ಆ್ಯಪ್ನಗರ

ಬ್ಯಾಂಕ್‌ನಿಂದ ಡ್ರಾ ಮಾಡಿದ್ದ 1.50ಲಕ್ಷ ಎಗರಿಸಿದ ಕಳ್ಳರು

ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಕಳ್ಳರು ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ.

Vijaya Karnataka Web 2 Jul 2019, 2:32 pm
ಕೊಪ್ಪಳ: ಗಂಗಾವತಿ ನಗರದ ಎಕ್ಸಿಸ್ ಬ್ಯಾಂಕ್ ಎದುರುಗಡೆ ಗ್ರಾಹಕನ ಗಮನ ಬೇರೆಡೆ ಸೆಳೆದ ಕಳ್ಳರು 1.50 ಲಕ್ಷ ರೂಪಾಯಿ ಎಗರಿಸಿದ್ದಾರೆ.
Vijaya Karnataka Web Axis Bank


ವೀರೇಶ ಕಳಕಪ್ಪ ವಡ್ಡರಹಟ್ಟಿ ಹಣ ಕಳೆದುಕೊಂಡ ಗ್ರಾಹಕ.

ವೀರೇಶ್ ಹಣ ಡ್ರಾ ಮಾಡಿಕೊಂಡು ಬೈಕ್ ಪಾರ್ಕ್ ಮಾಡಿದ್ದ ಕಡೆ ನಡೆದು ಹೋಗಿದ್ದಾರೆ. ಹ್ಯಾಂಡಲ್‌ಗೆ ಹಣದ ಬ್ಯಾಗ್ ನೇತು ಹಾಕಿ , ಬೈಕ್ ಸ್ಟಾರ್ಟ್ ಮಾಡಬೇಕು ಎನ್ನುವಷ್ಟರಲ್ಲಿಯೇ ಮತ್ತೊಂದು ಬೈಕ್‌ನಲ್ಲಿ ಆಗಮಿಸಿದ್ದ ಕಳ್ಳರು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ