ಆ್ಯಪ್ನಗರ

ಕೊಪ್ಪಳ; ಆನೆಗೊಂದಿ ಬಳಿ ಚಿರತೆ ಕಾರ್ಯಾಚರಣೆ ಯಶಸ್ವಿ, ಕೊನೆಗೂ ಬೋನಿಗೆ ಬಿತ್ತಾ ನರಭಕ್ಷಕ?

ಚಿರತೆ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಆನೆಗೊಂದಿ ಸುತ್ತಲಿನ ಪ್ರದೇಶದಲ್ಲಿ ಬೋನು ಇಡಲಾಗಿತ್ತು. ಚಿರತೆಗೆ ಇಬ್ಬರು ಬಲಿಯಾಗಿದ್ದು ಅರಣ್ಯ ಇಲಾಖೆಯಿಂದ ಎರಡು ತಿಂಗಳಿಂದ ಚಿರತೆ ಹಿಡಿಯಲು ಪ್ರಯತ್ನ ಸಾಗಿತ್ತು.

Vijaya Karnataka Web 18 Jan 2021, 1:29 pm
ಕೊಪ್ಪಳ: ಕಳೆದ ಕೆಲವು ತಿಂಗಳುಗಳಿಂದ ತೀವ್ರ ಉಪಟಳ ಕೊಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
Vijaya Karnataka Web ಚಿರತೆ
ಚಿರತೆ


ಆನೆಗೊಂದಿ ಬಳಿ ಹಲವು ತಿಂಗಳುಗಳಿಂದ ಚಿರತೆ ದಾಳಿ ನಡೆಸಿ ಇಬ್ಬರು ಬಲಿ ಪಡೆದಿತ್ತು. ಎಷ್ಟೇ ಕಾರ್ಯಾಚರಣೆ ನಡೆಸಿದರೂ ಚಿರತೆ ಬೋನಿಗೆ ಬಿದ್ದಿದೆ. ಆದರೆ ಸೋಮವಾರ ಬೋನಿಗೆ ಬಿದ್ದಿರುವುದು ನರಭಕ್ಷಕ ಚಿರತೆಯೇ ಅಥಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಕೊಪ್ಪಳ ಅರಣ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಬಳಿಯ ಶ್ರೀ ಆದಿಶಕ್ತಿ ದುರ್ಗಾ ದೇವಿ ದೇವಸ್ಥಾನ ಸಮೀಪ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.

ಚಿರತೆ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಆನೆಗೊಂದಿ ಸುತ್ತಲಿನ ಪ್ರದೇಶದಲ್ಲಿ ಬೋನು ಇಡಲಾಗಿತ್ತು. ಚಿರತೆಗೆ ಇಬ್ಬರು ಬಲಿಯಾಗಿದ್ದು ಅರಣ್ಯ ಇಲಾಖೆಯಿಂದ ಎರಡು ತಿಂಗಳಿಂದ ಚಿರತೆ ಹಿಡಿಯಲು ಪ್ರಯತ್ನ ಸಾಗಿತ್ತು.

ಡಿಸೆಂಬರ್‌ನಲ್ಲಿ ಚಿರತೆ ಸೆರೆಯಾಗಿದ್ದು ಕಮಲಾಪುರದ ಝೂ ಗೆ ಬಿಡಲಾಗಿತ್ತು. ಸೋಮವಾರ ಬೆಳಗಿನ ಜಾವ ಅರಣ್ಯ ಇಲಾಖೆಯ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ.

ಸುಮಾರು 5 ವರ್ಷದ ಗಂಡು ಚಿರತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೋನಿಗೆ ಬಿದ್ದಿರುವ ಈ ಚಿರತೆ ನರಭಕ್ಷಕ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ