ಆ್ಯಪ್ನಗರ

ಸಹಕಾರ ಸಂಘದ ಚುನಾವಣೆ ಮುಂದೂಡಿ

ಪ್ರಾಥಮಿಕ ಶಾಲಾ ಶಿಕ್ಷ ಕರ ಪತ್ತಿನ ಸಹಕಾರ ಸಂಘದ ಚುನಾವಣೆ ಮುಂದೂಡುವಂತೆ ಒತ್ತಾಯಿಸಿ ನಗರದ ವಾಲ್ಮೀಕಿ ಸಮುದಾಯ ಭವನ ಬಳಿಯ ಸಹಕಾರ ಸಂಘದ ಕಚೇರಿ ಎದುರು ಶಿಕ್ಷಕರು ಗುರುವಾರ ಧರಣಿ ನಡೆಸಿದರು.

Vijaya Karnataka 12 Jan 2019, 5:00 am
ಕೊಪ್ಪಳ : ಪ್ರಾಥಮಿಕ ಶಾಲಾ ಶಿಕ್ಷ ಕರ ಪತ್ತಿನ ಸಹಕಾರ ಸಂಘದ ಚುನಾವಣೆ ಮುಂದೂಡುವಂತೆ ಒತ್ತಾಯಿಸಿ ನಗರದ ವಾಲ್ಮೀಕಿ ಸಮುದಾಯ ಭವನ ಬಳಿಯ ಸಹಕಾರ ಸಂಘದ ಕಚೇರಿ ಎದುರು ಶಿಕ್ಷಕರು ಗುರುವಾರ ಧರಣಿ ನಡೆಸಿದರು.
Vijaya Karnataka Web postponement of co operative elections
ಸಹಕಾರ ಸಂಘದ ಚುನಾವಣೆ ಮುಂದೂಡಿ


ಪ್ರಾಥಮಿಕ ಶಾಲಾ ಶಿಕ್ಷ ಕರ ಪತ್ತಿನ ಸಹಕಾರ ಸಂಘದಲ್ಲಿ 1,187 ಸದಸ್ಯರಿದ್ದಾರೆ. 541 ಸದಸ್ಯರಿಗೆ ಮತದಾನ ಮಾಡುವ ಅವಕಾಶ ನೀಡಲಾಗಿದೆ. 646 ಸದಸ್ಯರನ್ನು ಅನರ್ಹಗೊಳಿಸಿದ್ದಾರೆ. ಮೂರು ಸಲ ಮಹಾಸಭೆಗೆ ಹಾಜರಾಗಿಲ್ಲ ಎಂಬ ಉತ್ತರ ನೀಡಿದ್ದಾರೆ. ಆದರೆ ಸಂಘದ ಸದಸ್ಯರಿಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಆಡಳಿತ ಮಂಡಳಿಯವರು ನೀಡಿಲ್ಲ. ವಾರ್ಷಿಕ ಮಹಾಸಭೆಗೆ ಹಾಜರಾಗಲು ಕಳುಹಿಸುವ ಅಡಾವೆ ಪತ್ರಿಕೆಯಲ್ಲಿ ಮಾಹಿತಿ ನಮೂದಿಸಿಲ್ಲ. ಅಲ್ಲದೇ ಸಹಕಾರ ಸಂಘದ 39ಎಎ ನಿಯಮ 13ಡಿ 4ರನ್ವಯ ಚುನಾವಣಾ ದಿನಾಂಕದ ಮುನ್ನ 60 ದಿನಗಳ ಒಳಗೆ ಕರಡು ಮತದಾರರ ಪಟ್ಟಿ ಪ್ರಕಟಿಸಬೇಕು. ಕರಡು ಮತದಾರರ ಪಟ್ಟಿ ನಂತರ ಅದಕ್ಕೆ ಸಂಬಧಿಸಿದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆದರೆ ಈ ಯಾವುದೇ ನಿಯಮ ಪಾಲಿಸಿಲ್ಲ. ಇದರನ್ವಯ ಪತ್ತಿನ ಸಹಕಾರ ಸಂಘದ ಚುನಾವಣೆ ಮುಂದೂಡಬೇಕು ಎಂದು ಒತ್ತಾಯಿಸಿದರು.

ಬೀರಪ್ಪ ಅಂಡಗಿ ಚಿಲವಾಡಗಿ, ಶಿವಪ್ಪ ಜೋಗಿ, ಪ್ರಭು ಕಿಡದಾಳ, ನಾಗರಾಜ ಕುಷ್ಟಗಿ, ಶ್ರೀಪತಿ ಹಳ್ಳಿಕೇರಿ, ರಾಮಣ್ಣ ಕಳ್ಳಿಮನಿ, ಅಂದಪ್ಪ ಬೋಳರೆಡ್ಡಿ, ಮಂಜುನಾಥ ಎಚ್‌., ಚಂದ್ರು ಹೆಳವರ್‌,ಯಲ್ಲಪ್ಪ ಚಿಜ್ಜೇರಿ, ಹನುಮಂತಪ್ಪ ಕುರಿ, ಗುರುರಾಜ ಕುಲಕರ್ಣಿ, ಅಲಿ ಮಂಗಳಾಪುರ, ಅಣ್ಣಪ್ಪ ಹಳ್ಳಿ, ಮಲ್ಲೇಶ ದೂಳಮ್ಮನವರ್‌, ಹನುಮಂತ ಹಳ್ಳಿ, ಗೋಣೇಶ ಮೇಗಾಡೆ, ಇಬ್ರಾಹಿಂಸಾಬ್‌, ಜಗದೀಶ, ಬಸವರಾಜ ಜೋಗಿನ್‌, ಯಲ್ಲಪ್ಪ, ರವಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ