ಆ್ಯಪ್ನಗರ

ಮದ್ಯ ವ್ಯಸನಿ ನಿಶ್ಯಕ್ತ ತಾಯಿಯನ್ನು ಭಿಕ್ಷೆ ಬೇಡಿ ಸಲಹುತ್ತಿದೆ 3 ವರ್ಷದ ಮಗು!

ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಪಂಚಾಳ್ ಸೇರಿದಂತೆ ಇತರರು ಆಸ್ಪತ್ರೆಗೆ ಭೇಟಿ ನೀಡಿ ತಾಯಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಮಗುವಿಗೆ ಫಾದರ್ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

Vijaya Karnataka Web 27 May 2019, 3:25 pm
ಕೊಪ್ಪಳ: ಈ ತಾಯಿಗೆ ಮಗುವೇ ಆಧಾರವಾಗಿದೆ. ಪ್ರತಿ ದಿನ ಭಿಕ್ಷೆ ಬೇಡಿ ತಾಯಿಗೆ ಆಹಾರ ಒದಗಿಸುತ್ತಿರುವ ದೃಶ್ಯ ಎಂಥವರ ಮನಸ್ಸು ಕರಗುವಂತೆ ಮಾಡುತ್ತಿದೆ.
Vijaya Karnataka Web ತಾಯಿ ಮಗು
ತಾಯಿ ಮಗು


ನಗರದ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 4 ದಿನಗಳಿಂದ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ದುರ್ಗಮ್ಮ ಎಂಬ ಮಹಿಳೆ ಚಿಕಿತ್ಸೆಗಾಗಿ ಆಗಮಿಸಿ ದಾಖಲಾಗಿದ್ದಳು. ಆಕೆಯೊಂದಿಗೆ 6 ವರ್ಷದ ಮಗು ಇದೆ. ಮಗುವೇ ಹೆತ್ತಮ್ಮಳನ್ನು ಜೋಪಾನ ಮಾಡಿ ಆಹಾರ ನೀಡುತ್ತಿದೆ. ತಾಯಿಗೆ ಜಡೆ ಹೆಣೆದು ಊಟ ಮಾಡಿಸುತ್ತದೆ. ದುರ್ಗಮ್ಮ ಮದ್ಯ ವ್ಯಸನಿಯಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದಳು. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಬಿಡುಗಡೆಗೊಳಿಸಿದ್ದಾರೆ.

ತಲೆ ಬಾಚಿದ ಮಗು


ಆದರೆ ಆಕೆಗೆ ಮದ್ಯ ಸೇವಿಸುವ ಚಟಕ್ಕೆ ಅಂಟಿಕೊಂಡಿರುವುದರಿಂದ ಬಿಡುಗಡೆಗೊಳಿಸಿದ್ದರೂ ಮನೆಗೆ ಹೋಗಿಲ್ಲ. ಪತಿಯೂ ಬೇರೊಂದು ಮದುವೆಯಾಗಿದ್ದು, ಆಕೆಯನ್ನು ನೋಡಿಕೊಳ್ಳುವವರು ಯಾರು ಇಲ್ಲ. ಆದ್ದರಿಂದ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾಳೆ.

ಮಗು ಪ್ರತಿ ದಿನ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಿದೆ. ಭಿಕ್ಷೆಯಿಂದ ಬರುವ ಹಣದಲ್ಲಿ ತಾಯಿಗೆ ಆಹಾರ ಒದಗಿಸುತ್ತಿದೆ. ತಾಯಿ ಅಲ್ಪಸ್ವಲ್ಪ ಆಹಾರ ತಿಂದು ಉಳಿದ ಹಣದಲ್ಲಿ ಮದ್ಯ ಸೇವಿಸಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾಳೆ. ತೀವ್ರ ನಿಶ್ಯಕ್ತಳಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಆದರೆ ತಾಯಿಯ ಆಶ್ರಯದಲ್ಲಿ ಬೆಳೆಯ ಬೇಕಾಗಿದ್ದ ಮಗು, ತಾಯಿಗೆ ಆಶ್ರಯ ನೀಡುತ್ತಿರುವುದು ಆಸ್ಪತ್ರೆ ಬರುವವರ ಮನಸ್ಸು ಮಮ್ಮಲ ಕರಗುಂತೆ ಮಾಡುತ್ತಿದೆ.

ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಪಂಚಾಳ್ ಸೇರಿದಂತೆ ಇತರರು ಆಸ್ಪತ್ರೆಗೆ ಭೇಟಿ ನೀಡಿ ತಾಯಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಮಗುವಿಗೆ ತಾತ್ಕಾಲಿಕವಾಗಿ ಫಾದರ್ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ