ಗಂಗಾವತಿ; ಮನೆಯ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ ಹೇಳಿದರು.
ನಗರದ ಹಿರೇಜಂತಕಲ್ನ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಬುಧವಾರ ನಗರಸಭೆ ಹಾಗೂ ಕರುಣಾ ರೂರಲ್ ಡೆವಲಪಮೆಂಟ್ ಸೊಸೈಟಿ ಸಹಯೋಗದೊಂದಿಗೆ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಸ್ವಸಹಾಯ ಸಂಘಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರೆಲ್ಲರೂ ಕೈ ಜೋಡಿಸಬೇಕು ಆಗ ಮಾತ್ರ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ, ನಗರಸಭೆ ಸದಸ್ಯರಾದ ಪರಮೇಶ್ವರ, ರಾಘವೇಂದ್ರ ಶ್ರೇಷ್ಠಿ, ಉಪನ್ಯಾಸಕಿ, ಲಲಿತ ಬಾವಿಕಟ್ಟಿ, ಸಮುದಾಯ ಸಂಘಟಕಿ ಸರಸ್ವತಿ ಹಾಗೂ ಇತರರಿದ್ದರು.