ಆ್ಯಪ್ನಗರ

ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ವಿಫಲವಾಗಿಲ್ಲ : ಬಿ.ಸಿ. ಪಾಟೀಲ್

ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಚಿವ ಬಿಸಿ ಪಾಟೀಲ್, ಕೊರೊನಾ ಸೋಂಕು ಯಾರನ್ನೂ ಬಿಟ್ಟಿಲ್ಲ. ಜನಸಾಮಾನ್ಯರಿಂದ ಹಿಡಿದು ಮಾಧ್ಯಮದವರನ್ನು, ಜನಪ್ರತಿನಿಧಿಗಳನ್ನೂ ಬಿಟ್ಟಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಇನ್ನು ಲಾಕ್‌ಡೌನ್ ಕುರಿತು ಮಾತನಾಡಿದ ಅವರು, ಲಾಕ್‌ಡೌನ್ ವಿಧಿಸಿದರೆ ಕೊರೊನಾ ಹೋಗುತ್ತದೆ, ಇಲ್ಲದಿದ್ದರೆ ಹೋಗಲ್ಲ ಎನ್ನುವುದು ತಪ್ಪು ಎಂದರು.

Vijaya Karnataka Web 20 Jul 2020, 12:58 pm
ಕೊಪ್ಪಳ: ರಾಜ್ಯದ ಬಹುತೇಕ ಕಡೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಛಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಕೂಡ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಈ ರೋಗದ ನಿಯಂತ್ರಣ ಕ್ರಮಕ್ಕಾಗಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ.
Vijaya Karnataka Web BC Patil


ಕೊಪ್ಪಳ: ಬಿಜೆಪಿ ಎಂಎಲ್‌ಎ ಪರಣ್ಣ ಮುನವಳ್ಳಿಗೆ ಕೊರೊನಾ; ಪ್ರಾಥಮಿಕ ಸಂಪರ್ಕದಲ್ಲಿ ಇಬ್ಬರು 'ಕೈ' ಶಾಸಕರು

ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಚಿವ ಬಿಸಿ ಪಾಟೀಲ್, ಕೊರೊನಾ ಸೋಂಕು ಯಾರನ್ನೂ ಬಿಟ್ಟಿಲ್ಲ. ಜನಸಾಮಾನ್ಯರಿಂದ ಹಿಡಿದು ಮಾಧ್ಯಮದವರನ್ನು, ಜನಪ್ರತಿನಿಧಿಗಳನ್ನೂ ಬಿಟ್ಟಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಇನ್ನು ಲಾಕ್‌ಡೌನ್ ಕುರಿತು ಮಾತನಾಡಿದ ಅವರು, ಲಾಕ್‌ಡೌನ್ ವಿಧಿಸಿದರೆ ಕೊರೊನಾ ಹೋಗುತ್ತದೆ, ಇಲ್ಲದಿದ್ದರೆ ಹೋಗಲ್ಲ ಎನ್ನುವುದು ತಪ್ಪು. ಸರಕಾರ ಕೈಗೊಂಡಿರುವ ಕ್ರಮಗಳಿಗೆ ಜನರ ಸಹಕಾರ ಬೇಕು. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ವಿಫಲ ಆಗಿಲ್ಲ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು..

ಕೊಪ್ಪಳ: ಜಯತೀರ್ಥರ ಆರಾಧನೆಯಲ್ಲಿದ್ದ ಭಕ್ತನಿಗೆ ಕೊರೊನಾ, ಆನೆಗುಂದಿ ಬಳಿಯ ನವವೃಂದಾವನ ಸೀಲ್‌ಡೌನ್‌

ಇನ್ನು ಮಾಜಿ ಸಚಿವ ಶಿವರಾಜ ತಂಗಡಗಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಶಿವರಾಜ ತಂಗಡಗಿ ಪ್ರಾಮಾಣಿಕ, ಸತ್ಯ‌ ಹರಿಶ್ಚಂದ್ರರಂಥ ವ್ಯಕ್ತಿ ಅಂತ ಕಾಣುತ್ತದೆ. ಆದ್ದರಿಂದಲೇ ಕ್ಷೇತ್ರದ ಜನತೆ ಅವರನ್ನು ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಆಗಿ ಕಾಣುತ್ತದೆ ಎಂದು ತಿರುಗೇಟು ನೀಡಿದರು.

ಕೊಪ್ಪಳದಲ್ಲಿ ಜನಸಂಖ್ಯಾ ಬೆಳವಣಿಗೆ ದರ ಇಳಿಮುಖ..! 3 ವರ್ಷಗಳಿಂದ ಏರುಗತಿ ಇಲ್ಲ..!

ಇದೇ ವೇಳೆ ರಾಜ್ಯದಲ್ಲಿ ಗೊಬ್ಬರ, ಬೀಜದ ಕೊರತೆ ಇಲ್ಲ. ಕೆಲವೆಡೆ ಸೇಲ್ ಆಗುತ್ತಿಲ್ಲ. ಪಾಯಿಂಟ್ ಆಫ್ ಸೇಲ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯೂರಿಯಾ ಹೆಚ್ಚಿಗೆ ಬಳಸಬಾರದು. ಬಳಸಿದರೆ ಭೂಮಿ ಬಂಜರು ಆಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ