ಕೊಪ್ಪಳ: ಚಿರತೆ ದಾಳಿಗೆ ಕರು ಬಲಿಯಾದ ಘಟನೆ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಡೆದಿದೆ.
ರಾತ್ರಿ ವೇಳೆ ಗ್ರಾಮಕ್ಕೆ ಆಗಮಿಸಿದ ಚಿರತೆ, ಬಸಯ್ಯ ಶಿದ್ನೆಕೊಪ್ಪ ಎಂಬವರಿಗೆ ಸೇರಿದ ಕರು ತಿಂದು ಪರಾರಿಯಾಗಿದೆ. ವಿರೂಪಾಕ್ಷ ಗೌಡರು ಎನ್ನುವರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಆದರೆ, ಗ್ರಾಮಕ್ಕೆ ನುಗ್ಗಿರುವುದು ಚಿರತೆಯೋ ಅಥವಾ ಇನ್ಯಾವುದೊ ಪ್ರಾಣಿಯೋ ಎಂಬ ಸ್ಪಷ್ಟವಾಗುತ್ತಿಲ್ಲ. ಆದರೆ, ಗ್ರಾಮಕ್ಕೆ ನುಗ್ಗಿರುವುದು ಚಿರತೆಯೇ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ವಾರದ ಹಿಂದಷ್ಟೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ರಾತ್ರಿ ವೇಳೆ ಗ್ರಾಮಕ್ಕೆ ಆಗಮಿಸಿದ ಚಿರತೆ, ಬಸಯ್ಯ ಶಿದ್ನೆಕೊಪ್ಪ ಎಂಬವರಿಗೆ ಸೇರಿದ ಕರು ತಿಂದು ಪರಾರಿಯಾಗಿದೆ. ವಿರೂಪಾಕ್ಷ ಗೌಡರು ಎನ್ನುವರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಆದರೆ, ಗ್ರಾಮಕ್ಕೆ ನುಗ್ಗಿರುವುದು ಚಿರತೆಯೋ ಅಥವಾ ಇನ್ಯಾವುದೊ ಪ್ರಾಣಿಯೋ ಎಂಬ ಸ್ಪಷ್ಟವಾಗುತ್ತಿಲ್ಲ. ಆದರೆ, ಗ್ರಾಮಕ್ಕೆ ನುಗ್ಗಿರುವುದು ಚಿರತೆಯೇ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ವಾರದ ಹಿಂದಷ್ಟೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.