ರವಿ ಪಿ.ನಾಯಕ, ಗಂಗಾವತಿ
ನಿಫಾ ವೈರಸ್ ಇದೀಗ ಎಲ್ಲರಲ್ಲಿ ಆತಂಕ ಸೃಷ್ಟಿಸಿರುವ ಮಧ್ಯೆಯೇ ಗಂಗಾವತಿ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯ ಬಾವಲಿಗಳಿರುವುದು ಜನಸಾಮಾನ್ಯರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ.
ಇಲ್ಲಿನ ಗಾಂಧಿ ವೃತ್ತದ ಕೋಟೆ ಆಂಜನೇಯ ದೇವಸ್ಥಾನದ ಸುತ್ತಲಿನ ಮರಗಳಲ್ಲಿ ಹಲವು ವರ್ಷಗಳಿಮದ ಸುಮಾರು 10 ಸಾವಿರಕ್ಕೂ ಹೆಚ್ಚು ಬಾವಲಿಗಳು ವಾಸವಾಗಿವೆ. ಬೇವು, ಅರಳಿ ಮರದ ತುಂಬೆಲ್ಲ ಬಾವಲಿಗಳು ಜೋತು ಬಿದ್ದಿರುವುದು ಕಾಣುತ್ತದೆ. ಸಂಜೆಯಾಗುತ್ತಿದ್ದಂತೆಯೇ ನಗರದ ತುಂಬೆಲ್ಲಾ ಹಾರಾಡುವ ಬಾವಲಿಗಳು ನಿಫಾ ವೈರಸ್ ಹರಡುವ ಭೀತಿ ಸೃಷ್ಟಿಸಿವೆ.
ಬಾವಲಿ ಉತ್ಪತ್ತಿ ತಾಣ: ದೇವಸ್ಥಾನ ಸುತ್ತಲೂ ವಾಸಿಸುವ ಮನೆ, ಅಂಗಡಿ-ಮುಂಗಟ್ಟುಗಳ ಮಾಲೀಕರು ಬಾವಲಿಗಳಿಂದ ಇದೀಗ ಆತಂಕಪಡುವಂತಾಗಿದೆ. ಆಗಾಗ್ಗೆ ವಿದ್ಯುತ್ ಶಾರ್ಟ್ಸಕ್ರ್ಯೂಟ್ನಿಂದಾಗಿ ಬಾವಲಿಗಳು ಮೃತಪಡುತ್ತಿದ್ದು, ಇವುಗಳನ್ನು ಬೀದಿ ನಾಯಿಗಳು ತಿನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬೆಳವಣಿಗೆಗಳು ನಿಫಾ ಬಗ್ಗೆ ಮತ್ತಷ್ಟು ಭಯಗೊಳ್ಳುವಂತೆ ಮಾಡಿವೆ. ನಗರದ ನಾನಾ ಕಡೆಗಳಲ್ಲಿರುವ ಪುರಾತನ ದೇವಸ್ಥಾನ, ಪಾಳು ಬಿದ್ದಿರುವ ಸ್ಮಾರಕ ಹಾಗೂ ಸಮೀಪದ ಪಾಪಯ್ಯ ಟನೆಲ್ ಸುರಂಗ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯ ಬಾವಲಿಗಳಿವೆ. ಬಾಳೆ, ಮಾವು, ಹುಣಸೆ, ಸಪೋಟಾ ಸೇರಿ ನಾನಾ ಹಣ್ಣುಗಳ ತೋಟಕ್ಕೆ ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿರುವ ಬಾವಲಿಗಳು ನಿಫಾ ವೈರಸ್ ಹರಡಲು ಕಾರಣವಾಗುತ್ತಿವೆ ಎಂಬ ಆತಂಕ ಸೃಷ್ಟಿಸಿವೆ.
ಹಂದಿಗಳ ಹಾವಳಿ: ಈ ಮಧ್ಯೆ ನಗರ ಪ್ರದೇಶ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಸಮಾರು 15 ಸಾವಿರಕ್ಕೂ ಹೆಚ್ಚು ಹಂದಿಗಳಿವೆ. ಇವುಗಳಿಂದಲೂ ನಾನಾ ಸಾಂಕ್ರಾಮಿಕ ರೋಗ, ವೈರಸ್ಗಳು ಹರಡುವ ಭೀತಿ ಎದುರಾಗಿದೆ. ಪಶು ಇಲಾಖೆ ಅಂಕಿ ಸಂಖ್ಯೆಯಲ್ಲಿ 8 ರಿಂದ 10 ಸಾವಿರ ಹಂದಿಗಳು ನಗರದಲ್ಲಿದ್ದು, ಗಂಗಾವತಿ ನಗರದಲ್ಲಿ ಹಂದಿ ಮತ್ತು ಬಾವಲಿಗಳ ಸಂಖ್ಯೆ ಹೆಚ್ಚಾಗಿರುವ ಪರಿಣಾಮ ನಿಫಾ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ.
------
ನಗರದಲ್ಲಿ ಬಾವಲಿಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇವುಗಳ ನಿಯಂತ್ರಣ ಕಷ್ಟವಾಗಿದೆ. ಇದೀಗ ಕೇರಳ ಸೇರಿ ನಾನಾ ಕಡೆ ನಿಫಾ ವೈರಸ್ ಹರಡಿರುವುದರಿಂದ ನಗರದ ಜನತೆಗೂ ಬಾವಲಿಗಳಿಂದ ರೋಗ ಬರುವ ಆತಂಕ ಮನೆ ಮಾಡಿದೆ.
-ರೇವಣಸಿದ್ದಪ್ಪ, ಚಾಂದ್ ಸಾಬ್, ಗಂಗಾವತಿ.
------
ಬಾವಲಿ ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳಿಂದ ವೈರಸ್ಗಳು ಹರಡುತ್ತಿರುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ಬಂದಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಹಂದಿಗಳು ಸಂಖ್ಯೆ ಹೆಚ್ಚು ಇದೆ. ಅವುಗಳಿಂದ ಜನರು ಸುರಕ್ಷಿತವಾಗಿರುವ ಬಗ್ಗೆ ಹಂದಿ ಸಾಕಣೆಧಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
-ಡಾ.ಪಿ.ಎಂ.ಮಲ್ಲಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ, ಗಂಗಾವತಿ.
ನಿಫಾ ವೈರಸ್ ಇದೀಗ ಎಲ್ಲರಲ್ಲಿ ಆತಂಕ ಸೃಷ್ಟಿಸಿರುವ ಮಧ್ಯೆಯೇ ಗಂಗಾವತಿ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯ ಬಾವಲಿಗಳಿರುವುದು ಜನಸಾಮಾನ್ಯರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ.
ಇಲ್ಲಿನ ಗಾಂಧಿ ವೃತ್ತದ ಕೋಟೆ ಆಂಜನೇಯ ದೇವಸ್ಥಾನದ ಸುತ್ತಲಿನ ಮರಗಳಲ್ಲಿ ಹಲವು ವರ್ಷಗಳಿಮದ ಸುಮಾರು 10 ಸಾವಿರಕ್ಕೂ ಹೆಚ್ಚು ಬಾವಲಿಗಳು ವಾಸವಾಗಿವೆ. ಬೇವು, ಅರಳಿ ಮರದ ತುಂಬೆಲ್ಲ ಬಾವಲಿಗಳು ಜೋತು ಬಿದ್ದಿರುವುದು ಕಾಣುತ್ತದೆ. ಸಂಜೆಯಾಗುತ್ತಿದ್ದಂತೆಯೇ ನಗರದ ತುಂಬೆಲ್ಲಾ ಹಾರಾಡುವ ಬಾವಲಿಗಳು ನಿಫಾ ವೈರಸ್ ಹರಡುವ ಭೀತಿ ಸೃಷ್ಟಿಸಿವೆ.
ಬಾವಲಿ ಉತ್ಪತ್ತಿ ತಾಣ: ದೇವಸ್ಥಾನ ಸುತ್ತಲೂ ವಾಸಿಸುವ ಮನೆ, ಅಂಗಡಿ-ಮುಂಗಟ್ಟುಗಳ ಮಾಲೀಕರು ಬಾವಲಿಗಳಿಂದ ಇದೀಗ ಆತಂಕಪಡುವಂತಾಗಿದೆ. ಆಗಾಗ್ಗೆ ವಿದ್ಯುತ್ ಶಾರ್ಟ್ಸಕ್ರ್ಯೂಟ್ನಿಂದಾಗಿ ಬಾವಲಿಗಳು ಮೃತಪಡುತ್ತಿದ್ದು, ಇವುಗಳನ್ನು ಬೀದಿ ನಾಯಿಗಳು ತಿನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬೆಳವಣಿಗೆಗಳು ನಿಫಾ ಬಗ್ಗೆ ಮತ್ತಷ್ಟು ಭಯಗೊಳ್ಳುವಂತೆ ಮಾಡಿವೆ. ನಗರದ ನಾನಾ ಕಡೆಗಳಲ್ಲಿರುವ ಪುರಾತನ ದೇವಸ್ಥಾನ, ಪಾಳು ಬಿದ್ದಿರುವ ಸ್ಮಾರಕ ಹಾಗೂ ಸಮೀಪದ ಪಾಪಯ್ಯ ಟನೆಲ್ ಸುರಂಗ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯ ಬಾವಲಿಗಳಿವೆ. ಬಾಳೆ, ಮಾವು, ಹುಣಸೆ, ಸಪೋಟಾ ಸೇರಿ ನಾನಾ ಹಣ್ಣುಗಳ ತೋಟಕ್ಕೆ ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿರುವ ಬಾವಲಿಗಳು ನಿಫಾ ವೈರಸ್ ಹರಡಲು ಕಾರಣವಾಗುತ್ತಿವೆ ಎಂಬ ಆತಂಕ ಸೃಷ್ಟಿಸಿವೆ.
ಹಂದಿಗಳ ಹಾವಳಿ: ಈ ಮಧ್ಯೆ ನಗರ ಪ್ರದೇಶ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಸಮಾರು 15 ಸಾವಿರಕ್ಕೂ ಹೆಚ್ಚು ಹಂದಿಗಳಿವೆ. ಇವುಗಳಿಂದಲೂ ನಾನಾ ಸಾಂಕ್ರಾಮಿಕ ರೋಗ, ವೈರಸ್ಗಳು ಹರಡುವ ಭೀತಿ ಎದುರಾಗಿದೆ. ಪಶು ಇಲಾಖೆ ಅಂಕಿ ಸಂಖ್ಯೆಯಲ್ಲಿ 8 ರಿಂದ 10 ಸಾವಿರ ಹಂದಿಗಳು ನಗರದಲ್ಲಿದ್ದು, ಗಂಗಾವತಿ ನಗರದಲ್ಲಿ ಹಂದಿ ಮತ್ತು ಬಾವಲಿಗಳ ಸಂಖ್ಯೆ ಹೆಚ್ಚಾಗಿರುವ ಪರಿಣಾಮ ನಿಫಾ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ.
------
ನಗರದಲ್ಲಿ ಬಾವಲಿಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇವುಗಳ ನಿಯಂತ್ರಣ ಕಷ್ಟವಾಗಿದೆ. ಇದೀಗ ಕೇರಳ ಸೇರಿ ನಾನಾ ಕಡೆ ನಿಫಾ ವೈರಸ್ ಹರಡಿರುವುದರಿಂದ ನಗರದ ಜನತೆಗೂ ಬಾವಲಿಗಳಿಂದ ರೋಗ ಬರುವ ಆತಂಕ ಮನೆ ಮಾಡಿದೆ.
-ರೇವಣಸಿದ್ದಪ್ಪ, ಚಾಂದ್ ಸಾಬ್, ಗಂಗಾವತಿ.
------
ಬಾವಲಿ ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳಿಂದ ವೈರಸ್ಗಳು ಹರಡುತ್ತಿರುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ಬಂದಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಹಂದಿಗಳು ಸಂಖ್ಯೆ ಹೆಚ್ಚು ಇದೆ. ಅವುಗಳಿಂದ ಜನರು ಸುರಕ್ಷಿತವಾಗಿರುವ ಬಗ್ಗೆ ಹಂದಿ ಸಾಕಣೆಧಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
-ಡಾ.ಪಿ.ಎಂ.ಮಲ್ಲಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ, ಗಂಗಾವತಿ.