ಆ್ಯಪ್ನಗರ

ಜೈಲಿನಲ್ಲೇ ಕೈದಿ ಮಗುವಿಗೆ ಅದ್ಧೂರಿ ನಾಮಕರಣ: ಪುಟ್ಟ ಅಭಿನಂದನ್‌ಗೆ ಹಾರೈಕೆಗಳ ತೋರಣ

ಆಂಧ್ರ ಮೂಲದ ಜ್ಯೋತಿ ಎಂಬುವರ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಲಾಯಿತು. ಜ್ಯೋತಿ ಪ್ರಕರಣವೊಂದರ ವಿಚಾರಣಾಧೀನ ಕೈದಿಯಾಗಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಜ್ಯೋತಿಗೆ ಮಾರ್ಚ್ 16 ರಂದು ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.

Vijaya Karnataka Web 18 Mar 2019, 11:12 am
ಕೊಪ್ಪಳ: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಮಹಿಳಾ ಕೈದಿಯ ಪುತ್ರನ ನಾಮಕರಣ ಹಾಗೂ ತೊಟ್ಟಿಲು ಶಾಸ್ತ್ರ ಎರಡೂ ಅದ್ಧೂರಿಯಾಗಿ ನಡೆಯಿತು.

ಆಂಧ್ರ ಮೂಲದ ಜ್ಯೋತಿ ಎಂಬುವರ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಲಾಯಿತು. ಜ್ಯೋತಿ ಪ್ರಕರಣವೊಂದರ ವಿಚಾರಣಾಧೀನ ಕೈದಿಯಾಗಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಜ್ಯೋತಿಗೆ ಮಾರ್ಚ್ 16 ರಂದು ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.

ಈ ಹಿನ್ನೆಲೆಯಲ್ಲಿ ನಾಮಕರಣ ಹಾಗೂ ಜನ್ಮ ದಿನಾಚರಣೆ, ತೊಟ್ಟಿಲು ಶಾಸ್ತ್ರ ಎರಡು ಒಟ್ಟೊಟ್ಟಿಗೆ ಮಾಡಲಾಯಿತು. ಶಾಸ್ತ್ರೋಕ್ತವಾಗಿ ಪೂಜಾ ವಿಧಿ- ವಿಧಾನಗಳನ್ನು ಪೂರೈಸಿದ ನಂತರ, ಮಂತ್ರ ಘೋಷಗಳೊಂದಿಗೆ ಮಗುವಿಗೆ ನಾಮಕರಣ ಮಾಡಲಾಯಿತು. ತಾಯಿ ಇಚ್ಛೆಯಂತೆ ಅಭಿನಂದನ್ ಎಂದು ನಾಮಕರಣ ಮಾಡಲಾಯಿತು.

ಜೈಲಿನಲ್ಲಿದ್ದ ವಿಚಾರಣಾಧೀನ ಮಹಿಳಾ ಕೈದಿಗಳು ಗ್ರಾಮೀಣ ಸೊಗಡಿನ ಜೋಗುಳ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಆರತಿ ಬೆಳಗಿ ತಾಯಿ, ಮಗುವಿಗೆ ಹಾರೈಸಿದರು.

ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ, ಸೀನಿಯರ್ ಸಿವಿಲ್ ಜಡ್ಜ್ ಟಿ.ಶ್ರೀನಿವಾಸ್, ಜೈಲಿನ ಅಧೀಕ್ಷಕ ಕೊಟ್ರೇಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಾಮಕರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ವರದಿ Bangalore Mirror ತಾಣದಲ್ಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ