ಆ್ಯಪ್ನಗರ

ಮತದಾನ ಶಾಂತಿಯುತ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಶಾಂತಿಯುತವಾಗಿ ನಡೆಯಿತು.

Vijaya Karnataka 24 Apr 2019, 5:00 am
ಗಂಗಾವತಿ : ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಶಾಂತಿಯುತವಾಗಿ ನಡೆಯಿತು.
Vijaya Karnataka Web KPL-KPL23CM05


ಗಂಗಾವತಿ ವಿಧಾನಸಭಾ ಕ್ಷೇತ್ರದ 233 ಮತಗಟ್ಟೆಯಲ್ಲಿಯೂ ಮತದಾನ ನಡೆಯಿತು. ಆದರೆ, ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳ ಆರಂಭದಲ್ಲಿ ದೋಷಗಳು ಕಂಡು ಬಂದವು. ಕೆಲ ನಿಮಿಷಗಳಲ್ಲಿಯೇ ದೋಷ ಸರಿಪಡಿಸಿಕೊಂಡು ಮತದಾರರಿಗೆ ಮತದಾನ ಮಾಡಲು ಅನುವು ಮಾಡಿಕೊಡಲಾಯಿತು. ಇನ್ನೂ ಕೆಲವು ಕಡೆಗಳಲ್ಲಿ ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ತರಬೇತಿ ಕೊರತೆಯಿಂದಾಗಿ ಮತಯಂತ್ರಗಳನ್ನು ಆರಂಭಿಸಲು ಕಷ್ಟ ಪಟ್ಟರು. ಹೀಗಾಗಿ ಮತದಾನ ವಿಳಂಬ ಮಾಡಲಾಯಿತು. ಆದರೆ ಯಾವುದೇ ರೀತಿಯ ಅವಘಡಗಳು ಸಂಭವಿದೆ ಶಾಂತಿಯುತವಾಗಿ ಮತದಾನ ನಡೆಯಿತು.

ಮತದಾನ ಮಂದ: ಚುನಾವಣೆ ವೇಳೆಯಲ್ಲಿ ಮತದಾÃರ ಪಾತ್ರ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಆದರೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಹೇಳಿಕೊಳ್ಳುವ ಮಟ್ಟದಲ್ಲಿ ಮತದಾನ ಮಾಡಲು ಬಾರದೆ ನಿಧಾನಗತಿಯಲ್ಲಿ ಮತದಾನ ನಡೆಯಿತು.

ಬೆಳಗ್ಗೆ 10 ಗಂಟೆಯಾದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳ ಬಳಿ ಸುಳಿಯಲಿಲ್ಲ. ಇನ್ನೂ 11 ಗಂಟೆಯ ವೇಳೆಗೆ ಕೊಂಚ ಏರಿಕೆ ಕಂಡು ಮಧ್ಯಾಹ್ನ ವೇಳೆಗೆ ಮತ್ತೆ ನಿಧಾನಗತಿ ತೆಗೆದುಕೊಂಡಿತು. ಪುನಃ ಸಂಜೆ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು.

ಗಣ್ಯರು ಮತದಾನ: ನಗರದ ಶಾಸಕ ಪರಣ್ಣ ಮುನವಳ್ಳಿಯವರು ಟಿಎಪಿಎಂಸಿಯಲ್ಲಿ ತೆಗೆದಿರುವ ಮತಗಟ್ಟೆಯಲ್ಲಿ, ಮಾಜಿ ಸಂಸದ ಎಚ್‌.ಜಿ. ರಾಮುಲು ಜೆಸ್ಕಾಂ ಇಲಾಖೆ ಕಚೇರಿಯಲ್ಲಿ ತೆರೆದಿರುವ ಮತಗಟ್ಟೆಯಲ್ಲಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ನೀಲಕಂಠೇಶ್ವರ ಸರ್ಕಲ್‌ನ ಪಬ್ಲಿಕ್‌ ಕ್ಲಬ್‌ ಮೈದಾನದಲ್ಲಿ ತೆರೆದಿರುವ ಮತಗಟ್ಟೆಯಲ್ಲಿ, ಜೆಡಿಎಸ್‌ ಪಕ್ಷ ದ ರಾಜ್ಯ ಉಪಾಧ್ಯಕ್ಷ ಎಚ್‌.ಆರ್‌.ಶ್ರೀನಾಥ ಜೆಸ್ಕಾಂ ಇಲಾಖೆ ಕಚೇರಿಯ ಮತಗಟ್ಟೆಯಲ್ಲಿ, ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಎಪಿಎಂಸಿಯಲ್ಲಿ ತೆರೆದಿರುವ ಮತಗಟ್ಟೆಯಲ್ಲಿ, ಮಾಜಿ ಸಂಸದ ಶಿಮರಾಮಗೌಡ, ಜಿ.ಪಂ ಎಂಜಿನಿಯರ್‌ ಉಪ ವಿಭಾಗ ಕಚೇರಿಯಲ್ಲಿ ತೆರೆದಿರುವ ಮತಗಟ್ಟೆಯಲ್ಲಿ, ಇನ್ನು ಲೋಕಸಭಾ ಚುನಾವಣೆಯ ಐಕಾನ್‌ ಹಾಗಿರುವ ಗಂಗಾವತಿ ಪ್ರಾಣೇಶ್‌ ಅವರು ಜಯನಗರದಲ್ಲಿ ತೆರೆದಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ