ಆ್ಯಪ್ನಗರ

‘ರಾಷ್ಟ್ರೀಯತೆ ಹೆಸರಿನಲ್ಲಿ ದ್ವೇಷ ಭಾವನೆ ಸರಿಯಲ್ಲ’

ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಎಬಿವಿಪಿ ತಾಲೂಕು ಘಟಕ ’ದೇಶ ಮೊದಲು’ ಉಪನ್ಯಾಸ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಿತ್ತು.

ವಿಕ ಸುದ್ದಿಲೋಕ 31 Mar 2016, 7:20 am
ಕುಷ್ಟಗಿ; ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಎಬಿವಿಪಿ ತಾಲೂಕು ಘಟಕ ’ದೇಶ ಮೊದಲು’ ಉಪನ್ಯಾಸ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಿತ್ತು.
Vijaya Karnataka Web not good for harted feelings
‘ರಾಷ್ಟ್ರೀಯತೆ ಹೆಸರಿನಲ್ಲಿ ದ್ವೇಷ ಭಾವನೆ ಸರಿಯಲ್ಲ’


ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಮಾತನಾಡಿ, ದೇಶ ಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ರಾಷ್ಟ್ರೀಯತೆ ಹೆಸರಿನಲ್ಲಿ ದ್ವೇಷ ಬೆಳೆಸಬಾರದು. ದೇಶ ಎಲ್ಲರಿಗೂ ಸೇರಿದೆ. ಸಂವಿಧಾನದಲ್ಲಿ ತಿಳಿಸಿರುವಂತೆ ಎಲ್ಲರೂ ಸರಿಸಮಾನರು. ಇಲ್ಲಿ ಧರ್ಮ, ಭಾಷೆ, ಪ್ರಾಂತಗಳ ಬೇಧಭಾವ ಇಲ್ಲ. ದೇಶ ಪ್ರೇಮದ ಹೆಸರಿನಲ್ಲಿ ಕೆಲ ಅನುಮಾನಗಳನ್ನು ಹುಟ್ಟುಹಾಕುವುದನ್ನು ಬಿಟ್ಟು ದೇಶವನ್ನು ಎಲ್ಲರೂ ಪ್ರೀತಿಸೋಣ. ಹುಸಿ ವಾದ, ಹುಸಿ ದೇಶಭಕ್ತಿಯನ್ನು ಬೆಂಬಲಿಸಿದರೆ ದೇಶದ ಅಭಿವದ್ಧಿ ಸಾಧ್ಯವಿಲ್ಲ ಎಂದರು. ಎಬಿವಿಪಿಯ ಕಲಬುರಗಿ ವಿಭಾಗದ ಪ್ರಚಾರಕ ಬಾಗಣ್ಣ ವಿಶೇಷ ಉಪನ್ಯಾಸ ನೀಡಿದರು. ಪುರಸಭೆ ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ ಉದ್ಘಾಟಿಸಿದರು. ಉಪನ್ಯಾಸಕ ಲೋಹಿತ್ ಆರ್.ನಾಯಕ, ಮುಖಂಡ ಪ್ರಕಾಶ ತಾಳಕೇರಿ, ಎಬಿವಿಪಿ ತಾಲೂಕು ಘಟಕದ ಅಧ್ಯಕ್ಷ ನವೀನ್ ಕೆಂಗಾರಿ ವೇದಿಕೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ