇಂದ್ರದಿಂದ ಮತ್ತಷ್ಟು ಅನುದಾನ ಬರಲಿದೆ ಎಂದು ಹೇಳಿದ್ದಾರೆ.

Vijaya Karnataka Web 5 Oct 2019, 11:22 am
ಕೊಪ್ಪಳ: ಕೇಂದ್ರ ಸರಕಾರ 1200 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಇನ್ನೂ‌ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.
Vijaya Karnataka Web d v sadananda gowda


1200 ಕೋಟಿ ಮೊತ್ತ ದೊಡ್ಡದಾಗಿದ್ದು, ಮಧ್ಯಂತರ ಪರಿಹಾರವಾಗಿದೆ. ಇನ್ನಷ್ಟು ಹಣ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.ದೇಶದ 9 ರಾಜ್ಯದಲ್ಲಿ ನೆರೆ ಬಂದಿದೆ. ಆದರೆ ಮೊದಲು ರಾಜ್ಯಕ್ಕೆ ಪರಿಹಾರ ಬಿಡುಗಡೆಯಾಗಿದೆ. ಮಳೆ ನಿಂತ ಮೇಲೆ ಪರಿಹಾರ ಬರಬೇಕು.ನಿರಂತರ ಮಳೆ ಆಗಿರುವುದರಿಂದ ಪರಿಹಾರ ಘೋಷಣೆ ಮಾಡಿರಲಿಲ್ಲ.

ಇಂದೇ ನೆರೆ ಪರಿಹಾರ ಹಣ ಬಿಡುಗಡೆ: ಟ್ವೀಟ್ ಮೂಲಕ ವಿತ್ತ ಸಚಿವೆ ಸೀತಾರಾಮನ್ ಮಾಹಿತಿ

ಹಿಂದೆ ಮಳೆಯಾದಗ ಪರಿಹಾರ ಘೋಷಣೆಯಾದ ಹಣ ನುಂಗಿರೋದನ್ನ ನಾವು ಕಂಡಿದ್ದೇವೆ. ಮಾದ್ಯಮಗಳಲ್ಲಿ ರಾಜಕಾರಣಿಗಳ ಬಗ್ಗೆ ಅನಪೇಕ್ಷಿತ ಚರ್ಚೆಯಾಗುತ್ತಿದೆ. ನಮ್ಮವರೇ ಮಾಧ್ಯಮಕ್ಕೆ ಹೋಗುತ್ತಿದ್ದಾರೆ.

ಉ.ಕರ್ನಾಟಕಕ್ಕೆ ಸಹಾಯ ಮಾಡದ ಸಂಸದರ ಆಯ್ಕೆ ಮಾಡಿದ್ದಕ್ಕೆ ಚಪ್ಲಿಲಿ ಹೊಡ್ಕೊಬೇಕು : ಶಂಕರ ಬಿದರಿ

ಬಸನಗೌಡ ಪಾಟೀಲ್ ಯತ್ನಾಳ್ ಗೆ ನೋಟಿಸ್ ನೀಡಿದ ವಿಚಾರ. ಇದು ಪಕ್ಷದ ಕೆಲಸ, ನಾನು ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಯಾವುದೇ ಮುಜುಗರ ತರೋ ಕೆಲಸ ಆದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ.

ನಾನು ಉಗುದೆ... ಒರಸ್ಕೊಂಡ್ರೀ...ಈಗ ಜನ ಉಗೀತಾವ್ರೆ ... ಎಷ್ಟೂಂತ ಒರಸ್ಕೊತೀರಪ್ಪ: ಪ್ರಕಾಶ್‌ ರಾಜ್‌ ಲೇವಡಿ

ಚಕ್ರವರ್ತಿ ಸೂಲಿಬೆಲೆ ವಿಚಾರ ನಾನು ಮಾತನಾಡುವುದಿಲ್ಲ. ನಾನು ಈಗಾಗಲೇ ಅದನ್ನ ಮುಗಿಸಿದ್ದೀ‌ನಿ. ಸಂಸದರು ಏನು ಮಾಡುತ್ತಿಲ್ಲ ಅನ್ನೋದು ನನ್ನ ಮನಸ್ಸಿಗೆ ನೋವಾಗಿತ್ತು.

ಯಾರಿಗಾದ್ರೂ ನನ್ನ ಹೇಳಿಕೆಯಿಂದ ನೋವಾಗಿದ್ರೆ ಮರೆತು ಬಿಡಿ ಎಂದು ವಿನಂತಿ ಮಾಡಿಕೊಂಡಿದ್ದೇನೆ. ನಾನು ಸೂಲಿಬೆಲೆ ಅವರಿಗೆ ದೇಶದ್ರೋಹಿ ಅಂತಾ ಹೇಳಿಲ್ಲ. ಹಾರಿಕೆ ಸುದ್ದಿ ಹರಡುವವರಿಗೆ ದೇಶದ್ರೋಹಿ ಎಂದಿದ್ದೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ