ಆ್ಯಪ್ನಗರ

ಬಸವಕಲ್ಯಾಣ ಚುನಾವಣೆಯಲ್ಲಿ ಸೋತರೆ ಸರಕಾರ ಬಿದ್ದು ಹೋಗುವುದಿಲ್ಲ: ಬಿಸಿ ಪಾಟೀಲ್‌

ನಿಗಮ ಸ್ಥಾಪಿಸುವ ಮೂಲಕ ಓಲೈಕೆ ರಾಜಕಾರಣ ಎನ್ನುವುದಕ್ಕೆ ಈಗೇನು ಎಲ್ಲೂ ಇಲೆಕ್ಷನ್ ಇಲ್ಲ. ಬಸವಕಲ್ಯಾಣ ಚುನಾವಣೆಯಲ್ಲಿ ಸೋತರೆ ಸರಕಾರ ಬಿದ್ದು ಹೋಗುವುದಿಲ್ಲ. ಅದಕ್ಕಾಗಿ ಮರಾಠ, ವೀರ ಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದು ಸಚಿವ ಬಿಸಿ ಪಾಟೀಲ್‌ ಕೊಪ್ಪಳದಲ್ಲಿ ಹೇಳಿದರು.

Vijaya Karnataka Web 20 Nov 2020, 12:18 pm
ಕೊಪ್ಪಳ: ಮರಾಠ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಸರಕಾರ ಸರಿಯಾದ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕುಂಬಾರ, ವಿಶ್ವಕರ್ಮ, ಬ್ರಾಹ್ಮಣ, ಅಲ್ಪಸಂಖ್ಯಾತ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಾಡಿದೆ. ಆದರೆ ಮರಾಠ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ವಿರೋಧ ವ್ಯಕ್ತವಾಗುವುದು ಸರಿಯಲ್ಲ.
Vijaya Karnataka Web BC Patil


ನಿಗಮ ಸ್ಥಾಪಿಸುವ ಮೂಲಕ ಓಲೈಕೆ ರಾಜಕಾರಣ ಎನ್ನುವುದಕ್ಕೆ ಈಗೇನು ಎಲ್ಲೂ ಇಲೆಕ್ಷನ್ ಇಲ್ಲ. ಬಸವಕಲ್ಯಾಣ ಚುನಾವಣೆಯಲ್ಲಿ ಸೋತರೆ ಸರಕಾರ ಬಿದ್ದು ಹೋಗುವುದಿಲ್ಲ. ಅದಕ್ಕಾಗಿ ಮರಾಠ, ವೀರ ಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ನಿಗಮಕ್ಕೆ ಸಂಬಂಧಿಸಿದಂತೆ ಸರಕಾರ ಸರಿಯಾದ ಕ್ರಮ ಕೈಗೊಂಡಿದ್ದು, ಮರಾಠ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿಗಾಗಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ಬಗ್ಗೆ ಏನಂದ್ರು?
ಬಸವಕಲ್ಯಾಣದಲ್ಲಿ ಬಿಜೆಪಿ ಪರ ಅಲೆ ಇದೆ. ನಾವು ಗೆದ್ದೇ ಗೆಲ್ತೀವಿ. ಶಿರಾ, ಆರ್ ಆರ್ ನಗರದ ಚುನಾವಣೆಯಲ್ಲಿ ಗೆದ್ದಿದ್ದೇವೆ. ಇನ್ನೂ ಬಿಜೆಪಿ ಪರವಾಗಿರುವ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಗೆಲುವು ಸುಲಭವಾಗಿದೆ. ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ. ಇದೆಲ್ಲ ಸಿಎಂ ವಿವೇಚನೆಗೆ ಬಿಟ್ಟಿದೆ. ಎಲ್ಲ ಶಾಸಕರು ಸಚಿವರಾಗಲು ಅರ್ಹರಿದ್ದಾರೆ. ಶಾಸಕರಿದ್ದವರನ್ನು ಯಾರನ್ನೇ ಬೇಕಾದರೂ ಸಚಿವರನ್ನು ಮಾಡಬಹುದು ಎಂದರು.

ಕೊಪ್ಪಳ: ಅಪ್ರಾಪ್ತೆ ಮೇಲೆ ಅತ್ಯಾಚಾರ, 10 ವರ್ಷ ಕಠಿಣ ಶಿಕ್ಷೆ

ಇನ್ನು ಇದೆ ವೇಳೆ ಬಸವ ಕಲ್ಯಾಣ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿ ಬಿಜೆಪಿ ಗೆಲ್ಲಲಿ ಎನ್ನುವ ಮಾಜಿ ಸಚಿವ ಶಿವರಾಜ್ ತಂಗಡಗಿ ತೃಪ್ತಿಗೊಳಿಸಲು ಆಯೋಗ ಚುನಾವಣೆ ಪ್ರಕ್ರಿಯೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕುಣಿಯಲು ಬಾರದಿದ್ದರೆ ನೆಲ ಡೊಂಕು ಎನ್ನುವಂತಾಗಿದೆ ಕಾಂಗ್ರೆಸ್ ಸ್ಥಿತಿ. ಕಾಂಗ್ರೆಸ್ ತನ್ಬ ಸ್ವಂತಿಕೆ ಕಳೆದುಕೊಂಡಿದೆ ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ