ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸರು ಅಂದರ್
ಕೋಳೂರು ಗ್ರಾಮದ ಬಳಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದ ವಾಹನ ಮಾಲೀಕನಿಗೆ ಹಣದ ಬೇಡಿಕೆ ಒಡ್ಡಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
Vijaya Karnataka Web 18 Oct 2017, 2:17 pm
ಕೊಪ್ಪಳ: ತಾಲೂಕಿನ ಕೋಳೂರು ಗ್ರಾಮದ ಬಳಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದ ವಾಹನ ಮಾಲೀಕನಿಗೆ ಹಣದ ಬೇಡಿಕೆ ಒಡ್ಡಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪಡೆಯ ಮುಖ್ಯಪೇದೆ ಸುಂಕಪ್ಪ, ಪೇದೆ ಶಿವಕುಮಾರ ಬಂಧಿತರು. ಬಂಧಿತರು ಜಿಲ್ಲಾ ವಿಶೇಷ ಘಟಕ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು.
ಹೊರತಟ್ನಾಳ ಗ್ರಾಮದ ಚಂದ್ರೇಗೌಡ ಎಂಬವರು ವಾಹನದಲ್ಲಿ ಮರಳು ತುಂಬಿಕೊಂಡು ತೆರಳುತ್ತಿದ್ದರು. ಇಬ್ಬರು ಪೊಲೀಸರು ಸ್ಥಳಕ್ಕೆ ಆಗಮಿಸಿ ಚಂದ್ರೇಗೌಡರಿಗೆ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟಿದ್ದರು
ಚಂದ್ರೇಗೌಡ ದೂರು ಆಧರಿಸಿ ಐಪಿಸಿ ಸೆಕ್ಷನ್ 341, 504, 384 ಅಡಿ ಪ್ರಕರಣ ದಾಖಲಿಸಿ ಸುಂಕಪ್ಪ ಹಾಗೂ ಶಿವಕುಮಾರ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪಡೆಯ ಮುಖ್ಯಪೇದೆ ಸುಂಕಪ್ಪ, ಪೇದೆ ಶಿವಕುಮಾರ ಬಂಧಿತರು. ಬಂಧಿತರು ಜಿಲ್ಲಾ ವಿಶೇಷ ಘಟಕ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು.
ಹೊರತಟ್ನಾಳ ಗ್ರಾಮದ ಚಂದ್ರೇಗೌಡ ಎಂಬವರು ವಾಹನದಲ್ಲಿ ಮರಳು ತುಂಬಿಕೊಂಡು ತೆರಳುತ್ತಿದ್ದರು. ಇಬ್ಬರು ಪೊಲೀಸರು ಸ್ಥಳಕ್ಕೆ ಆಗಮಿಸಿ ಚಂದ್ರೇಗೌಡರಿಗೆ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟಿದ್ದರು
ಚಂದ್ರೇಗೌಡ ದೂರು ಆಧರಿಸಿ ಐಪಿಸಿ ಸೆಕ್ಷನ್ 341, 504, 384 ಅಡಿ ಪ್ರಕರಣ ದಾಖಲಿಸಿ ಸುಂಕಪ್ಪ ಹಾಗೂ ಶಿವಕುಮಾರ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.