ಆ್ಯಪ್ನಗರ

‘ಬೆಳೆ ನಷ್ಟ ಪರಿಹಾರ ನೀಡಿ’: ಡಿಸಿಎಂ ಸವದಿ ಮುಂದೆ ಕಣ್ಣೀರಿಟ್ಟ ರೈತ

ಧಾರವಾಡ ಹೈಕೋರ್ಟ್ ಬೆಳೆ ನಷ್ಟ ಪರಿಹಾರ ವಿತರಿಸಲು ಆದೇಶಿಸಿದೆ. ಆದರೆ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ವಿತರಿಸುತ್ತಿಲ್ಲ. ಬೆಳೆ ನಷ್ಟ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು‌ ರೈತ ಮಂಜುನಾಥ್‌ ಸಚಿವರನ್ನು ಒತ್ತಾಯಿಸಿದರು.

Vijaya Karnataka Web 1 Nov 2019, 1:31 pm
ಕೊಪ್ಪಳ: ಬೆಳೆ ನಷ್ಟ ಬಾಕಿ ಪರಿಹಾರ ವಿತರಿಸುವಂತೆ ಒತ್ತಾಯಿಸಿ ರೈತರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಎದುರು ಕಣ್ಣೀರಿಟ್ಟ ಘಟನೆ ನಡೆಯಿತು.
Vijaya Karnataka Web LaxmanSavadi


ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸವದಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ರೈತ ಮಂಜುನಾಥ್ ಕಣ್ಣೀರಿಟ್ಟು ಮನವಿ ಸಲ್ಲಿಸಿದರು.

ಕುಷ್ಟಗಿ ತಾಲೂಕಿನ ಹುಲಿಯಾಪುರ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ 1985 ರಲ್ಲಿ ಸರಕಾರ ರೈತರ ಭೂಮಿ ಸ್ವಾಧೀನ ಪಡಿಸಿಕೊಂಡಿದೆ. ಕೆರೆಯ ನೀರಿನಿಂದ ಸಾಕಷ್ಟು ಪ್ರಮಾಣದ ಬೆಳೆ ನಷ್ಟವಾಗಿದೆ. ಬೆಳೆ ನಷ್ಟಕ್ಕೆ ಸುಮಾರು 35 ವರ್ಷದಿಂದ 45 ರೈತರು ಪರಿಹಾರ ಕೇಳುತ್ತಿದ್ದು, ಈವರೆಗೆ ಪರಿಹಾರ ವಿತರಿಸಿಲ್ಲ ಎಂಬುದಾಗಿ ಮಂಜುನಾಥ್‌ ಅಳಲು ತೋಡಿಕೊಂಡರು.

ಧಾರವಾಡ ಹೈಕೋರ್ಟ್ ಬೆಳೆ ನಷ್ಟ ಪರಿಹಾರ ವಿತರಿಸಲು ಆದೇಶಿಸಿದೆ. ಆದರೆ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ವಿತರಿಸುತ್ತಿಲ್ಲ. ಬೆಳೆ ನಷ್ಟ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು‌ ಮಂಜುನಾಥ್‌ ಸಚಿವರನ್ನು ಒತ್ತಾಯಿಸಿದರು.

ರೈತರ ಮನವಿ ಆಲಿಸಿದ ಸಚಿವರು, ರೈತನಿಗೆ ಸಮಾಧಾನ ಪಡಿಸಿ ನಿನಗೆ ಪ್ರಚಾರ ಬೇಕೋ? ಪರಿಹಾರ ಬೇಕೋ? ಎಂದು ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ