ಆ್ಯಪ್ನಗರ

ಅಕಾಲಿಕ ಮಳೆಯ ಆರ್ಭಟ

ನಗರ ಸೇರಿದಂತೆ ತಾಲೂಕಿನ ನಾನಾಕಡೆ ಸಿಡಿಲು, ಗುಡುಗು ಸಹಿತ ಅಕಾಲಿಕ ಮಳೆ ಭಾನುವಾರ ಸಂಜೆ ಸುರಿಯಿತು.

Vijaya Karnataka 12 Feb 2018, 7:25 pm

ಕೊಪ್ಪಳ: ನಗರ ಸೇರಿದಂತೆ ತಾಲೂಕಿನ ನಾನಾಕಡೆ ಸಿಡಿಲು, ಗುಡುಗು ಸಹಿತ ಅಕಾಲಿಕ ಮಳೆ ಭಾನುವಾರ ಸಂಜೆ ಸುರಿಯಿತು.

ಸಂಜೆ 6 ಗಂಟೆಗೆ ಆರಂಭಗೊಂಡ ಮಳೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಗರದ ಕೇಂದ್ರಿಯ ಬಸ್‌ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ಮೇಲೆ ನೀರು ಹರಿಯಿತು. ನಗರದ ಕೆಲ ಭಾಗಗಳಲ್ಲಿ ವಿದ್ಯುತ್‌ ಸ್ಥಗಿತಗೊಂಡಿತ್ತು. ಬಸ್‌ ನಿಲ್ದಾಣದ ಮುಂದಿನ ಬೀದಿ ಬದಿ ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸುವಂತಾಯಿತು. ತಾಲೂಕಿನ ಬೆಟಗೇರಿ, ಭಾಗ್ಯನಗರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬಾರಿ ಮಳೆ ಸುರಿಯಿತು. ಯಲಬುರ್ಗಾ ತಾಲೂಕಿನ ಕುಕನೂರು, ಭಾನಾಪುರ ಸೇರಿದಂತೆ ಸುತ್ತಮುತ್ತ ಮಳೆಯಾದ ವರದಿಯಾಗಿದೆ. ಮಳೆಯ ಆರ್ಭಟಕ್ಕೆ ಬಿಳಿಜೋಳ, ಕಡಲೆ ಸೇರಿದಂತೆ ನಾನಾ ಬೆಳೆಗೆ ಹಾನಿ ಭೀತಿ ರೈತರನ್ನು ಕಾಡುತ್ತಿದೆ. ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ