ಗಂಗಾಧರ ಬಂಡಿಹಾಳ, ಕೊಪ್ಪಳ
ಮದ್ಯ ಅಕ್ರಮ ಮಾರಾಟದ ವಿರುದ್ಧ ಸಮರ ಸಾರಿರುವ ಪೊಲೀಸ್ ಇಲಾಖೆ, ಇನ್ಮುಂದೆ ಅಕ್ರಮ ಮದ್ಯ ಕಂಡುಬಂದರೆ ಮದ್ಯ ಸರಬರಾಜುಗೊಳಿಸುವ ಅಂಗಡಿ ಮಾಲೀಕರ ವಿರುದ್ಧವೇ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದೆ. ಆದರೆ ಸತತ ದಾಳಿಯ ಮಧ್ಯೆಯೂ ಅಕ್ರಮದ ಘಾಟು ಮೂಗಿಗೆ ಬಡಿಯುತ್ತಿರುವುದು ಮುಂದುವರಿದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮಾ.28 ರಿಂದ ಈವರೆಗೆ ಪ್ರತಿ ದಿನ ಸುಮಾರು 30 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ಮದ್ಯ ವಶಪಡಿಸಿಕೊಂಡಿದ್ದು, ನಾಲ್ಕು ದಿನದಲ್ಲಿ 1.22 ಲಕ್ಷ ರೂ. ದಾಟಿದೆ. ದಿನಕ್ಕೆ 35 ಸಾವಿರ ರೂ.ದಿಂದ 45 ಸಾವಿರ ರೂ. ಮೊತ್ತದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಆದರೂ ಕದ್ದುಮುಚ್ಚಿ ಮದ್ಯ ಮಾರಾಟ ಮುಂದುವರಿದಿದ್ದರಿಂದ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದಿಡಲು ನಿರ್ಧಾರ ತೆಗೆದುಕೊಳ್ಳುತ್ತಿದೆ. ಇನ್ಮುಂದೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅಕ್ರಮ ಮದ್ಯ ಚಿಲ್ಲರೆ ಮಾರಾಟ ಮಾಡುವವರ ವಿರುದ್ಧ ಕೇಸ್ ಜಡಿಯುವ ಬದಲಿ, ಮದ್ಯ ಅಕ್ರಮವಾಗಿ ಪೂರೈಸುತ್ತಿರುವ ಮದ್ಯದಂಗಡಿ ಮಾಲೀಕರ ವಿರುದ್ಧವೇ ಕಾನೂನು ಕ್ರಮಕ್ಕೆ ಮುಂದಾಗುತ್ತಿದೆ.
ಎಚ್ಚರಿಕೆ: ಜಿಲ್ಲೆಯಾದ್ಯಂತ ಸಿಎಲ್ 2, ಸಿಎಲ್ -7, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ಸುಮಾರು 120 ಇವೆ. ಅಂಗಡಿ ಮಾಲೀಕರಿಗೆ ಕಾನೂನಿನ ಎಚ್ಚರಿಕೆ ನೀಡಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡದಂತೆ ಸೂಚಿಸಿದೆ. ಆದರೂ ನಾಲ್ಕು ದಿನದಿಂದಲೂ ಮದ್ಯ ಮಾರಾಟ ಕಂಡುಬರುತ್ತಿವೆ. ಚಿಗುರು ಕತ್ತರಿಸುವುದಕ್ಕಿಂತ ಬುಡಕ್ಕೆ ಪೆಟ್ಟು ನೀಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ದೊಡ್ಡ ಕುಳಗಳಿಗೆ ಪೆಟ್ಟು: ಅಬಕಾರಿ ಇಲಾಖೆಯ ನಿಯಮದ ಪ್ರಕಾರ ಬ್ರಾಂಡಿ, ವಿಸ್ಕಿ, ಜಿನ್ ಸೇರಿ ಇತರೆ ಮದ್ಯವನ್ನು ವ್ಯಕ್ತಿಯೊಬ್ಬರು 2.3 ಲೀಟರ್ ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ವಿದೇಶಿ ಮದ್ಯವಾದರೆ 9.1 ಲೀಟರ್ ಸಂಗ್ರಹಿಸಿಟ್ಟುಕೊಳ್ಳಬಹುದು. ಜತೆಗೆ ಅಂಗಡಿಯವರು ಇದಕ್ಕಿಂತ ಹೆಚ್ಚಿಗೆ ಮಾರಾಟ ಮಾಡುವುದಕ್ಕೆ ಬರುವುದಿಲ್ಲ. ಆದ್ದರಿಂದ ಅಬಕಾರಿ ಇಲಾಖೆಯ ನಿಯಮವನ್ನೇ ಆಧಾರವಾಗಿಟ್ಟು ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುವವರಿಗೆ ಸರಬರಾಜು ಮಾಡುತ್ತಿರುವ ದೊಡ್ಡ ಕುಳಗಳಿಗೆ ಪೆಟ್ಟು ನೀಡಲು ತೀರ್ಮಾನಿಸಿದೆ ಎಂದು ಪೊಲೀಸ್ ಮೂಲ ತಿಳಿಸಿವೆ.
ಇನ್ಮುಂದೆ ದಾಳಿ ನಡೆಸಿದ ವೇಳೆಯಲ್ಲಿ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಅವರಿಗೆ ಪೂರೈಸಿದ ಅಂಗಡಿ ಮಾಲೀಕರ ವಿರುದ್ಧ ಕೇಸ್ ಮಾಡಲಾಗುವುದು. ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರೆ ಮುಂಬರುವ ದಿನದಲ್ಲಿ ಅಕ್ರಮವಾಗಿ ಪೂರೈಸಲು ಹಿಂದೇಟು ಹಾಕುತ್ತಾರೆ. ಆದರೆ ಈವರೆಗೆ ಲಾಭ ಪಡೆಯುವವರೇ ಬೇರೆ, ಶಿಕ್ಷೆ ಅನುಭವಿಸುವವರೇ ಬೇರೆಯಾಗಿದ್ದರು. ಮುಂಬರುವ ದಿನದಲ್ಲಿ ಲಾಭ ಪಡೆಯುವ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರೆ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಬಹುದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
................
ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದಕ್ಕಾಗಿ ಪೊಲೀಸ್ ಅಧಿಕಾರಿಗಳು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಮದ್ಯ ಅಕ್ರಮ ಮಾರಾಟ ಮುಂದುವರಿದರೆ ಸರಬರಾಜು ಮಾಡುವ ಮಾಲೀಕರ ವಿರುದ್ಧವೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
- ಡಾ.ಅನೂಪ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ
ಮದ್ಯ ಅಕ್ರಮ ಮಾರಾಟದ ವಿರುದ್ಧ ಸಮರ ಸಾರಿರುವ ಪೊಲೀಸ್ ಇಲಾಖೆ, ಇನ್ಮುಂದೆ ಅಕ್ರಮ ಮದ್ಯ ಕಂಡುಬಂದರೆ ಮದ್ಯ ಸರಬರಾಜುಗೊಳಿಸುವ ಅಂಗಡಿ ಮಾಲೀಕರ ವಿರುದ್ಧವೇ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದೆ. ಆದರೆ ಸತತ ದಾಳಿಯ ಮಧ್ಯೆಯೂ ಅಕ್ರಮದ ಘಾಟು ಮೂಗಿಗೆ ಬಡಿಯುತ್ತಿರುವುದು ಮುಂದುವರಿದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮಾ.28 ರಿಂದ ಈವರೆಗೆ ಪ್ರತಿ ದಿನ ಸುಮಾರು 30 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ಮದ್ಯ ವಶಪಡಿಸಿಕೊಂಡಿದ್ದು, ನಾಲ್ಕು ದಿನದಲ್ಲಿ 1.22 ಲಕ್ಷ ರೂ. ದಾಟಿದೆ. ದಿನಕ್ಕೆ 35 ಸಾವಿರ ರೂ.ದಿಂದ 45 ಸಾವಿರ ರೂ. ಮೊತ್ತದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಆದರೂ ಕದ್ದುಮುಚ್ಚಿ ಮದ್ಯ ಮಾರಾಟ ಮುಂದುವರಿದಿದ್ದರಿಂದ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದಿಡಲು ನಿರ್ಧಾರ ತೆಗೆದುಕೊಳ್ಳುತ್ತಿದೆ. ಇನ್ಮುಂದೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅಕ್ರಮ ಮದ್ಯ ಚಿಲ್ಲರೆ ಮಾರಾಟ ಮಾಡುವವರ ವಿರುದ್ಧ ಕೇಸ್ ಜಡಿಯುವ ಬದಲಿ, ಮದ್ಯ ಅಕ್ರಮವಾಗಿ ಪೂರೈಸುತ್ತಿರುವ ಮದ್ಯದಂಗಡಿ ಮಾಲೀಕರ ವಿರುದ್ಧವೇ ಕಾನೂನು ಕ್ರಮಕ್ಕೆ ಮುಂದಾಗುತ್ತಿದೆ.
ಎಚ್ಚರಿಕೆ: ಜಿಲ್ಲೆಯಾದ್ಯಂತ ಸಿಎಲ್ 2, ಸಿಎಲ್ -7, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ಸುಮಾರು 120 ಇವೆ. ಅಂಗಡಿ ಮಾಲೀಕರಿಗೆ ಕಾನೂನಿನ ಎಚ್ಚರಿಕೆ ನೀಡಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡದಂತೆ ಸೂಚಿಸಿದೆ. ಆದರೂ ನಾಲ್ಕು ದಿನದಿಂದಲೂ ಮದ್ಯ ಮಾರಾಟ ಕಂಡುಬರುತ್ತಿವೆ. ಚಿಗುರು ಕತ್ತರಿಸುವುದಕ್ಕಿಂತ ಬುಡಕ್ಕೆ ಪೆಟ್ಟು ನೀಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ದೊಡ್ಡ ಕುಳಗಳಿಗೆ ಪೆಟ್ಟು: ಅಬಕಾರಿ ಇಲಾಖೆಯ ನಿಯಮದ ಪ್ರಕಾರ ಬ್ರಾಂಡಿ, ವಿಸ್ಕಿ, ಜಿನ್ ಸೇರಿ ಇತರೆ ಮದ್ಯವನ್ನು ವ್ಯಕ್ತಿಯೊಬ್ಬರು 2.3 ಲೀಟರ್ ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ವಿದೇಶಿ ಮದ್ಯವಾದರೆ 9.1 ಲೀಟರ್ ಸಂಗ್ರಹಿಸಿಟ್ಟುಕೊಳ್ಳಬಹುದು. ಜತೆಗೆ ಅಂಗಡಿಯವರು ಇದಕ್ಕಿಂತ ಹೆಚ್ಚಿಗೆ ಮಾರಾಟ ಮಾಡುವುದಕ್ಕೆ ಬರುವುದಿಲ್ಲ. ಆದ್ದರಿಂದ ಅಬಕಾರಿ ಇಲಾಖೆಯ ನಿಯಮವನ್ನೇ ಆಧಾರವಾಗಿಟ್ಟು ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುವವರಿಗೆ ಸರಬರಾಜು ಮಾಡುತ್ತಿರುವ ದೊಡ್ಡ ಕುಳಗಳಿಗೆ ಪೆಟ್ಟು ನೀಡಲು ತೀರ್ಮಾನಿಸಿದೆ ಎಂದು ಪೊಲೀಸ್ ಮೂಲ ತಿಳಿಸಿವೆ.
ಇನ್ಮುಂದೆ ದಾಳಿ ನಡೆಸಿದ ವೇಳೆಯಲ್ಲಿ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಅವರಿಗೆ ಪೂರೈಸಿದ ಅಂಗಡಿ ಮಾಲೀಕರ ವಿರುದ್ಧ ಕೇಸ್ ಮಾಡಲಾಗುವುದು. ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರೆ ಮುಂಬರುವ ದಿನದಲ್ಲಿ ಅಕ್ರಮವಾಗಿ ಪೂರೈಸಲು ಹಿಂದೇಟು ಹಾಕುತ್ತಾರೆ. ಆದರೆ ಈವರೆಗೆ ಲಾಭ ಪಡೆಯುವವರೇ ಬೇರೆ, ಶಿಕ್ಷೆ ಅನುಭವಿಸುವವರೇ ಬೇರೆಯಾಗಿದ್ದರು. ಮುಂಬರುವ ದಿನದಲ್ಲಿ ಲಾಭ ಪಡೆಯುವ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರೆ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಬಹುದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
................
ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದಕ್ಕಾಗಿ ಪೊಲೀಸ್ ಅಧಿಕಾರಿಗಳು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಮದ್ಯ ಅಕ್ರಮ ಮಾರಾಟ ಮುಂದುವರಿದರೆ ಸರಬರಾಜು ಮಾಡುವ ಮಾಲೀಕರ ವಿರುದ್ಧವೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
- ಡಾ.ಅನೂಪ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ