ಆ್ಯಪ್ನಗರ

ಕೊಪ್ಪಳ: ನೀವು ಮಾವು ಬೆಳೆಗಾರರ? ಹಾಗಾದರೆ ಪ್ರಸ್ತುತ ಹಂಗಾಮಿನಲ್ಲಿ ನೀವು ಹೀಗೆ ಮಾಡಿದರೆ ಉತ್ತಮ ಫಸಲು!

ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಪ್ರಸ್ತುತ ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಸಲಹೆ ನೀಡಲಾಗಿದೆ.ಪ್ರತಿ ಗಿಡಕ್ಕೆ ವಯಸ್ಸನ್ನಾಧರಿಸಿ 500 ಗ್ರಾಂ. ನಿಂದ 1 ಕಿ.ಗ್ರಾಂ. ಉತ್ತಮ ಗುಣಮಟ್ಟದ ಬೇವಿನ ಹಿಂಡಿ ಕೊಡಬೇಕು.​​ಇದನ್ನು ಕೊಡುವಾಗ ಸುತ್ತಲೂ ಮಣ್ಣನ್ನು ಸಡಿಲಿಸಿ ಪಾತಿ ಮಾಡಬೇಕು. ಪರಾಗಸ್ಪರ್ಶ ಸಮಯದಲ್ಲಿ ನೀರುಣಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.

Vijaya Karnataka Web 15 Dec 2020, 3:00 pm
ಕೊಪ್ಪಳ: ಜಿಲ್ಲೆಯ ಮಾವು ಬೆಳೆಗಾರರಿಗೆ ಪ್ರಸ್ತುತ ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಸಲಹೆ ನೀಡಲಾಗಿದೆ. ಮಾವಿನ ಬೆಳೆಯಲ್ಲಿ ಈಗಾಗಲೇ ಹೂ ಕಚ್ಚುತ್ತಿದ್ದು, ತೋಟದಲ್ಲಿ ಲಘುವಾಗಿ ಉಳುಮೆ ಮಾಡಿ ತೋಟವನ್ನು ಕಸದಿಂದ ಮುಕ್ತವಾಗಿಡಿ. ಹಣ್ಣಿನ ನೊಣದ ಕೋಶಗಳು ಗಿಡದಡಿಯಲ್ಲಿಇರುತ್ತವೆ. ಆದ್ದರಿಂದ ಪ್ರತಿ ಗಿಡಕ್ಕೆ ವಯಸ್ಸನ್ನಾಧರಿಸಿ 500 ಗ್ರಾಂ. ನಿಂದ 1 ಕಿ.ಗ್ರಾಂ. ಉತ್ತಮ ಗುಣಮಟ್ಟದ ಬೇವಿನ ಹಿಂಡಿ ಕೊಡಬೇಕು.
Vijaya Karnataka Web mango fruit


ಇದನ್ನು ಕೊಡುವಾಗ ಸುತ್ತಲೂ ಮಣ್ಣನ್ನು ಸಡಿಲಿಸಿ ಪಾತಿ ಮಾಡಬೇಕು. ಪರಾಗಸ್ಪರ್ಶ ಸಮಯದಲ್ಲಿ ನೀರುಣಿಸದಂತೆ ನೋಡಿಕೊಳ್ಳಬೇಕು. ಈಗಾಗಲೇ ಸಾಕಷ್ಟು ತೇವಾಂಶ ಇರುವುದರಿಂದ ಕಡ್ಲೆಕಾಳು ಗಾತ್ರದ ಕಾಯಿಗಳಾಗುವವರೆಗೂ ನೀರುಣಿಸಬಾರದು. ಕೀಟಗಳ ನಿಯಂತ್ರಣಕ್ಕೆ ಇಮಿಡಾಕ್ಲೊಟ್ರೇಡ್‌ ಶೇ.17.8, 0.50 ಮಿ.ಲೀ. ಅಥವಾ ಥಯಾಮೆಥಾಕಾಮ್ಸ್‌ ಶೇ. 25 ಡಬ್ಲೂತ್ರ್ಯ.ಜಿ. 0.20 ಗ್ರಾಂ. ಅಥವಾ ಲಾಂಬ್ಡಾ ಸಿಯೊಲೋಥ್ರೀನ್‌ ಶೇ. 5 ಇ.ಸಿ. 1 ಮೀ.ಲೀ. 1 ಲೀ, ನೀರಿಗೆ ಬೆರೆಸಿ ಸಿಂಪಡಿಸಿ.

ಇದೇ ಹಂತದಲ್ಲಿ ಕಾಡಿಗೆ ರೋಗ ನಿಯಂತ್ರಿಸಲು 10 ಗ್ರಾಂ. ಗಂಜಿಯನ್ನು ಸಿಂಪಡಿಸಬೇಕು. ಗೆದ್ದಲು ನಿಯಂತ್ರಣಕ್ಕೆ ಬೊರ್ಡೋ ಮುಲಾಮನ್ನು ಬಡ್ಡಿಗೆ ಲೇಪಿಸಿ, ಜೇಡ ಮತ್ತು ಗೂಡು ಕಟ್ಟುವ ಕೀಟದ ನಿಯಂತ್ರಣಕ್ಕೆ ಬೇವಿನ ಎಣ್ಣೆ 10,000 ಪಿ.ಪಿ.ಎಂ. ಅಥವಾ ಕ್ವಿನಾಲ್‌ಫಾಸ್‌ ಶೇ.25 ಇ.ಸಿ. 2 ಮೀ.ಲೀ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವಂತೆ ತಿಳಿಸಿದ್ದಾರೆ. ಮಾಹಿತಿಗೆ ತೋಟಗಾರಿಕೆ ವಿಷಯ ತಜ್ಞರ ಮೊ-9842672039 ಹಾಗೂ ಆಯಾ ತಾಲೂಕು ಕಚೇರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

ಗಂಗಾವತಿ ಬಳಿ ಮತ್ತೆ ಚಿರತೆ ದಾಳಿ, ಬಾಲಕನಿಗೆ ಗಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ