ಆ್ಯಪ್ನಗರ

ಕೊಪ್ಪಳ: ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ತಾ.ಪಂ. ಸದಸ್ಯೆ ಸಾವು

ಬುಧವಾರ ರಾತ್ರಿ ಕುಷ್ಠಗಿ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಕಡಿದು ಕಿರಾಣಿ ಅಂಗಡಿಯ ಕಬ್ಬಿಣದ ಶಟರ್ಸ್ ಮೇಲೆ ಬಿದ್ದಿತ್ತು. ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾರ ಗಮನಕ್ಕೂ ಇದು ಬಂದಿರಲಿಲ್ಲ.

Vijaya Karnataka Web 19 Sep 2019, 7:46 pm
ಕೊಪ್ಪಳ: ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ತಾ.ಪಂ.ಸದಸ್ಯೆಯೊಬ್ಬರು ಗುರುವಾರ ಸಂಜೆ ಸಾವನ್ನಪ್ಪಿದ್ದಾರೆ‌. ಜುಮಲಾಪುರ ಗ್ರಾಮದ ತಾಪಂ ಸದಸ್ಯೆ ಸರಸ್ವತಿ ವೀರೇಶ ಗಂಗನಾಳ (38) ಮೃತ ಮಹಿಳೆ.
Vijaya Karnataka Web Koppal Taluk Panchayat Member Saraswati


ಬುಧವಾರ ರಾತ್ರಿ ಕುಷ್ಠಗಿ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಕಡಿದು ಕಿರಾಣಿ ಅಂಗಡಿಯ ಕಬ್ಬಿಣದ ಶಟರ್ಸ್ ಮೇಲೆ ಬಿದ್ದಿತ್ತು. ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾರ ಗಮನಕ್ಕೂ ಇದು ಬಂದಿರಲಿಲ್ಲ.

ಆದರೆ ಗುರುವಾರ ಸಂಜೆ ಏಕಾಏಕಿ ಈ ತಂತಿಯಲ್ಲಿ ವಿದ್ಯುತ್ ಹರಿದಿದ್ದು, ಎಂದಿನಂತೆ ಸರಸ್ವತಿ ಅವರು ಕಿರಾಣಿ ಅಂಗಡಿಯ ಶಟರ್ಸ್ ತೆಗೆಯಲು ಹೋದಾಗ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡಿದ್ದರು.

ತಕ್ಷಣ ಅವರಿಗೆ ತಾವರಗೇರಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ತಾ.ಪಂ.ಸದಸ್ಯೆ ಸರಸ್ವತಿ ಮೃತರಾಗಿದ್ದಾರೆ. ಈ ಸಂಬಂಧ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ