ಆ್ಯಪ್ನಗರ

'ಏಕವಚನದಲ್ಲಿ ಮಾತನಾಡೋದು ಡಿಕೆ ಶಿವಕುಮಾರ್ ಸಂಸ್ಕೃತಿ' : ಬಿಸಿ ಪಾಟೀಲ್

ಕೊಪ್ಪಳದಲ್ಲಿ ಮಾತನಾಡಿದ ಅವರು ಒಂದು ಪಕ್ಷದ ಅಧ್ಯಕ್ಷರಾಗಿರುವ ಅವರು ಸಿಎಂ, ಗೃಹ ಸಚಿವರು ಯಾರೆಂಬುದು ಗೊತ್ತಿಲ್ಲದ ಅಜ್ಞಾನಿಯೇ? ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್‌ ಮುಂದೆ ಬರುತ್ತಿಲ್ಲ. ವೋಟ್‌ ಬ್ಯಾಂಕ್‌ಗಾಗಿ ದಲಿತ ಶಾಸಕರನ್ನೇ ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಒಂದು ವೇಳೆ ಬೇರೆ ಶಾಸಕರಾಗಿದ್ದರೆ ರಾಜ್ಯಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

Vijaya Karnataka 16 Aug 2020, 6:57 am
ಕೊಪ್ಪಳ: ಗೃಹ ಸಚಿವರ ಬಗ್ಗೆ ಏಕವಚನದಲ್ಲಿಮಾತನಾಡುವುದು ಡಿ.ಕೆ.ಶಿವಕುಮಾರ್‌ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್‌ ವ್ಯಂಗ್ಯವಾಡಿದರು.
Vijaya Karnataka Web BC Patil


ಶಾಂತಿಗೆ ಭಂಗ ಬಂದಲ್ಲಿ ಸುಮ್ಮನೆ ಕೂರಲ್ಲ-ಡಿಕೆಶಿಗೆ ಗೃಹ ಸಚಿವ ಬೊಮ್ಮಾಯಿ ತಿರುಗೇಟು

ಶನಿವಾರ ಕೊಪ್ಪಳದಲ್ಲಿ ಮಾತನಾಡಿದ ಅವರು ಒಂದು ಪಕ್ಷದ ಅಧ್ಯಕ್ಷರಾಗಿರುವ ಅವರು ಸಿಎಂ, ಗೃಹ ಸಚಿವರು ಯಾರೆಂಬುದು ಗೊತ್ತಿಲ್ಲದ ಅಜ್ಞಾನಿಯೇ? ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್‌ ಮುಂದೆ ಬರುತ್ತಿಲ್ಲ. ವೋಟ್‌ ಬ್ಯಾಂಕ್‌ಗಾಗಿ ದಲಿತ ಶಾಸಕರನ್ನೇ ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಒಂದು ವೇಳೆ ಬೇರೆ ಶಾಸಕರಾಗಿದ್ದರೆ ರಾಜ್ಯಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ಶಿರಾದಲ್ಲಿ ಸ್ಪರ್ಧೆ ವದಂತಿ: ಖಾಲಿಬಿದ್ದ ಕ್ಷೇತ್ರಕ್ಕೆ ಜೋತುಬೀಳುವ ಜಾಯಮಾನ

ಎರಡು ದಿನದ ಹಿಂದೆ ಬೆಂಗಳೂರುನಲ್ಲಿ ನಡೆದ ಗಲಭೆಯನ್ನು ಖಂಡಿಸುವ ಭರದಲ್ಲಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದ ಡಿಕೆಶಿ, ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳ ನಡೆಯುತ್ತಿರುವ ಫಲವಾಗಿ ಈ ಗಲಭೆ ನಡೆದಿದೆ ಅಂತ ಹೇಳುವುದಕ್ಕೆ ಗೃಹ ಸಚಿವರು ಯಾರು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಇದು ಕಾಂಗ್ರೆಸ್‌ನ ಒಳ ಗಲಾಟೆ ಅಲ್ಲ. ಬಿಜೆಪಿಯವರೇ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹಬ್ಬಿ ಗಲಭೆ ಮಾಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಂತಹ ಕೋಮು ಗಲಭೆ ಎಬ್ಬಿಸುತ್ತಲೆ ಇರುತ್ತಾರೆ ಎಂದು ಹೇಳಿದ್ದರು.

ಡಿಜೆ ಹಳ್ಳಿ ಗಲಭೆ: ದೂರು ನೀಡದಂತೆ ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಕಾಂಗ್ರೆಸ್‌ ಒತ್ತಡ

ನಂತರ ಗೃಹಚಿವರ ಬಗ್ಗೆ ಏಕವಚನ ಬಳಸಿದ್ದು ವಿವಾದದ ಸ್ವರೂಪ ಪಡೆಯುತ್ತಿದ್ದ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಡಿಕೆಶಿ, ತಾನು ಮಾತಿನ ಭರದಲ್ಲಿ ಹಾಗೆ ಹೇಳಿದ್ದೇನೆಯೇ ಹೊರತು ಬೇಕಂತಲೇ ಹೇಳಿಲ್ಲ. ಗೇಹ ಸಚಿವರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ. ಗೃಹ ಸಚಿವರ ಬಗ್ಗೆ ನನಗೆ ಗೌರವ ಇದೆ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ